/newsfirstlive-kannada/media/post_attachments/wp-content/uploads/2025/07/Shardul.jpg)
ಗೆಲ್ಲಬಹುದಾಗಿದ್ದ ಪಂದ್ಯವನ್ನ ಸಾಲು ಸಾಲು ತಪ್ಪು ಮಾಡಿ ಸೋತ ಟೀಮ್ ಇಂಡಿಯಾ 2ನೇ ಟೆಸ್ಟ್ಗೆ ರೆಡಿಯಾಗಿದೆ. ಅನ್ಲಕ್ಕಿ ಸ್ಟೇಡಿಯಂನಲ್ಲಿ ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ಮಣಿಸಿ ಇತಿಹಾಸ ಬದಲಿಸೋ ಲೆಕ್ಕಾಚಾರ ಹಾಕಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆಸಿದ್ದು, ಹಲವು ಬದಲಾವಣೆಗಳೊಂದಿಗೆ ಇಂದು ಟೀಮ್ ಇಂಡಿಯಾ ಅಖಾಡಕ್ಕಿಳಿಯಲಿದೆ. ಆಂಗ್ಲರಿಗೆ ಸೋಲಿನ ರುಚಿ ತೋರಿಸಲು ಟೀಮ್ ಇಂಡಿಯಾ ಪ್ಲಾನ್ ಏನು ಅನ್ನೋ ವಿವರ ಇಲ್ಲಿದೆ.
ಟೀಮ್ ಇಂಡಿಯಾಗೆ ಅಗ್ನಿಪರೀಕ್ಷೆ..!
ಇಂಡೋ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನ ಕೈ ಚೆಲ್ಲಿರೋ ಟೀಮ್ ಇಂಡಿಯಾಗೆ ಎಡ್ಜ್ಬಾಸ್ಟನ್ನಲ್ಲಿ ಅಗ್ನಿಪರೀಕ್ಷೆ ಕಾದಿದೆ. ಕಳೆದ 58 ವರ್ಷಗಳಲ್ಲಿ ಈ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ 8 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಪೈಕಿ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಸತತ ಸೋಲುಂಡಿರೋ ಅನ್ಲಕ್ಕಿ ಪಿಚ್ನಲ್ಲಿ ಅದೃಷ್ಟದ ಹುಡುಕಾಟ ನಡೆಸಬೇಕಿದೆ.
ಇದನ್ನೂ ಓದಿ: ಈಗೀಗ ಮೊಹಮ್ಮದ್ ಸಿರಾಜ್ ಅಟ್ಟರ್ ಫ್ಲಾಪ್ ಆಗಲು ಕಾರಣನೇ ಕಿಂಗ್ ಕೊಹ್ಲಿ..!
ಬ್ಯಾಟಿಂಗ್ ಓಕೆ.. ಫೀಲ್ಡಿಂಗ್, ಬೌಲಿಂಗ್ನದ್ದೇ ಚಿಂತೆ..!
ಟೀಮ್ ಇಂಡಿಯಾದ ಟಾಪ್ ಆರ್ಡರ್, ಮಿಡಲ್ ಆರ್ಡರ್ ಬ್ಯಾಟರ್ಸ್ ಸಾಲಿಡ್ ಟಚ್ನಲ್ಲಿದ್ದಾರೆ. ಲೀಡ್ಸ್ ಟೆಸ್ಟ್ನಲ್ಲಿ ಶತಕದ ಮೇಲೆ ಶತಕ ಸಿಡಿಸಿ ಮಿಂಚಿದ್ದಾರೆ. ಹೀಗಾಗಿ ಎಡ್ಜ್ಬಾಸ್ಟನ್ ಸಮರಕ್ಕೆ ಸಜ್ಜಾಗಿರೋ ಟೀಮ್ ಇಂಡಿಯಾಗೆ ಬ್ಯಾಟಿಂಗ್ನ ಟೆನ್ಶನ್ ಅಷ್ಟೇನು ಇಲ್ಲ. ಫೀಲ್ಡಿಂಗ್ ಹಾಗೂ ಬೌಲಿಂಗ್ನದ್ದೇ ತಲೆನೋವಾಗಿದೆ. ಕ್ಯಾಚ್ ಡ್ರಾಪ್ ಯಡವಟ್ಟುಗಳು, ಬೌಲಿಂಗ್ ವೈಫಲ್ಯ ಮೊದಲ ಟೆಸ್ಟ್ನಲ್ಲಿ ಸೋಲಿಗೆ ಗುರಿ ಮಾಡಿದ್ವು. ಹೀಗಾಗಿ 2ನೇ ಟೆಸ್ಟ್ನಲ್ಲಿ ಕೆಲ ಬದಲಾವಣೆಗಳಾಗೋದು ಕನ್ಫರ್ಮ್.!
ಶಾರ್ದೂಲ್ ಔಟ್.. ನಿತೀಶ್ ರೆಡ್ಡಿ ಇನ್..!
ಮೊದಲ ಟೆಸ್ಟ್ ಪಂದ್ಯದಲ್ಲಿ ಎಫೆಕ್ಟಿವ್ ಅನಿಸಿದ ಶಾರ್ದೂಲ್ ಠಾಕೂರ್ ಬೆಂಚ್ಗೆ ಸೀಮಿತವಾಗೋ ಸಾಧ್ಯತೆ ದಟ್ಟವಾಗಿದೆ. ಶಾರ್ದೂಲ್ ಬದಲು ನಿತೀಶ್ ಕುಮಾರ್ ರೆಡ್ಡಿ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸ ಸಜ್ಜಾಗಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಸ್ಲಿಪ್ ಕ್ಯಾಚಿಂಗ್ ಪ್ರಾಕ್ಟಿಸ್ ಕೂಡ ಮಾಡಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್ ಬದಲು ನಿತೀಶ್ ರೆಡ್ಡಿ ಆಡೋದು ಬಹುತೇಕ ಖಚಿತವಾಗಿದೆ.
ಇಬ್ಬರು ಸ್ಪಿನ್ನರ್ಗಳೊಂದಿಗೆ ಟೀಮ್ ಇಂಡಿಯಾ ಅಖಾಡಕ್ಕೆ
ಎಡ್ಜ್ಬಾಸ್ಟನ್ ಪಿಚ್ ಪಂದ್ಯ ಸಾಗಿದಂತೆ ಸ್ಪಿನ್ನರ್ಗಳಿಗೆ ನೆರವು ನೀಡಲಿದೆ. ಹೀಗಾಗಿ ಇನ್ನರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಅಸಿಸ್ಟೆಂಟ್ ಕೋಚ್ ರಿಯಾನ್ ಟೆನ್ ಡೆಸ್ಕೋಟ್ ಇದನ್ನ ಈಗಾಗಲೇ ಕನ್ಫರ್ಮ್ ಮಾಡಿದ್ದಾರೆ. ಕುಲ್ದೀಪ್ ಯಾದವ್ಗೆ ಚಾನ್ಸ್ ಸಿಗೋ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ವಿದೇಶಿ ಪಿಚ್ಗಳಲ್ಲಿ ಪರದಾಡ್ತಿರೋ ರವೀಂದ್ರ ಜಡೇಜಾನ ಡ್ರಾಪ್ ಮಾಡಿ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ನೀಡಿದ್ರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ: ‘ನನ್ನ ಖುಷಿಗೆ ನೀನೇ ಕಾರಣ’.. ರಿಷಭ್ ಪಂತ್ 10 ವರ್ಷದ ಲವ್ ಬ್ರೇಕಪ್, ಏನಾಯಿತು?
ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ ಬೌಲರ್ಸ್..!
ಟೀಮ್ ಇಂಡಿಯಾ ಕೊನೆಗೂ ಕೆಟ್ಟ ಮೇಲೆ ಬುದ್ದಿ ಕಲಿತಂತಿದೆ. ಲೋವರ್ ಆರ್ಡರ್ ಬ್ಯಾಟ್ಸ್ಮನ್ಗಳ ವೈಫಲ್ಯ, ಬೌಲರ್ಗಳು ಬ್ಯಾಟಿಂಗ್ನಲ್ಲಿ ಅಲ್ಪ ಕಾಣಿಕೆಯನ್ನೂ ನೀಡದಿದ್ದಿದ್ದು ಮೊದಲ ಟೆಸ್ಟ್ ಸೋಲಿಗೆ ಮತ್ತೊಂದು ಕಾರಣವಾಗಿತ್ತು. ತೀವ್ರ ಟೀಕೆಗಳು ವ್ಯಕ್ತವಾಗಿದ್ವು. ಇದೀಗ ಬೌಲರ್ಗಳು ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿ ಇಂದಿನ ಪಂದ್ಯಕ್ಕೆ ಸಜ್ಜಾಗಿದ್ದಾರೆ.
ಬೂಮ್ರಾ ನಡೆ ನಿಗೂಢ..!
ಇಂದಿನ ಪಂದ್ಯದ ಆರಂಭಕ್ಕೂ ಮುನ್ನ ಎಲ್ಲರಿಗೂ ಕಾಡ್ತಿರೋ ಮಿಲಿಯನ್ ಡಾಲರ್ ಪ್ರಶ್ನೆಯಿದು. ವರ್ಕ್ಲೋಡ್ ಮ್ಯಾನೇಜ್ಮೆಂಟ್ ಕಾರಣಕ್ಕೆ ಸರಣಿಯಲ್ಲಿ ಕೇವಲ 3 ಪಂದ್ಯಗಳನ್ನ ಮಾತ್ರ ಆಡೋದಾಗಿ ಬೂಮ್ರಾ ಹೇಳಿದ್ರು. ಹೀಗಾಗಿ 2ನೇ ಟೆಸ್ಟ್ನಿಂದ ಬೂಮ್ರಾ ರೆಸ್ಟ್ ಪಡೀತಾರೆ ಎನ್ನಲಾಗಿದೆ. ಕಳೆದ 2 ದಿನಗಳಿಂದ ಬೂಮ್ರಾ ನೆಟ್ಸ್ನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದಾರೆ. ರಿಯಾನ್ ಟೆನ್ ಡೆಸ್ಕೋಟ್ ಕೂಡ ಬೂಮ್ರಾ ಆಯ್ಕೆಗೆ ಲಭ್ಯ ಎಂದಿದ್ದು, ಪಂದ್ಯಕ್ಕೂ ಮುನ್ನ ಫೈನಲ್ ಕಾಲ್ ತೆಗೆದುಕೊಳ್ಳೋದಾಗಿ ಹೇಳಿದ್ದಾರೆ.
ಒಂದು ವೇಳೆ ಬೂಮ್ರಾ 2ನೇ ಟೆಸ್ಟ್ನಿಂದ ಹೊರಗುಳಿದ್ರೆ ಆಕಾಶ್ದೀಪ್ ಅಥವಾ ಎಡಗೈ ವೇಗಿ ಆರ್ಷ್ದೀಪ್ ಸಿಂಗ್ ಇಬ್ಬರಲ್ಲಿ ಒಬ್ಬರಿಗೆ ಚಾನ್ಸ್ ಸಿಗಲಿದೆ. ಆಕಾಶ್ದೀಪ್ ಕಳೆದ ಕೆಲ ದಿನದಿಂದ ಭರ್ಜರಿ ಅಭ್ಯಾಸ ನಡೆಸಿದ್ದು, ಮ್ಯಾನೇಜ್ಮೆಂಟ್ನ ಮೊದಲ ಚಾಯ್ಸ್ ಎನಿಸಿದ್ದಾರೆ. ಆರ್ಷ್ದೀಪ್ ಸಿಂಗ್ ಎಡಗೈ ವೇಗಿ ಆಗಿರೋದ್ರಿಂದ ಬೌಲಿಂಗ್ನಲ್ಲಿ ವೆರೈಟಿ ಸಿಗಲಿದೆ. ಹೀಗಾಗಿ ಇಬ್ಬರಲ್ಲಿ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ.. ಏನೇನು ಆಗಲಿದೆ?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ