ಕಲುಷಿತ ನೀರು ಸೇವಿಸಿ ಜೀವಬಿಟ್ಟ ಮೂವರು, ಗ್ರಾಮದಲ್ಲಿ ಹೆಚ್ಚಿದ ಆತಂಕ

author-image
Veena Gangani
ಕಲುಷಿತ ನೀರು ಸೇವಿಸಿ ಜೀವಬಿಟ್ಟ ಮೂವರು, ಗ್ರಾಮದಲ್ಲಿ ಹೆಚ್ಚಿದ ಆತಂಕ
Advertisment
  • ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂವರು
  • ಒಂದೇ ಗ್ರಾಮದ 3 ಕಲುಷಿತ ನೀರು ಸೇವನೆಯಿಂದ ಬಲಿ
  • ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ನಡೆದ ಘಟನೆ

ಯಾದಗಿರಿ: ಕಲುಷಿತ ನೀರು ಸೇವನೆ ಮಾಡಿ ಮೂವರು ಜೀವಬಿಟ್ಟಿರೋ ಘಟನೆ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ನಡೆದಿದೆ. ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60) ಮತ್ತು ರಾಮಣ್ಣ ಪೂಜಾರಿ (50) ಮೃತ ದುರ್ದೈವಿಗಳು.

ಇದನ್ನೂ ಓದಿ: ನೀವು ಟ್ರೆಕ್ಕಿಂಗ್ ಪ್ರಿಯರೇ..? ಕರ್ನಾಟಕದ ಈ 7 ಬೆಸ್ಟ್ ಪ್ಲೇಸ್​ಗಳನ್ನು ಮಿಸ್​ ಮಾಡಿಕೊಳ್ಳಬೇಡಿ..!

ಕಳೆದ ಹತ್ತು ದಿನಗಳ ಹಿಂದೆ ಒಂದೇ ಗ್ರಾಮದ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಜೀವಬಿಟ್ಟಿದ್ದಾರೆ. ಇನ್ನೂ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.

publive-image

ಸದ್ಯ ಘಟನಾ ಸ್ಥಳಕ್ಕೆ ಸುರಪುರ ಡಿಹೆಚ್ಓ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಹೆಚ್ಓ ಮಹೇಶ ಬಿರಾದಾರ ಅವರು ವಾಂತಿ ಭೇದಿ ಪ್ರಕರಣದ ಬಗ್ಗೆ ವರದಿ ಕೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment