ಅಕ್ರಮ ಹಣ ವರ್ಗಾವಣೆ ಕೇಸ್​; ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್​ಗೆ ಸಮನ್ಸ್ ಜಾರಿ

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​​: R ಅಶ್ವಿನ್​ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್​ ಕ್ರಿಕೆಟರ್​
Advertisment
  • ಹೈದರಾಬಾದ್​​​ ಕ್ರಿಕೆಟ್​ ಅಸೋಸಿಯೇಷನ್​​ನಲ್ಲಿ ಹಣಕಾಸು ಅವ್ಯವಹಾರ
  • ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಮಾಜಿ ಕ್ಯಾಪ್ಟನ್​ಗೆ ಮೊದಲ ಸಮನ್ಸ್​​
  • ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​ಗೆ ಎದುರಾಯ್ತು ಕಾನೂನು ಸಂಕಷ್ಟ

ಹೈದರಾಬಾದ್​​​ ಕ್ರಿಕೆಟ್​ ಅಸೋಸಿಯೇಷನ್​​ನಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ಏನಿದು ಕೇಸ್​?

ಈ ಹಿಂದೆ ಮೊಹಮ್ಮದ್​ ಅಜರುದ್ದೀನ್ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​​ ಅಧ್ಯಕ್ಷರಾಗಿದ್ದರು. ಮ್ಮ ಅಧಿಕಾರಾವಧಿಯಲ್ಲಿ ಬರೋಬ್ಬರಿ 20 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ ಎನ್ನುವ ಗಂಭೀರ ಆರೋಪ ಇದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಆಗಿರೋ ಅಜರುದ್ದೀನ್​ಗೆ ಇಡಿ ಮೊದಲ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗಬೇಕಿದೆ.

publive-image

ಆರೋಪವೇನು?

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮೂಲ ಸೌಕರ್ಯಗಳಿಗೆ ಸರ್ಕಾರ 20 ಕೋಟಿ ಮಂಜೂರು ಮಾಡಿತ್ತು. ಡೀಸೆಲ್ ಜನರೇಟರ್, ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳಿಗೆ ಮಂಜೂರು ಮಾಡಿದ್ದ ಹಣ ಇದಾಗಿತ್ತು. ಈ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪ ಅಜರುದ್ದೀನ್ ವಿರುದ್ಧ ಕೇಳಿ ಬಂದಿದೆ.

ಯಾರು ಈ ಅಜರುದ್ದೀನ್​​?

ಅಜರುದ್ದೀನ್​ ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​. ಭಾರತ ತಂಡದ ಪರ 1984 ರಿಂದ 2000 ರವರೆಗೆ ಆಡಿದ್ದಾರೆ. ಇವರು 1989 ರಿಂದ 1999 ರವರೆಗೆ ಭಾರತ ತಂಡವನ್ನು ಮುನ್ನಡೆಸಿದ್ದರು. ಅಜರುದ್ದೀನ್​​ ನಾಯಕತ್ವದಲ್ಲಿ ಭಾರತ 47 ಟೆಸ್ಟ್ ಪಂದ್ಯ ಆಡಿದ್ದು, 14 ರಲ್ಲಿ ಗೆಲುವು ಸಾಧಿಸಿದೆ. 19 ಟೆಸ್ಟ್ ಡ್ರಾ ಆಗಿದ್ದು, 10 ಪಂದ್ಯ ಸೋತಿದೆ. 174 ಏಕದಿನ ಪಂದ್ಯಗಳಲ್ಲಿ ಇವರ ನಾಯಕತ್ವದಲ್ಲಿ ಭಾರತ 90 ಪಂದ್ಯ ಗೆದ್ದಿದೆ.

ಇದನ್ನೂ ಓದಿ:ಅನುಷ್ಕಾ ಶರ್ಮಾ ಕೊಟ್ಟ ಕಾಟಕ್ಕೆ ವಿರಾಟ್ ಕೊಹ್ಲಿಗೆ ಬೇಸರ.. ಅಸಲಿಗೆ ಏನಾಯಿತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment