/newsfirstlive-kannada/media/post_attachments/wp-content/uploads/2024/08/Team-India-1.jpg)
ಹೈದರಾಬಾದ್​​​ ಕ್ರಿಕೆಟ್​ ಅಸೋಸಿಯೇಷನ್​​ನಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಏನಿದು ಕೇಸ್​?
ಈ ಹಿಂದೆ ಮೊಹಮ್ಮದ್​ ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​​ ಅಧ್ಯಕ್ಷರಾಗಿದ್ದರು. ಮ್ಮ ಅಧಿಕಾರಾವಧಿಯಲ್ಲಿ ಬರೋಬ್ಬರಿ 20 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ ಎನ್ನುವ ಗಂಭೀರ ಆರೋಪ ಇದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಆಗಿರೋ ಅಜರುದ್ದೀನ್​ಗೆ ಇಡಿ ಮೊದಲ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗಬೇಕಿದೆ.
/newsfirstlive-kannada/media/post_attachments/wp-content/uploads/2024/10/Mohammed-Azaruddin.jpg)
ಆರೋಪವೇನು?
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮೂಲ ಸೌಕರ್ಯಗಳಿಗೆ ಸರ್ಕಾರ 20 ಕೋಟಿ ಮಂಜೂರು ಮಾಡಿತ್ತು. ಡೀಸೆಲ್ ಜನರೇಟರ್, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳಿಗೆ ಮಂಜೂರು ಮಾಡಿದ್ದ ಹಣ ಇದಾಗಿತ್ತು. ಈ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪ ಅಜರುದ್ದೀನ್ ವಿರುದ್ಧ ಕೇಳಿ ಬಂದಿದೆ.
ಯಾರು ಈ ಅಜರುದ್ದೀನ್​​?
ಅಜರುದ್ದೀನ್​ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​. ಭಾರತ ತಂಡದ ಪರ 1984 ರಿಂದ 2000 ರವರೆಗೆ ಆಡಿದ್ದಾರೆ. ಇವರು 1989 ರಿಂದ 1999 ರವರೆಗೆ ಭಾರತ ತಂಡವನ್ನು ಮುನ್ನಡೆಸಿದ್ದರು. ಅಜರುದ್ದೀನ್​​ ನಾಯಕತ್ವದಲ್ಲಿ ಭಾರತ 47 ಟೆಸ್ಟ್ ಪಂದ್ಯ ಆಡಿದ್ದು, 14 ರಲ್ಲಿ ಗೆಲುವು ಸಾಧಿಸಿದೆ. 19 ಟೆಸ್ಟ್ ಡ್ರಾ ಆಗಿದ್ದು, 10 ಪಂದ್ಯ ಸೋತಿದೆ. 174 ಏಕದಿನ ಪಂದ್ಯಗಳಲ್ಲಿ ಇವರ ನಾಯಕತ್ವದಲ್ಲಿ ಭಾರತ 90 ಪಂದ್ಯ ಗೆದ್ದಿದೆ.
ಇದನ್ನೂ ಓದಿ:ಅನುಷ್ಕಾ ಶರ್ಮಾ ಕೊಟ್ಟ ಕಾಟಕ್ಕೆ ವಿರಾಟ್ ಕೊಹ್ಲಿಗೆ ಬೇಸರ.. ಅಸಲಿಗೆ ಏನಾಯಿತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us