/newsfirstlive-kannada/media/post_attachments/wp-content/uploads/2024/12/DRONE-Prarap.jpg)
ಮೊನ್ನೆ ಮೊನ್ನೆಯಷ್ಟೇ ಬಿಗ್ಬಾಸ್ ಸೀಸನ್ 11ರಲ್ಲಿ ಗೆಸ್ಟ್ ಆಗಿ ಬಂದಿದ್ದ ಡ್ರೋನ್ ಪ್ರತಾಪ್ ಮತ್ತೆ ಸುದ್ದಿಯಲ್ಲಿದ್ದಾರೆ. ವಿಷ್ಯ ಏನಪ್ಪ ಅಂದ್ರೆ? ಮಾಡಿರೋ ಒಂದು ಎಕ್ಸ್ಪೆರಿಮೆಂಟ್ ಡ್ರೋನ್ ಪ್ರತಾಪ್ರನ್ನ ವಿವಾದ ಸುಳಿಗೆ ಸಿಲುಕಿಸಿದೆ.. ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿ ಆಗ್ತಿದ್ದಂತೆ ಡ್ರೋನ್ ಪ್ರತಾಪ್ನನ್ನ ಅರೆಸ್ಟ್ ಮಾಡ್ಲಾಗಿದೆ.
ಕೃಷಿ ಹೊಂಡದಂತಿರೋ ಆಳವಾದ ದೊಡ್ಡ ಗುಂಡಿಯಲ್ಲಿರೋ ನೀರಿಗೆ ಸೋಡಿಯಂ ಮೆಟಲ್ ಹಾಕಿ ಬ್ಲಾಸ್ಟ್ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಈ ವಿಡಿಯೋ ನೋಡಿದ ಪರಿಸರ ಪ್ರೇಮಿಗಳು ಡ್ರೋನ್ ಪ್ರತಾಪ್ ವಿರುದ್ಧ ಸಿಡಿದೆದ್ದಿದ್ದಾರೆ. ಎಕ್ಸ್ಪೆರಿಮೆಂಟ್ ಮೂಲಕ ಡ್ರೋನ್ ಪ್ರತಾಪ್ ಸಮಾಜಕ್ಕೆ ತಪ್ಪು ಸಂದೇಶ ಕೊಡ್ತಿದ್ದಾರೆ ಅಂತ ಸಾರ್ವಜನಿಕರು, ಸಂಶೋಧಕರು ಗರಂ ಆಗಿದ್ದಾರೆ.
ಇದನ್ನೂ ಓದಿ:ತುಮಕೂರು ಪೊಲೀಸರಿಂದ ಡ್ರೋನ್ ಪ್ರತಾಪ್ ದಿಢೀರ್ ಬಂಧನ; ಕಾರಣವೇನು ಗೊತ್ತಾ?
ನೀರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಲಾಸ್ಟ್ ಮಾಡೋದ್ರಿಂದ ತುಂಬಾನೇ ಅನಾನುಕೂಲ ಇದೆ. ಆ ನೀರು ಕುಡಿಯಲು ಯೋಗ್ಯವಾಗಿರಲ್ಲ. ನೀರಿನಲ್ಲಿರುವ ಜಲಚರಗಳಿಗೂ ಹಾನಿ ಮಾಡುತ್ತದೆ. ಸಣ್ಣದಾದ ಕೆರೆ, ಬಾವಿಗಳಲ್ಲಿ ಸೋಡಿಯಂ ಯೂಸ್ ಮಾಡಿ ಸ್ಫೋಟಗೊಳಿಸೋದ್ರಿಂದ ನೀರಿನಲ್ಲಿರುವ ಪಿಹೆಚ್ ಲೇವಲ್ ತುಂಬಾ ಹೆಚ್ಚಾಗುತ್ತದೆ. ಇದರಿಂದ ಜೀವಿಗಳಿಗೆ ವಾಸಕ್ಕೆ ಪೆಟ್ಟು ಕೊಡುತ್ತದೆ- ಗಿರೀಶ್ ಲಿಂಗಣ್ಣ, ಸಂಶೋಧಕ
ತೀವ್ರ ಟೀಕೆಗಳ ಬೆನ್ನಲ್ಲೆ ಡ್ರೋನ್ ಪ್ರತಾಪ್ನನ್ನು ಅರೆಸ್ಟ್ ಮಾಡಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ರು ಪ್ರತಾಪ್ನನ್ನ ಬಂಂಧಿಸಿದ್ದಾರೆ. ವಿಡಿಯೋ ಆಧರಿಸಿ ಎಫ್ಐಆರ್ ದಾಖಲಾಗಿದೆ. BNS ಸೆಕ್ಷನ್ 288 ಮತ್ತು ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಠಾಣೆಯಲ್ಲಿ ಡ್ರೋನ್ ಪ್ರತಾಪ್ನ ವಿಚಾರಣೆ ನಡೆಸಿದ್ದಾರೆ. ಇರಲಾಗದೇ ಇರುವೆ ಬಿಟ್ಕೊಂಡ್ರಂತೆ ಅನ್ನೋ ಪರಿಸ್ಥಿತಿ ಡ್ರೋಣ್ ಪ್ರತಾಪ್ಗೆ ಆಗಿದೆ.
ಇದನ್ನೂ ಓದಿ:ಕೇಸ್ವೊಂದರಲ್ಲಿ ಡ್ರೋನ್ ಪ್ರತಾಪ್ ಅರೆಸ್ಟ್; ಪೊಲೀಸರಿಂದ ತೀವ್ರ ವಿಚಾರಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ