/newsfirstlive-kannada/media/post_attachments/wp-content/uploads/2025/05/bumrah-vs-gill.jpg)
ಇಂಡೋ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಕದನ ಆರಂಭವಾಗಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನ ಕೈಚೆಲ್ಲಿರೋ ಟೀಮ್ ಇಂಡಿಯಾಗೆ ಇವತ್ತಿನಿಂದ ಶುರುವಾಗಿರುವ ಎಡ್ಜ್ಬಾಸ್ಟನ್ ಟೆಸ್ಟ್ ನಿಜಕ್ಕೂ ಅಗ್ನಿಪರೀಕ್ಷೆ ಆಗಿದೆ.
ಕಳೆದ 58 ವರ್ಷಗಳಲ್ಲಿ ಈ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ 8 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಪೈಕಿ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಸತತ ಸೋಲುಂಡಿರೋ ಅನ್ಲಕ್ಕಿ ಪಿಚ್ನಲ್ಲಿ ಅದೃಷ್ಟದ ಹುಡುಕಾಟ ನಡೆಸಬೇಕಿದೆ. ಇದರ ಮಧ್ಯೆ ಮತ್ತೆ ಟಾಸ್ ಸೋತಿರುವ ಭಾರತ, ಮೊದಲು ಬ್ಯಾಟಿಂಗ್ ಮಾಡಲಿದೆ. ಇಂಗ್ಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಇನ್ನು ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಮೂವರು ಆಟಗಾರರಿಗೆ ಕೊಕ್ ನೀಡಲಾಗಿದೆ. ವೇಗಿ ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಿದ್ರೆ, ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಶಾರ್ದುಲ್ ಠಾಕೂರ್, ಸಾಯಿ ಸುದರ್ಶನ್ಗೆ ಕೊಕ್ ನೀಡಲಾಗಿದೆ. ಇನ್ನು, ಇವರ ಬದಲಿಯಾಗಿ ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ ತಂಡಕ್ಕೆ ಎಂಟ್ರಿ ಆಗಿದ್ದಾರೆ.
ಇದನ್ನೂ ಓದಿ: 18 ತಿಂಗಳಿಂದ ನೋವಲ್ಲೇ ನರಳಾಟ.. ತಂಡಕ್ಕಾಗಿ ಜೀವ ಸವೆಸಿದ ಬೂಮ್ರಾ..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ