RCB ಪಂದ್ಯಕ್ಕೆ ಮಳೆ ಬಂದ್ರೂ ಏನೂ ಆಗಲ್ಲ.. ಚಿನ್ನಸ್ವಾಮಿ ಸ್ಟೇಡಿಯಂಗೆ ಇದೆ ಉನ್ನತ ತಂತ್ರಜ್ಞಾನದ ಟಚ್!

author-image
Bheemappa
Updated On
RCB ಪಂದ್ಯಕ್ಕೆ ಮಳೆ ಬಂದ್ರೂ ಏನೂ ಆಗಲ್ಲ.. ಚಿನ್ನಸ್ವಾಮಿ ಸ್ಟೇಡಿಯಂಗೆ ಇದೆ ಉನ್ನತ ತಂತ್ರಜ್ಞಾನದ ಟಚ್!
Advertisment
  • ಪಂದ್ಯ ಆರಂಭವಾಗಬೇಕಿದ್ದ ಸಮಯಕ್ಕೆ ಎಂಟ್ರಿ ಕೊಟ್ಟ ವರುಣ
  • ಚಿನ್ನಸ್ವಾಮಿಯಲ್ಲಿ ಮಳೆ ಬಂದು ನಿಂತ ತಕ್ಷಣ ಮ್ಯಾಚ್ ಆಡಬಹುದು
  • ಮಳೆ ಬಂದು ಈಗಲೇ ನಿಂತು ಹೋದರೆ ಯಾವುದೇ ಸಮಸ್ಯೆ ಇಲ್ಲ

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಇನ್ನೇನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್​ ತಂಡಗಳ ನಡುವವಿನ ಹೈವೋಲ್ಟೇಜ್ ಪಂದ್ಯ ಆರಂಭವಾಗಬೇಕಿತ್ತು. ಬೌಂಡರಿ, ಸಿಕ್ಸರ್​ಗಳನ್ನ ನೋಡಿ ಅಭಿಮಾನಿಗಳು ಶಿಳ್ಳೆ, ಕೇಕೆ ಹಾಕಬೇಕಿತ್ತು. ಆದರೆ ವರುಣನ ಎಂಟ್ರಿಯಿಂದ ಪಂದ್ಯ ಇನ್ನು ಆರಂಭವಾಗಿಲ್ಲ. ತವರಲ್ಲಿ 2 ಸೋಲು ಕಂಡ ಆರ್​ಸಿಬಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿದೆ. ಮಳೆರಾಯನಿಂದ ಎಲ್ಲದಕ್ಕೂ ಸಮಸ್ಯೆ ಆದಂತೆ ಆಗಿದೆ.

publive-image

ಸಿಲಿಕಾನ್ ಸಿಟಿಯಲ್ಲಿ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಸೇರಿದಂತೆ ಹಲವೆಡೆ ಜೋರಾಗಿ ವರುಣಾರ್ಭಟ ಇದೆ. ಇದರಿಂದ ಈಗಾಗಲೇ ಆರಂಭವಾಗಬೇಕಿದ್ದ ಬೆಂಗಳೂರು- ಪಂಜಾಬ್​ ನಡುವಿನ ಪಂದ್ಯವನ್ನು ನಿಲ್ಲಿಸಲಾಗಿದೆ. ಮಳೆ ಬಂದು ಈಗಲೇ ನಿಂತು ಹೋದರೆ ಯಾವುದೇ ಸಮಸ್ಯೆ ಇಲ್ಲ. ಮಳೆ ನಿಂತ ಕೇವಲ 15 ರಿಂದ 30 ನಿಮಿಷದಲ್ಲಿ ಪಂದ್ಯ ಆರಂಭ ಮಾಡುವ ತಾಕತ್ತು ಎಂ.ಚಿನ್ನಸ್ವಾಮಿ ಮೈದಾನಕ್ಕಿದೆ. ಅಂದರೆ ಚಿನ್ನಸ್ವಾಮಿ ಮೈದಾನ ಅಷ್ಟೊಂದು ಅಪ್​ಡೇಟ್ ಆಗಿದೆ.

ಚಿನ್ನಸ್ವಾಮಿಯಲ್ಲಿ ಸಬ್‌ ಏರ್‌ ಸಿಸ್ಟಮ್

ಮಳೆ ಬಂದ್ರೂ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಅವಕಾಶ ಇದ್ದೇ ಇದೆ. ಆರ್​ಸಿಬಿಯ ಈ ಪಂದ್ಯಕ್ಕೆ ಸಬ್‌ ಏರ್‌ ಸಿಸ್ಟಮ್​ ವರದಾನವಾಗುತ್ತಾ ಎಂದು ಕಾದು ನೋಡಬೇಕು ಅಷ್ಟೇ. ಮಳೆ ನಿಂತರೆ 15 ರಿಂದ 30 ನಿಮಿಷಗಳಲ್ಲಿ ಮ್ಯಾಚ್ ಸ್ಟಾರ್ಟ್​ ಆಗುತ್ತದೆ. ಇಡೀ ದೇಶದಲ್ಲೇ ಸಬ್‌ ಏರ್‌ ಸಿಸ್ಟಮ್ ಹೊಂದಿರುವ ಏಕೈಕ ಕ್ರೀಡಾಂಗಣ ಎಂದರೆ ಅದು ಬೆಂಗಳೂರಿನ ಕ್ರಿಕೆಟ್​ ಸ್ಟೇಡಿಯಂ.

ಮೈದಾನದಲ್ಲಿ ಅರ್ಧದಿಂದ ಒಂದು ಅಡಿ ಆಳದಲ್ಲಿ ಕೊಳವೆಗಳನ್ನು ಅಳವಡಿಸಲಾಗಿದೆ. ಮಳೆ ಬಂದು ನಿಂತ ತಕ್ಷಣ ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಕ್ರೀಡಾಂಗಣಕ್ಕೆ, ಪಿಚ್​ಗೆ ರವಾನಿಸಬಹುದು. ಇದರಿಂದ ಮೈದಾನ ಕೆಲವೇ ಕೆಲವು ನಿಮಿಷಗಳಲ್ಲಿ ಒಣಗಲಿದೆ. ಹೀಗಾಗಿ ಐಪಿಎಲ್​ ಪಂದ್ಯವನ್ನು ಸುಲಭವಾಗಿ ಆಡಬಹುದು.

ಇದನ್ನೂ ಓದಿ:RCB vs PBKS ನಡುವಿನ ಜಿದ್ದಾಜಿದ್ದಿ ಹೇಗಿದೆ.. ಹೆಚ್ಚು ಬಾರಿ ಮ್ಯಾಚ್​ ಗೆದ್ದವರು ಯಾರು?

publive-image

ರಜತ್ ಪಾಟಿದಾರ್ ನೇತೃತ್ವದ ಆರ್​​ಸಿಬಿ ತಂಡ ಈಗಾಗಲೇ 6 ಪಂದ್ಯಗಳನ್ನ ಆಡಿದ್ದು ಇದರಲ್ಲಿ 4 ಗೆಲುವು ಸಾಧಿಸಿ ತವರಲ್ಲಿ ನಡೆದ 2 ಪಂದ್ಯಗಳನ್ನು ಸೋತಿದೆ. ಇನ್ನೂ ಪಂಜಾಬ್​ ಕೂಡ 6 ಪಂದ್ಯಗಳನ್ನು ಆಡಿದ್ದು 4 ಗೆಲುವು ಪಡೆದು ಎರಡರಲ್ಲಿ ಸೋಲುಂಡಿದೆ. ಹೀಗಾಗಿ ಪಾಯಿಂಟ್​ ಟೇಬಲ್​ನಲ್ಲಿ ಆರ್​ಸಿಬಿ 3ನೇ ಸ್ಥಾನದಲ್ಲಿದ್ದರೇ, ಪಂಜಾಬ್​ ಕಡಿಮೆ ರನ್​ರೇಟ್​​ನಿಂದ 4ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ ಆರಂಭವಾಗಿ ಫಲಿತಾಂಶ ಬಂದ್ರೆ ಟೇಬಲ್​ನಲ್ಲಿ ಗಣನೀಯ ಬದಲಾವಣೆ ಆಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment