ಇಂದಿನಿಂದ ಇಡೀ ರಾಜ್ಯಾದ್ಯಂತ ದುನಿಯಾ ವಿಜಯ್ ಭೀಮಾ ರಿಲೀಸ್
ಭೀಮಾ ರಿಲೀಸ್ ಆಗುತ್ತಿದ್ದಂತೆ ಸ್ಫೋಟಕ ಸತ್ಯ ಬಿಚ್ಚಿಟ್ಟ ನಟ ವಿಜಯ್!
ಗಾಂಗಾ ಏರಿಯಾದಿಂದ ನಟ ದುನಿಯಾ ವಿಜಯ್ ಪಾರಾಗಿದ್ದು ಹೇಗೆ?
ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರ ನಟನೆಯ ಭೀಮಾ ರಿಲೀಸ್ ಆಗಿದೆ. ಇಂದು 400ಕ್ಕೂ ಹೆಚ್ಚು ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆ ಟಾಕ್ ಇದೆ. ಇಷ್ಟೇ ಅಲ್ಲ ಕೆಆರ್ಜಿ ಸಂಸ್ಥೆ ಹೊರ ದೇಶದಲ್ಲಿ ಕನ್ನಡದ ಭೀಮ ಚಿತ್ರವನ್ನ ರಿಲೀಸ್ ಮಾಡಲು ಹೊರಟಿದೆ. ಈಗ ಭೀಮಾ ಬಗ್ಗೆ ಒಳ್ಳೆ ಟಾಕ್ ಬರುತ್ತಿರೋ ಹೊತ್ತಲ್ಲೇ ದುನಿಯಾ ವಿಜಯ್ ಸ್ಫೋಟಕ ವಿಚಾರವೊಂದು ಬಹಿರಂಗಪಡಿಸಿದ್ದಾರೆ.
ನಾವು ಸಿನಿಮಾದಲ್ಲಿ ಯುವಕರು ಡ್ರಗ್ಸ್ಗೆ ಹೇಗೆ ಅಡಿಕ್ಟ್ ಆಗಿದ್ದಾರೆ ಅನ್ನೋ ಬಗ್ಗೆ ಸಂದೇಶ ನೀಡಿದ್ದೇನೆ. ನಾನು ನಿಜ ಜೀವನದಲ್ಲಿ ಡ್ರಗ್ಸ್ ತೆಗೆದುಕೊಳ್ಳುವವರನ್ನು ನೋಡಿದ್ದೇನೆ. ಹುಡುಗರು ಒಬ್ಬೊಬ್ಬರು ಇಷ್ಟುದ್ದ ಡ್ರ್ಯಾಗರ್ ಇಟ್ಟುಕೊಂಡು ಇರ್ತಾರೆ. ನೀವು ನೋಡುತ್ತಿದ್ದಂತೆ ಡ್ರ್ಯಾಗರ್ ಓಪನ್ ಮಾಡ್ತಾರೆ. ನಾವು ಯಾರು ಅಂತಾನೆ ಗೊತ್ತಿರಲ್ಲ. ನಾನು ಯಾರೋ ಪೊಲೀಸ್ ಇರಬಹುದು, ದುಷ್ಮನ್ ಇರಬಹದು ಎಂದು ಚುಚ್ಚೇ ಬಿಡ್ತಾರೆ ಎಂದರು.
ಹಿಂಗೇ ನಾನು ಒಬ್ಬರನ್ನ ಮೀಟ್ ಮಾಡೋಕೆ ಹೋದಾಗ ಡ್ರ್ಯಾಗರ್ ಓಪನ್ ಮಾಡೇಬಿಟ್ಟ. ಚೂರು ಲೇಟ್ ಮಾಡಿದ್ರೂ ಚುಚ್ಚಿ ಕೊಂದೇ ಬಿಡ್ತಿದ್ದ. ಅವಾಗ ಏಯ್ ಏಯ್ ಎಂದು ಸಮಾಧಾನ ಮಾಡಿ, ಅವನನ್ನು ಅಲ್ಲಿಂದ ಕಳಿಸಿ. ಅದನ್ನು ಪತ್ರಕರ್ತರನ್ನು ಕರ್ಕೊಂಡು ಹೋಗಿ ಸಾಕ್ಷಿಗಾಗಿ ಶೂಟ್ ಕೂಡ ಮಾಡಿದ್ದೆ ಎಂದರು.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ‘ಭೀಮ’ ಸಂಭ್ರಮ; ದುನಿಯಾ ವಿಜಯ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದಿನಿಂದ ಇಡೀ ರಾಜ್ಯಾದ್ಯಂತ ದುನಿಯಾ ವಿಜಯ್ ಭೀಮಾ ರಿಲೀಸ್
ಭೀಮಾ ರಿಲೀಸ್ ಆಗುತ್ತಿದ್ದಂತೆ ಸ್ಫೋಟಕ ಸತ್ಯ ಬಿಚ್ಚಿಟ್ಟ ನಟ ವಿಜಯ್!
ಗಾಂಗಾ ಏರಿಯಾದಿಂದ ನಟ ದುನಿಯಾ ವಿಜಯ್ ಪಾರಾಗಿದ್ದು ಹೇಗೆ?
ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಅವರ ನಟನೆಯ ಭೀಮಾ ರಿಲೀಸ್ ಆಗಿದೆ. ಇಂದು 400ಕ್ಕೂ ಹೆಚ್ಚು ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆ ಟಾಕ್ ಇದೆ. ಇಷ್ಟೇ ಅಲ್ಲ ಕೆಆರ್ಜಿ ಸಂಸ್ಥೆ ಹೊರ ದೇಶದಲ್ಲಿ ಕನ್ನಡದ ಭೀಮ ಚಿತ್ರವನ್ನ ರಿಲೀಸ್ ಮಾಡಲು ಹೊರಟಿದೆ. ಈಗ ಭೀಮಾ ಬಗ್ಗೆ ಒಳ್ಳೆ ಟಾಕ್ ಬರುತ್ತಿರೋ ಹೊತ್ತಲ್ಲೇ ದುನಿಯಾ ವಿಜಯ್ ಸ್ಫೋಟಕ ವಿಚಾರವೊಂದು ಬಹಿರಂಗಪಡಿಸಿದ್ದಾರೆ.
ನಾವು ಸಿನಿಮಾದಲ್ಲಿ ಯುವಕರು ಡ್ರಗ್ಸ್ಗೆ ಹೇಗೆ ಅಡಿಕ್ಟ್ ಆಗಿದ್ದಾರೆ ಅನ್ನೋ ಬಗ್ಗೆ ಸಂದೇಶ ನೀಡಿದ್ದೇನೆ. ನಾನು ನಿಜ ಜೀವನದಲ್ಲಿ ಡ್ರಗ್ಸ್ ತೆಗೆದುಕೊಳ್ಳುವವರನ್ನು ನೋಡಿದ್ದೇನೆ. ಹುಡುಗರು ಒಬ್ಬೊಬ್ಬರು ಇಷ್ಟುದ್ದ ಡ್ರ್ಯಾಗರ್ ಇಟ್ಟುಕೊಂಡು ಇರ್ತಾರೆ. ನೀವು ನೋಡುತ್ತಿದ್ದಂತೆ ಡ್ರ್ಯಾಗರ್ ಓಪನ್ ಮಾಡ್ತಾರೆ. ನಾವು ಯಾರು ಅಂತಾನೆ ಗೊತ್ತಿರಲ್ಲ. ನಾನು ಯಾರೋ ಪೊಲೀಸ್ ಇರಬಹುದು, ದುಷ್ಮನ್ ಇರಬಹದು ಎಂದು ಚುಚ್ಚೇ ಬಿಡ್ತಾರೆ ಎಂದರು.
ಹಿಂಗೇ ನಾನು ಒಬ್ಬರನ್ನ ಮೀಟ್ ಮಾಡೋಕೆ ಹೋದಾಗ ಡ್ರ್ಯಾಗರ್ ಓಪನ್ ಮಾಡೇಬಿಟ್ಟ. ಚೂರು ಲೇಟ್ ಮಾಡಿದ್ರೂ ಚುಚ್ಚಿ ಕೊಂದೇ ಬಿಡ್ತಿದ್ದ. ಅವಾಗ ಏಯ್ ಏಯ್ ಎಂದು ಸಮಾಧಾನ ಮಾಡಿ, ಅವನನ್ನು ಅಲ್ಲಿಂದ ಕಳಿಸಿ. ಅದನ್ನು ಪತ್ರಕರ್ತರನ್ನು ಕರ್ಕೊಂಡು ಹೋಗಿ ಸಾಕ್ಷಿಗಾಗಿ ಶೂಟ್ ಕೂಡ ಮಾಡಿದ್ದೆ ಎಂದರು.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ‘ಭೀಮ’ ಸಂಭ್ರಮ; ದುನಿಯಾ ವಿಜಯ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ