newsfirstkannada.com

Video: ಹನಿ ಹನಿ ನೀರಿಗೂ ದೆಹಲಿಯಲ್ಲಿ ಹೋರಾಟ.. ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಶಾಕ್ ಆಗೋದು ಪಕ್ಕಾ!

Share :

Published May 31, 2024 at 6:30pm

Update May 31, 2024 at 6:44pm

    ಇಡೀ ಲಾರಿಯನ್ನೇ ಕಾಣದಂತೆ ಸುತ್ತಲೂ ನಿಲ್ಲುವ ನಗರದ ಜನರು

    ನಗರದ ಬೀದಿ ಬೀದಿಗಳಲ್ಲೂ ತಲೆದೂರಿದ ವಾಟರ್​ ಪ್ರಾಬ್ಲಮ್​ಗಳು

    ಲಾರಿ ಬರುತ್ತಿರುವಾಗಲೇ ಓಡಿ ಬರುವ ಪುರುಷರು, ಮಹಿಳೆಯರು

ನವದೆಹಲಿ: ದೇಶದ್ಯಾಂತ ಕೆಲವು ದಿನ ಆರ್ಭಟಿಸಿದ್ದ ಮಳೆ, ಈಗ ಸಂಪೂರ್ಣವಾಗಿ ಕಾಣೆಯಾಗಿದೆ. ಹೀಗಾಗಿ ಹಲವು ಕಡೆ ನೀರಿನ ಸಮಸ್ಯೆ ಮತ್ತೆ ಉಲ್ಬಣಿಸಿದೆ. ದೆಹಲಿಯಲ್ಲಿ ತಾಪಮಾನ 50ರ ಗಡಿ ದಾಟಿರುವುದು ಎಲ್ಲರನ್ನು ಆತಂಕಕ್ಕೆ ತಳ್ಳಿದೆ. ಇದರ ಜೊತೆಗೆ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಏರ್ಪಟ್ಟಿದೆ.

ಸದ್ಯ ದೆಹಲಿಯ ಜನರು ಈಗ ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಚಾಣಕ್ಯಪುರಿಯ ಸಂಜಯ್ ಕ್ಯಾಂಪ್ ಪ್ರದೇಶ, ಪೂರ್ವ ದೆಹಲಿಯ ಗೀತಾ ಕಾಲೋನಿ, ಮೆಹ್ರಾಲಿ ಮತ್ತು ಚತ್ತರ್‌ಪುರ ಸೇರಿದಂತೆ ನಗರದ ವಿವಿಧ ಭಾಗಗಳು ಹೆಚ್ಚು ನೀರಿನ ಸಮಸ್ಯೆ ತಲೆದೂರಿದೆ. ಅದು ಹೇಗೆಂದರೆ ದೆಹಲಿಯಲ್ಲಿರುವ ಎಎಪಿ ಸರ್ಕಾರ ಏರಿಯಾಗಳಿಗೆ ಲಾರಿ ಮೂಲಕ ನೀರನ್ನು ಸರಬಾರಾಜು ಮಾಡುತ್ತಿದೆ. ಈ ಲಾರಿಗಳು ಇನ್ನು ರಸ್ತೆಯಲ್ಲಿ ಬರುತ್ತಿರುವಾಗಲೇ ಓಡೋಡಿ ಬರುವ ಮಹಿಳೆಯರು, ಪುರುಷರು ಲಾರಿ ಮೇಲೆ ಏರಿ ಪೈಪ್ ಹಾಕಿ ಬಿಡುತ್ತಾರೆ. ಲಾರಿ ಸುತ್ತಲೂ ಜನ ಮೇಲೆ, ಕೆಳಗೆ ನಿಲ್ಲುವುದರಿಂದ ಲಾರಿ ಕಾಣುವುದಿಲ್ಲ. ಆ ಮಟ್ಟಿಗೆ ಜನ ನೀರಿಗಾಗಿ ತುಂಬಿಕೊಂಡಿರುತ್ತಾರೆ. ಸದ್ಯ ಇದರ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರನ್ನ ಅಚ್ಚರಿ ಮೂಡಿಸಿದೆ.

 

ಇನ್ನು ಈ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್​ ನೇತೃತ್ವದ ಎಎಪಿ ಸರ್ಕಾರ ಸುಪ್ರೀಂ ಕೋರ್ಟ್​ ಮೊರೆ ಹೋಗಿದೆ. ಇನ್ನು ಒಂದು ತಿಂಗಳುಗಳ ಕಾಲ ನಮಗೆ ನೀರಿನ ಸಮಸ್ಯೆ ಹೀಗೆ ಇರಲಿದೆ. ಹೀಗಾಗಿ ಹರಿಯಾಣ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಬೇಕು ಎಂದು ಕೇಂದ್ರ ಮತ್ತು ಕೋರ್ಟ್‌ಗೆ ಎಎಪಿ ಸರ್ಕಾರ ಮನವಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಹನಿ ಹನಿ ನೀರಿಗೂ ದೆಹಲಿಯಲ್ಲಿ ಹೋರಾಟ.. ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಶಾಕ್ ಆಗೋದು ಪಕ್ಕಾ!

https://newsfirstlive.com/wp-content/uploads/2024/05/DELHI_WATER.jpg

    ಇಡೀ ಲಾರಿಯನ್ನೇ ಕಾಣದಂತೆ ಸುತ್ತಲೂ ನಿಲ್ಲುವ ನಗರದ ಜನರು

    ನಗರದ ಬೀದಿ ಬೀದಿಗಳಲ್ಲೂ ತಲೆದೂರಿದ ವಾಟರ್​ ಪ್ರಾಬ್ಲಮ್​ಗಳು

    ಲಾರಿ ಬರುತ್ತಿರುವಾಗಲೇ ಓಡಿ ಬರುವ ಪುರುಷರು, ಮಹಿಳೆಯರು

ನವದೆಹಲಿ: ದೇಶದ್ಯಾಂತ ಕೆಲವು ದಿನ ಆರ್ಭಟಿಸಿದ್ದ ಮಳೆ, ಈಗ ಸಂಪೂರ್ಣವಾಗಿ ಕಾಣೆಯಾಗಿದೆ. ಹೀಗಾಗಿ ಹಲವು ಕಡೆ ನೀರಿನ ಸಮಸ್ಯೆ ಮತ್ತೆ ಉಲ್ಬಣಿಸಿದೆ. ದೆಹಲಿಯಲ್ಲಿ ತಾಪಮಾನ 50ರ ಗಡಿ ದಾಟಿರುವುದು ಎಲ್ಲರನ್ನು ಆತಂಕಕ್ಕೆ ತಳ್ಳಿದೆ. ಇದರ ಜೊತೆಗೆ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಏರ್ಪಟ್ಟಿದೆ.

ಸದ್ಯ ದೆಹಲಿಯ ಜನರು ಈಗ ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಚಾಣಕ್ಯಪುರಿಯ ಸಂಜಯ್ ಕ್ಯಾಂಪ್ ಪ್ರದೇಶ, ಪೂರ್ವ ದೆಹಲಿಯ ಗೀತಾ ಕಾಲೋನಿ, ಮೆಹ್ರಾಲಿ ಮತ್ತು ಚತ್ತರ್‌ಪುರ ಸೇರಿದಂತೆ ನಗರದ ವಿವಿಧ ಭಾಗಗಳು ಹೆಚ್ಚು ನೀರಿನ ಸಮಸ್ಯೆ ತಲೆದೂರಿದೆ. ಅದು ಹೇಗೆಂದರೆ ದೆಹಲಿಯಲ್ಲಿರುವ ಎಎಪಿ ಸರ್ಕಾರ ಏರಿಯಾಗಳಿಗೆ ಲಾರಿ ಮೂಲಕ ನೀರನ್ನು ಸರಬಾರಾಜು ಮಾಡುತ್ತಿದೆ. ಈ ಲಾರಿಗಳು ಇನ್ನು ರಸ್ತೆಯಲ್ಲಿ ಬರುತ್ತಿರುವಾಗಲೇ ಓಡೋಡಿ ಬರುವ ಮಹಿಳೆಯರು, ಪುರುಷರು ಲಾರಿ ಮೇಲೆ ಏರಿ ಪೈಪ್ ಹಾಕಿ ಬಿಡುತ್ತಾರೆ. ಲಾರಿ ಸುತ್ತಲೂ ಜನ ಮೇಲೆ, ಕೆಳಗೆ ನಿಲ್ಲುವುದರಿಂದ ಲಾರಿ ಕಾಣುವುದಿಲ್ಲ. ಆ ಮಟ್ಟಿಗೆ ಜನ ನೀರಿಗಾಗಿ ತುಂಬಿಕೊಂಡಿರುತ್ತಾರೆ. ಸದ್ಯ ಇದರ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು ನೋಡುಗರನ್ನ ಅಚ್ಚರಿ ಮೂಡಿಸಿದೆ.

 

ಇನ್ನು ಈ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್​ ನೇತೃತ್ವದ ಎಎಪಿ ಸರ್ಕಾರ ಸುಪ್ರೀಂ ಕೋರ್ಟ್​ ಮೊರೆ ಹೋಗಿದೆ. ಇನ್ನು ಒಂದು ತಿಂಗಳುಗಳ ಕಾಲ ನಮಗೆ ನೀರಿನ ಸಮಸ್ಯೆ ಹೀಗೆ ಇರಲಿದೆ. ಹೀಗಾಗಿ ಹರಿಯಾಣ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸರಬರಾಜು ಮಾಡಬೇಕು ಎಂದು ಕೇಂದ್ರ ಮತ್ತು ಕೋರ್ಟ್‌ಗೆ ಎಎಪಿ ಸರ್ಕಾರ ಮನವಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More