ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ.. ಭಾರತೀಯರಿಗಾಗಿ ಸಹಾಯವಾಣಿ ಆರಂಭ

author-image
Bheemappa
Updated On
ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ.. ಭಾರತೀಯರಿಗಾಗಿ ಸಹಾಯವಾಣಿ ಆರಂಭ
Advertisment
  • ಭೂಕಂಪದಲ್ಲಿ ಇದುವರೆಗೆ ಎಷ್ಟು ಜನರನ್ನ ರಕ್ಷಣೆ ಮಾಡಲಾಗಿದೆ?
  • ಕ್ಷಣಾರ್ಧದಲ್ಲೇ ಗಗನಚುಂಬಿ ಕಟ್ಟಡಗಳು ನೆಲಸಮ, ಓಡಿದ ಜನರು
  • ಕಟ್ಟಡಗಳಲ್ಲಿ ಹಲವಾರು ಕಾರ್ಮಿಕರು, ಜನರು ಸಿಲುಕಿಕೊಂಡಿದ್ದಾರೆ

ಮಯನ್ಮಾರ್ ಹಾಗೂ ನೆರೆಯ ಥೈಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಕೆಲವರು ಜೀವ ಕಳೆದುಕೊಂಡಿದ್ದಾರೆ. ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದ ಗಗನಚುಂಬಿ ಕಟ್ಟಡ ಕುಸಿದಿದ್ದು, ಹಲವಾರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದರ ಜೊತೆಗೆ ಥೈಲ್ಯಾಂಡ್​ನಲ್ಲಿನ ಭಾರತೀಯರಿಗಾಗಿ ಸಹಾಯವಾಣಿ (ಹೆಲ್ಪ್​ಲೈನ್) ಇದೀಗ ತೆರೆಯಲಾಗಿದೆ.

ಥಾಯ್ಲೆಂಡ್​ನ ಪ್ರಬಲ ಭೂಕಂಪ ಸಂಭವಿಸಿದ್ದು, ಇದು ರಿಕ್ಟರ್‌ ಮಾಪಕದಲ್ಲಿ 7.7 ರಷ್ಟು ತೀವ್ರತೆ ದಾಖಲಾಗಿದೆ. ಬ್ಯಾಂಕಾಕ್​ನಲ್ಲಿ ನಿರ್ಮಾಣ ಹಂತದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದಿದೆ. ಇಲ್ಲಿ 3 ಮಂದಿ ಜೀವ ಬಿಟ್ಟಿದ್ದು 90 ಮಂದಿ ನಾಪತ್ತೆಯಾಗಿದ್ದಾರೆ. ಭೂಕಂಪದಿಂದ ಇಲ್ಲಿವರೆಗೆ 7 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಜೀವ ಕಳೆದುಕೊಂಡವರ ಸಂಖ್ಯೆ 15ಕ್ಕಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: LSG ಗೆದ್ದರೂ ರಿಷಭ್ ಪಂತ್ ಮೇಲೆ ಸಮಾಧಾನ ಇಲ್ಲ.. ಬ್ಯಾಟಿಂಗ್​ನಿಂದ ನಿರಾಸೆ, ಟಿವಿ ಪುಡಿಪುಡಿ..!

publive-image

ಪ್ರಬಲವಾದ ಭೂಕಂಪ ಸಂಭವಿಸಿದ್ದರಿಂದ ಥೈಲ್ಯಾಂಡ್‌ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರಾ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಮೆಟ್ರೋ ಹಾಗೂ ರೈಲು ಸೇವೆಗಳನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ. ಮೂರು ನಿಮಿಷ ನಿರಂತರವಾಗಿ ಭೂಮಿ ಕಂಪಿಸಿದ್ದು, ಕ್ಷಣ ಮಾತ್ರದಲ್ಲಿ ಹಲವು ಕಟ್ಟಡಗಳು ಕುಸಿದಿವೆ. ಭೂಕಂಪನದ ಹೊಡೆತಕ್ಕೆ ಐತಿಹಾಸಿಕ ಸೇತುವೆ ಕೂಡ ನಾಶವಾಗಿದೆ.

ಮಯನ್ಮಾರ್, ಥೈಲ್ಯಾಂಡ್‌, ಬ್ಯಾಂಕಾಕ್‌ನಲ್ಲಿ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ ಅಲ್ಲಿನ ಭಾರತೀಯರಿಗೆ ಸಮಸ್ಯೆ ಆದ್ರೆ, ತಕ್ಷಣಕ್ಕೆ ಸ್ಪಂದಿಸಲು ಸಹಾಯವಾಣಿಯನ್ನು ಇದೀಗ ತೆರೆಯಲಾಗಿದೆ. ಸಿಲುಕಿರುವ ಯಾವುದೇ ಭಾರತೀಯರು ಸಹಾಯವಾಣಿ ಮೂಲಕ ಸಂಪರ್ಕ ಮಾಡಬಹುದು.

ಥೈಲ್ಯಾಂಡ್​ನಲ್ಲಿರುವ ಭಾರತೀಯರಿಗೆ ಹೆಲ್ಪ್​ಲೈನ್

+66 6188 19218

ಕನ್ನಡ ಹಾಗೂ ಥಾಯ್ ಭಾಷೆಯಲ್ಲಿ ಸಹಾಯವಾಣಿ

ಮೋಹನ್- +66 899012366

ತುರ್ತು ನಂಬರ್

1669

ರಾಷ್ಟ್ರೀಯ ವಿಪತ್ತು ಎಚ್ಚರಿಕೆ ಕೇಂದ್ರದ ನಂಬರ್

02-399-4114

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment