ಡಾ. ಮುರಳೀಧರ ಬಿ.ಎಲ್​ ಅವರ ಮನಸು ಮನಸಿನ ಮಾತು ಕವನ ಸಂಕಲನ ಬಿಡುಗಡೆ

author-image
Ganesh Nachikethu
Updated On
ಡಾ. ಮುರಳೀಧರ ಬಿ.ಎಲ್​ ಅವರ ಮನಸು ಮನಸಿನ ಮಾತು ಕವನ ಸಂಕಲನ ಬಿಡುಗಡೆ
Advertisment
  • ಡಾ. ಮುರಳೀಧರ ಬಿ.ಎಲ್​​. ಬರೆದಿರುವ ಮನಸು ಮನಸಿನ ಮಾತು
  • ಮನಸು ಮನಸಿನ ಮಾತು ಕವನ ಸಂಕಲನ ಬಿಡುಗಡೆ ಮಾಡಲಾಗಿದೆ
  • ಹಿರಿಯ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯಿಂದ ಬಿಡುಗಡೆ!

ಡಾ. ಮುರಳೀಧರ ಬಿ.ಎಲ್​​. ಬರೆದಿರುವ ಮನಸು ಮನಸಿನ ಮಾತು ಕವನ ಸಂಕಲನವನ್ನು ಹಿರಿಯ ಸಾಹಿತಿ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಬಿಡುಗಡೆ ಮಾಡಿದರು. ಬೆಂಗಳೂರಿನ ನ್ಯಾಷನಲ್​ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಈ ಕಾರ್ಯಕ್ರಮ ನಡೆಯಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಹೊಸ ತಲೆಮಾರಿನ ಕವಿಯ ಬರಹ ವಿಭಿನ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರೀತಿ ಪ್ರೇಮ, ಪ್ರಕೃತಿ, ತಂದೆ ತಾಯಿಯ ವಾತ್ಸಲ್ಯ, ವ್ಯವಸ್ಥೆಯ ಪ್ರಶ್ನಿಸುವ ಬಂಡಾಯದ ರೀತಿಯ ಕವನಗಳು ಸೇರಿದಂತೆ ಸುಮಾರು 50 ಕವನಗಳನ್ನ ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಎಂಸಿಎ ವಿಭಾಗದ ಮುಖ್ಯಸ್ಥರಾಗಿರುವ ಡಾ.ಮುರಳೀಧರ ಅವರು ವಿಶೇಷವಾಗಿ ಕೋವಿಡ್​ ಸಂದರ್ಭದಲ್ಲಿ ನಡೆದ ಕೆಲವು ಘಟನೆಗಳು ಹಾಗೂ ತಮ್ಮ ವೈಯಕ್ತಿಕ ಜೀವನದಲ್ಲಾದ ಹಲವು ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಈ ಕವಲ ಸಂಕಲನ ರಚಿಸಿದ್ದಾರೆ.

ಡಾ. ಬಂಜಗೆರೆ ಜಯಪ್ರಕಾಶ್​ ಅಧ್ಯಕ್ಷತೆ

ವಿಮರ್ಶಕರಾದ ಹೆಚ್​​. ದಂಡೆಪ್ಪ ಪುಸ್ತಕದ ಕುರಿತು ಮಾತನಾಡಿದರು. ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರಾದ ಡಾ. ಬಂಜಗೆರೆ ಜಯಪ್ರಕಾಶ್​ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಜಯಕರ ಎಸ್​.ಎಮ್​. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment