ಟೀಮ್ ಇಂಡಿಯಾಕ್ಕೆ ಬಿಗ್​ ಶಾಕ್; ಗಿಲ್​​ ಪಡೆಗೆ ಸೋಲು.. ಡಕೆಟ್ ಸೆಂಚುರಿ, ಕೊನೆ ದಿನದಲ್ಲಿ ಇಂಗ್ಲೆಂಡ್​​ಗೆ​ ಲಕ್​​!

author-image
Bheemappa
Updated On
ಟೀಮ್ ಇಂಡಿಯಾಕ್ಕೆ ಬಿಗ್​ ಶಾಕ್; ಗಿಲ್​​ ಪಡೆಗೆ ಸೋಲು.. ಡಕೆಟ್ ಸೆಂಚುರಿ, ಕೊನೆ ದಿನದಲ್ಲಿ ಇಂಗ್ಲೆಂಡ್​​ಗೆ​ ಲಕ್​​!
Advertisment
  • 149 ರನ್​ಗಳನ್ನು ಬಾರಿಸಿದ ಇಂಗ್ಲೆಂಡ್​ ಓಪನರ್​ ಬೆನ್​​ ಡಕೆಟ್
  • ಟೀಮ್ ಇಂಡಿಯಾಕ್ಕೆ ಕೊನೆ ದಿನದಲ್ಲಿ ಭಾರೀ ನಿರಾಸೆ ಆಯಿತು
  • ವಿಕೆಟ್​ಗಳನ್ನ​ ಬೇಟೆಯಾಡಲು ಪರದಾಡಿದ ಬೂಮ್ರಾ, ಸಿರಾಜ್ ​

ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಮ್ ಇಂಡಿಯಾ ಜೊತೆಗಿನ ಮೊದಲ ಟೆಸ್ಟ್​ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿದೆ. 2ನೇ ಇನ್ನಿಂಗ್ಸ್​ನಲ್ಲಿ ಸಾಧಾರಣ ಮೊತ್ತದ ಟಾರ್ಗೆಟ್​ ನೀಡಿದ್ದ ಭಾರತ ಸೋಲೋಪ್ಪಿಕೊಂಡಿದೆ.

ಲೀಡ್ಸ್​​​ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ​ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ಕ್ಯಾಪ್ಟನ್​ ಬೆನ್​​ ಸ್ಟೋಕ್ಸ್​ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಮೊದಲ ಬ್ಯಾಟಿಂಗ್ ಮಾಡಿ 471 ರನ್​ಗಳ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್​ ತಂಡ 465 ರನ್​ಗಳಿಗೆ ಆಲೌಟ್​ ಆಗಿತ್ತು.

publive-image

ಇದರಿಂದ ಟೀಮ್ ಇಂಡಿಯಾ ಕೇವಲ 6 ರನ್​ಗಳನ್ನು ಮುನ್ನಡೆ ಪಡೆದುಕೊಂಡು 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿತ್ತು. ಈ ಎರಡನೇ ಇನ್ನಿಂಗ್ಸ್​ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರು ಅದ್ಭುತವಾದ ಸೆಂಚುರಿ ಬಾರಿಸಿದ್ದರು. 4ನೇ ದಿನದಾಟದ ಕೊನೆಯ ಸಮಯದಲ್ಲಿ ಭಾರತ ತಂಡ ಆಲೌಟ್ ಆಗಿತ್ತು. ಇದರಿಂದಾಗಿ ಟೀಮ್ ಇಂಡಿಯಾ ಒಟ್ಟು 371 ರನ್​ಗಳ ಟಾರ್ಗೆಟ್​ ಅನ್ನು ಇಂಗ್ಲೆಂಡ್ ತಂಡಕ್ಕೆ ನೀಡಿತ್ತು.

ಟೆಸ್ಟ್​ನಲ್ಲಿ 371 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್​ಗೆ ಒಂದು ದಿನ ಇದ್ದಿದ್ದರಿಂದ ಸುಲಭವಾಗಿಯೇ ಗುರಿಯನ್ನು ಮುಟ್ಟಿದೆ. ಓಪನಿಂಗ್​ನಲ್ಲಿ ಅತ್ಯದ್ಭುತವಾಗಿ ರನ್​ಗಳು ತಂಡಕ್ಕೆ ಒಲಿದು ಬಂದವು. 188 ರನ್​ಗಳ ಜೊತೆಯಾಟವನ್ನು ಓಪನರ್ಸ್​ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಆಡಿದರು. ಪಂದ್ಯ ಗೆಲ್ಲಲು ಇದೇ ಮುಖ್ಯ ಕಾರಣವಾಯಿತು.

ಇದನ್ನೂ ಓದಿ: ಲಕ್ ಅಂದ್ರೆ ಇದು ಅಲ್ಲವೇ..! ಸತತ 2 ವರ್ಷ ಶ್ರಮ, ಛಲ ಬಿಡದ ಮಹಿಳೆಗೆ ಸಿಕ್ಕ 2.69 ಕ್ಯಾರೆಟ್ ವಜ್ರ

publive-image

ಇದರಲ್ಲಿ ಜ್ಯಾಕ್ ಕ್ರಾಲಿ 65 ರನ್​ಗೆ ವಿಕೆಟ್​ ಒಪ್ಪಿಸಿದರೆ, ಬೆನ್ ಡಕೆಟ್ ಅತ್ಯಮೂಲ್ಯವಾದ 149 ರನ್​ಗಳನ್ನು ಸಿಡಿಸಿ ದೊಡ್ಡ ಕೊಡುಗೆ ನೀಡಿದರು. ಜೋ ರೂಟ್​ ಹಾಫ್​ ಸೆಂಚುರಿ ಜೆಮಿಯಾ ಸ್ಮಿತ್​ 44 ರನ್​ಗಳಿಂದ ಈ ಇಬ್ಬರೂ ಇಂಗ್ಲೆಂಡ್​ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರಿಂದ ಇಂಗ್ಲೆಂಡ್​ 373 ರನ್​ ಬಾರಿಸಿ, 5 ವಿಕೆಟ್​ಗಳಿಂದ ಅಮೋಘವಾದ ಗೆಲುವು ಪಡೆಯಿತು.

ಕೊನೆಯ ದಿನದಲ್ಲಿ ಇಂಗ್ಲೆಂಡ್​ ಬ್ಯಾಟರ್​ಗಳ ವಿಕೆಟ್​ ಪಡೆಯಲು ಟೀಮ್ ಇಂಡಿಯಾದ ಬೌಲರ್​​ಗಳು ದೊಡ್ಡ ಹರಸಾಹಸವೇ ಪಡಬೇಕಾಯಿತು. ಜಸ್​ಪ್ರಿತ್ ಬೂಮ್ರಾ, ಸಿರಾಜ್, ಕನ್ನಡಿಗ ಪ್ರಸಿದ್ಧ್ ಕೃಷ್ಣ ಸೇರಿದಂತೆ ಎಲ್ಲ ಬೌಲರ್​ಗಳು ಆಂಗ್ಲರ ಬೇಟೆಯಾಡಲು ಸಾಕಷ್ಟು ಶ್ರಮ ಪಟ್ಟರು. ಆದರೂ ಉಪಯೋಗಕ್ಕೆ ಬರಲಿಲ್ಲ. ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಜಡೇಜಾ ವಿಕೆಟ್​ ಪಡೆದರು ಅಷ್ಟೇ. ಉಳಿದವರಿಗೆ ವಿಕೆಟ್​ ಬೀಳಲಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment