/newsfirstlive-kannada/media/post_attachments/wp-content/uploads/2025/04/Gautam-Gambhir.jpg)
ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಸದ್ಯ 2 ವಿಚಾರಗಳು ಚರ್ಚೆಯಾಗ್ತಿವೆ. ಒಂದು ಟೀಮ್ ಇಂಡಿಯಾದ ಯುವ ಪಡೆ ಇಂಗ್ಲೆಂಡ್ನ ಚಾಲೆಂಜಿಂಗ್ ಕಂಡಿಷನ್ಸ್ನಲ್ಲಿ ಹೇಗೆ ಪರ್ಫಾಮ್ ಮಾಡುತ್ತೆ ಅನ್ನೋದು. ಇನ್ನೊಂದು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ರಿಯಲ್ ಟೆಸ್ಟ್ ಪಾಸಾಗ್ತಾರಾ ಅನ್ನೋದು. ಯುವ ಆಟಗಾರರು ಫೇಲ್ ಆದ್ರೆ ಏಕ್ಸ್ಕ್ಯೂಸ್ ಇದೆ. ಗಂಭೀರ್ ಪಾಸಾಗ್ಲಿಲ್ಲ ಅಂದ್ರೆ ನೋ ಎಕ್ಸ್ಕ್ಯೂಸ್. ಆಂಗ್ಲರ ನಾಡಲ್ಲಿ ಗಂಭೀರ್ ಪಟ್ಟದ ಪರೀಕ್ಷೆ ನಡೆಯಲಿದೆ.
ಬಾಂಗ್ಲಾದೇಶ ಎದುರು 2-0 ಅಂತರದ ಜಯ
ಗುರು ಗಂಭೀರ್ ಮಾರ್ಗದರ್ಶನದ ಮೊದಲ ಸರಣಿಯಲ್ಲಿ ಬಾಂಗ್ಲಾದೇಶವನ್ನ ಬಗ್ಗು ಬಡಿದ ಟೀಮ್ ಇಂಡಿಯಾ 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿತು. ಸಾಲಿಡ್ ಸ್ಟಾರ್ಟ್ ಪಡೆದ ಗಂಭೀರ್ ಗಾಡಿಯ ಇಂಜಿನ್ ಜರ್ನಿ ಸಾಗಿದಂತೆ ಸ್ಲೋ ಡೌನ್ ಆಗಿ ಮುಗ್ಗರಿಸಿಬಿಡ್ತು. ಬಾಂಗ್ಲಾ ವಿರುದ್ಧದ ಸರಣಿ ಬಳಿಕ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿತು. ಬರೋಬ್ಬರಿ 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಸೋತ ಭಾರತ ತಂಡ 3-0 ಅಂತರದಲ್ಲಿ ವೈಟ್ವಾಷ್ ಮುಖಭಂಗ ಅನುಭವಿಸಿತು.
ಇದನ್ನೂ ಓದಿ: ಬಾಗಲಕೋಟೆ; ಮೆಡಿಕಲ್ ಆಫೀಸರ್, ನರ್ಸ್ ಉದ್ಯೋಗಗಳಿಗೆ ಅರ್ಜಿ ಆಹ್ವಾನ
ಆನಂತರದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಗುರುವಿನ ಪಾಠ ವರ್ಕೌಟ್ ಆಗಲಿಲ್ಲ. ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿದ್ರೂ ಅಂತ್ಯದಲ್ಲಿ ಭಾರತ ತಂಡ 1-3 ಅಂತರದ ಸೋಲುಂಡಿತು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶದ ಕನಸನ್ನ ಸೋಲು ನುಚ್ಚು ನೂರಾಗಿಸಿತು.
ಹೊಸ ಸೀಸನ್, ಹೊಸ ತಂಡ, ಹೊಸ ನಾಯಕ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೈಕಲ್ನ ಹೊಸ ಸೀಸನ್ ಅನ್ನ ಹೊಸ ಹುರುಪಿನೊಂದಿಗೆ ಆರಂಭಿಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಟೀಮ್ ಇಂಡಿಯಾದಲ್ಲೂ ಹಳೆ ನೀರು ಹರಿದು ಹೋಗಿ ಹೊಸ ನೀರು ಬಂದಿದೆ. ಸೀನಿಯರ್ಗಳು ಟೆಸ್ಟ್ಗೆ ಗುಡ್ ಬೈ ಹೇಳಿದ್ದಾಗಿದೆ. ಈಗ ಹೊಸ ಆಟಗಾರರು, ಹೊಸ ನಾಯಕ, ಯುವ ಆಟಗಾರ ಪಡೆಯನ್ನ ಕಟ್ಟಿಕೊಂಡು ಗಂಭೀರ್ ಆಂಗ್ಲರ ವಿರುದ್ಧದ ಯುದ್ಧಕೆ ಸಜ್ಜಾಗಿದ್ದಾರೆ. ರನ್ಭೂಮಿಗೆ ಇಳಿಯಲು ರೆಡಿಯಾಗಿರೋ ಗಂಭೀರ್ ಮುಂದೆ ಕಠಿಣ ಸವಾಲುಗಳಿವೆ.
ಇದನ್ನೂ ಓದಿ: ಕಾಲ್ತುಳಿತದಲ್ಲಿ RCB ಅಭಿಮಾನಿ ನಿಧನ.. ಮೊಮ್ಮಗನ ಅಗಲಿಕೆ ನೋವಿನಲ್ಲಿದ್ದ ಅಜ್ಜಿಯೂ ಕೊನೆಯುಸಿರು
ಗಂಭೀರ್ಗೆ ‘ಫ್ರೀ ಹ್ಯಾಂಡ್’.. ಷರತ್ತುಗಳು ಅನ್ವಯ
ಬಿಸಿಸಿಐ ಬಾಸ್ಗಳು ಗಂಭೀರ್ಗೆ ಫ್ರಿ ಹ್ಯಾಂಡ್ ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಕೊನೆ ಟೆಸ್ಟ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾನೇ ಬೆಂಚ್ ಕಾದಿದ್ರು ಅನ್ನೋದು ಗಂಭೀರ್ ಪವರ್ ಎಷ್ಟಿದೆ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್. ಇದೀಗ ಇಂಗ್ಲೆಂಡ್ ಸರಣಿಗೆ ಪ್ರಕಟವಾಗಿರೋ ತಂಡದ ಆಯ್ಕೆ, ನಾಯಕತ್ವದ ಹಸ್ತಾಂತರ, ಭವಿಷ್ಯದ ಫ್ಲಾನ್ ಎಲ್ಲಾ ವಿಚಾರದಲ್ಲೂ ಗಂಭೀರ್ಗೆ ಫ್ರಿ ಹ್ಯಾಂಡ್ ನೀಡಲಾಗಿದೆ. ಜೊತೆಗೆ ಷರತ್ತನ್ನೂ ವಿಧಿಸಲಾಗಿದೆ. ಒಂದು ವೇಳೆ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಕ್ವಾಲಿಟಿ ಪರ್ಫಾಮೆನ್ಸ್ ನೀಡದಿದ್ರೆ, ಟೆಸ್ಟ್ ಫಾರ್ಮೆಟ್ನಿಂದ ಗಂಭೀರ್ ತಲೆದಂಡವಾಗಲಿದೆ ಅನ್ನೋದು ಬಿಸಿಸಿಐ ಮೂಲದ ಮಾಹಿತಿ. ಈ ಹಿಂದೆಯೇ ಟೆಸ್ಟ್ ಫಾರ್ಮೆಟ್ಗೆ ಸಪರೇಟ್ ಕೋಚ್ ನೇಮಿಸೋ ಚರ್ಚೆ ಬಿಸಿಸಿಐ ವಲಯದಲ್ಲಿ ನಡೆದಿತ್ತು. ಗಂಭೀರ್ ಫೇಲ್ ಆದ್ರೆ ಆ ಬಗ್ಗೆ ಮತ್ತೊಮ್ಮೆ ಚಿಂತಿಸಲು ಬಾಸ್ಗಳು ನಿರ್ಧರಿಸಿದ್ದಾರೆ.
ಅನಾನುಭವಿ ನಾಯಕ, ಅನಾನುಭವಿ ಆಟಗಾರರು
ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಟೀಮ್ ಇಂಡಿಯಾ ನಾಯಕನ ಪಟ್ಟವೇರಿರೋ ಶುಭ್ಮನ್ ಗಿಲ್ಗೆ ಅನುಭವದ ಕೊರತೆಯಿದೆ. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ತಂಡವನ್ನ ಮುನ್ನಡೆಸಿದ್ದಾರೆ. ಗಿಲ್ಗೆ ನೆರವಾಗಲು ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡದಲ್ಲಿಲ್ಲ. ಗಂಭೀರ್ ಆಫ್ ದ ಫೀಲ್ಡ್ನಲ್ಲಿ ಏನೇ ಗೇಮ್ ಪ್ಲಾನ್ ಮಾಡಿದ್ರೂ ಅದನ್ನ ಆನ್ಫೀಲ್ಡ್ನಲ್ಲಿ ಗಿಲ್ ಎಕ್ಸಿಕ್ಯೂಟ್ ಮಾಡಬೇಕಿದೆ. ಅನಾನುಭವಿ ನಾಯಕನನ್ನ ಇಟ್ಟುಕೊಂಡು ಇಂಗ್ಲೆಂಡ್ ಟೈಗರ್ಸ್ನ ಖೆಡ್ಡಾಗೆ ಕೆಡವೋದು ಗಂಭೀರ್ಗೆ ದೊಡ್ಡ ಸವಾಲಾಗಲಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಒಂಟಿ ಕಾಲು ಪತ್ತೆ ಕೇಸ್ನ ರಹಸ್ಯ ಬಯಲು.. ಥ್ರಿಲ್ಲಿಂಗ್ ಕ್ರೈಂ ಇನ್ವೆಸ್ಟಿಗೇಷನ್ ಸ್ಟೋರಿ..
ಇಂಗ್ಲೆಂಡ್ ಪ್ರವಾಸದ ತಂಡದಲ್ಲಿರೋ ಕೆಲವರನ್ನ ಹೊರತುಪಡಿಸಿದ್ರೆ ಅನಾನುಭವಿ ಆಟಗಾರರೇ ತಂಡದಲ್ಲಿದ್ದಾರೆ. ಕೆಲವರು ಡೆಬ್ಯೂ ಮಾಡೋಕೆ ಸಜ್ಜಾಗಿದ್ರೆ ಡೆಬ್ಯೂ ಮಾಡಿರೋ ಇನ್ನು ಕೆಲವರಿಗೆ ಇಂಗ್ಲೆಂಡ್ನಲ್ಲಿ ಆಡಿದ ಅನುಭವೇ ಇಲ್ಲ. ಇಂಗ್ಲೆಂಡ್ನಂತ ಟಫ್ ಪ್ಲೇಯಿಂಗ್ ಕಂಡಿಷನ್ಸ್ನಲ್ಲಿ ಯುವ ಆಟಗಾರರಿಂದ ಗಂಭೀರ್ ಹೇಗೆ ಪರ್ಫಾಮೆನ್ಸ್ ಹೊರ ತೆಗಿತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
'I’m always under pressure.. ಇಂಗ್ಲೆಂಡ್ ಫ್ಲೈಟ್ ಹತ್ತೋಕು ಮುನ್ನ ಗಂಭೀರ್ ಹೇಳಿದ ಮಾತಿದು. ಒತ್ತಡದಲ್ಲೇ ಟೆಸ್ಟ್ ಸರಣಿಯನ್ನ ಆಡಲು ಆಂಗ್ಲರ ನಾಡಿಗೆ ಕಾಲಿಟ್ಟಿರೋ ಗಂಭೀರ್ ರಿಯಲ್ ಟೆಸ್ಟ್ನಲ್ಲಿ ಗೆಲ್ತಾರಾ? ಹೆಡ್ಕೋಚ್ ಪಟ್ಟವನ್ನ ಉಳಿಸಿಕೊಳ್ತಾರಾ? ಕಾದು ನೋಡೋಣ.
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಶಾಕಿಂಗ್ ನ್ಯೂಸ್.. BCCIನಲ್ಲಿ ಬದಲಾವಣೆಯ ಬಿಸಿಬಿಸಿ ಚರ್ಚೆ..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ