ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್ ಎಂದು ಭಾವಿಸಿದ್ದೇನೆ
ಗೆಲುವಿನೊಂದಿಗೆ ಇಂದಿನ ಪಂದ್ಯ ಮುಗಿಸಲು ಸಂತೋಷವಾಗುತ್ತಿದೆ
ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದ್ದೆ! ಎಂದ ಆರ್ಸಿಬಿ ನಾಯಕ
‘‘ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್ ಎಂದು ಭಾವಿಸಿದ್ದೇನೆ. ಮಳೆ ನೀಡಿದ ವಿರಾಮದಲ್ಲಿ ನಾನು ಮತ್ತು ವಿರಾಟ್ ಕೊಹ್ಲಿ 140-150 ರನ್ ಬಾರಿಸುವ ಟಾರ್ಗೆಟ್ ಬಗ್ಗೆ ಮಾತನಾಡುತ್ತಿದ್ದೆವು’’
ಇದು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜಯದ ಬಳಿಕ ಹೇಳಿದ ಮಾತುಗಳು. ಆರ್ಸಿಬಿ 27 ರನ್ಗಳ ಭರ್ಜರಿ ಗೆಲುವಿನ ಬಳಿಕ ಮತ್ತು ಸಿಎಸ್ಕೆಯನ್ನು ಸೋಲಿಸಿದ ಸಂತಸದಲ್ಲಿ ಮಾತನಾಡಿದ್ದಾರೆ.
140-150 ರನ್ ಬಾರಿಸುವ ಟಾರ್ಗೆಟ್
‘‘ಎಂತಹ ರಾತ್ರಿ. ನಂಬಲಾಗದಂತಹ ಮತ್ತು ಉತ್ತಮ ವಾತವರಣ. ಗೆಲುವಿನೊಂದಿಗೆ ಇಂದಿನ ಪಂದ್ಯ ಮುಗಿಸಲು ಸಂತೋಷವಾಗುತ್ತಿದೆ. ಮೊದಲು ಬ್ಯಾಟಿಂಗ್ ಮಾಡುವುದರಿಂದ, ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್ ಎಂದು ಭಾವಿಸಿದ್ದೇನೆ. ಮಳೆ ನೀಡಿದ ವಿರಾಮದಲ್ಲಿ ನಾನು ಮತ್ತು ವಿರಾಟ್ ಕೊಹ್ಲಿ 140-150 ರನ್ ಬಾರಿಸುವ ಟಾರ್ಗೆಟ್ ಬಗ್ಗೆ ಮಾತನಾಡುತ್ತಿದ್ದೆವು. ಮಳೆಯಿಂದಾಗಿ ಪಿಚ್ ಒದ್ದೆಯಾಗುತ್ತದೆ ಎಂದು ಅಂಪೈರ್ ಮಾತನಾಡುತ್ತಿದ್ದರು. ಅವರು ಆಟವನ್ನು ಮುಂದೂಡಲು ಬಯಸಿದರು. ಅದು ನಿಜವಾಗಿಯೂ ಅರ್ಥಪೂರ್ಣವಾಗಿದೆ’’ ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ಇದನ್ನೂ ಓದಿ: RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?
ಬಳಿಕ ಮಾತು ಮುಂದುವರೆಸಿದ ಅವರು, ‘‘ನಾನು ಸ್ಯಾಂಟ್ನರ್ಗೆ ಹೇಳುತ್ತಿದ್ದೆ, ಇದು ರಾಂಚಿಯಲ್ಲಿ ನಡೆದಂತೆ 5ನೇ ದಿನ ಟೆಸ್ಟ್ ಪಂದ್ಯವಾಗಿದೆ. ಅದರಲ್ಲಿ 200 ರನ್ ಗಳಿಸೋದು ಕೂಡ ನಂಬಲಸಾಧ್ಯವಾಗಿತ್ತು. ಕಳೆದ 6 ಪಂದ್ಯಗಳಲ್ಲಿ ಬ್ಯಾಟರ್ಗಳು ಉತ್ತಮ ಉದ್ದೇಶ ಮತ್ತು ಉತ್ತಮ ಸ್ಟೈಕ್ ರೇಟ್ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ’’ ಎಂದರು.
ಧೋನಿ ಬಗ್ಗೆ ಯೋಚಿಸಿದ್ದೆ
ನಾವು ಮೊದಲೇ ನಿಧನವಾಗಿ ಆಡುತ್ತಿದ್ದೆವು. ಹೆಚ್ಚಿನ ಉದ್ದೇಶವನ್ನು ಬಯಸಿದ್ದೆವು. 175 ರನ್ ಬಾರಿಸಲು ಯೋಚಿಸಿದ್ದೆವು. ಅದು ಸ್ವಲ್ಪ ಹತ್ತಿರವಾಯಿತು. ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದೆ. ಆತ ಅದನ್ನು ಹಲವು ಬಾರಿ ಮೀರಿಸಿದ್ದಾನೆ. ಒದ್ದೆಯಾದ ಚೆಂಡಿನೊಂದಿಗೆ ನಾವು ಬೌಲಿಂಗ್ ಮಾಡಿದ ರೀತಿ ನಂಬಲಾಗದಂತಿತ್ತು. ಅದನ್ನು ನಾವು ಬದಲಾಯಿಸಲು ಯತ್ನಿಸಿದೆವು.
ಇದನ್ನೂ ಓದಿ: RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?
ಮ್ಯಾನ್ ಆಫ್ ದಿ ಮ್ಯಾಚ್ ಯಶ್ ದಯಾಳ್ಗೆ ಅರ್ಪಿಸುತ್ತೇನೆ
ನಾನು ಮ್ಯಾನ್ ಆಫ್ ದಿ ಮ್ಯಾಚ್ ಅನ್ನು ಯಶ್ ದಯಾಳ್ಗೆ ಅರ್ಪಿಸುತ್ತೇನೆ. ಅವರು ಬೌಲಿಂಗ್ ಮಾಡಿದ ರೀತಿ ನಂಬಲಸಾಧ್ಯವಾದಂತಿತ್ತು. ಯಾರ್ಕರ್ ಮೊದಲ ಎಸೆತದಲ್ಲೆ ವರ್ಕೌಟ್ ಆಗಿಲ್ಲ. ಬಳಿಕ ವೇಗವಾಗಿ ಎಸೆಯಲು ಯತ್ನಿಸಿದರು. ಅದು ಚೆನ್ನಾಗಿ ಕೆಲಸ ಮಾಡಿತು. ಸಿಎಸ್ಕೆ ಮತ್ತು ಆರ್ಸಿಬಿ ನಂಬಲಾಗದ ವಾತವರಣ ಮತ್ತು ಬೆಂಬಲ ನೀಡಿದ ಪ್ರೇಕ್ಷಕರಿಗೆ ಧನ್ಯವಾದ. ನಾವು 6 ಪಂದ್ಯ ಗೆದ್ದಿದ್ದು ನಿಜವಾಗಿ ಮುಖ್ಯವಾಗಿದೆ ಎಂದು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್ ಎಂದು ಭಾವಿಸಿದ್ದೇನೆ
ಗೆಲುವಿನೊಂದಿಗೆ ಇಂದಿನ ಪಂದ್ಯ ಮುಗಿಸಲು ಸಂತೋಷವಾಗುತ್ತಿದೆ
ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದ್ದೆ! ಎಂದ ಆರ್ಸಿಬಿ ನಾಯಕ
‘‘ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್ ಎಂದು ಭಾವಿಸಿದ್ದೇನೆ. ಮಳೆ ನೀಡಿದ ವಿರಾಮದಲ್ಲಿ ನಾನು ಮತ್ತು ವಿರಾಟ್ ಕೊಹ್ಲಿ 140-150 ರನ್ ಬಾರಿಸುವ ಟಾರ್ಗೆಟ್ ಬಗ್ಗೆ ಮಾತನಾಡುತ್ತಿದ್ದೆವು’’
ಇದು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜಯದ ಬಳಿಕ ಹೇಳಿದ ಮಾತುಗಳು. ಆರ್ಸಿಬಿ 27 ರನ್ಗಳ ಭರ್ಜರಿ ಗೆಲುವಿನ ಬಳಿಕ ಮತ್ತು ಸಿಎಸ್ಕೆಯನ್ನು ಸೋಲಿಸಿದ ಸಂತಸದಲ್ಲಿ ಮಾತನಾಡಿದ್ದಾರೆ.
140-150 ರನ್ ಬಾರಿಸುವ ಟಾರ್ಗೆಟ್
‘‘ಎಂತಹ ರಾತ್ರಿ. ನಂಬಲಾಗದಂತಹ ಮತ್ತು ಉತ್ತಮ ವಾತವರಣ. ಗೆಲುವಿನೊಂದಿಗೆ ಇಂದಿನ ಪಂದ್ಯ ಮುಗಿಸಲು ಸಂತೋಷವಾಗುತ್ತಿದೆ. ಮೊದಲು ಬ್ಯಾಟಿಂಗ್ ಮಾಡುವುದರಿಂದ, ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್ ಎಂದು ಭಾವಿಸಿದ್ದೇನೆ. ಮಳೆ ನೀಡಿದ ವಿರಾಮದಲ್ಲಿ ನಾನು ಮತ್ತು ವಿರಾಟ್ ಕೊಹ್ಲಿ 140-150 ರನ್ ಬಾರಿಸುವ ಟಾರ್ಗೆಟ್ ಬಗ್ಗೆ ಮಾತನಾಡುತ್ತಿದ್ದೆವು. ಮಳೆಯಿಂದಾಗಿ ಪಿಚ್ ಒದ್ದೆಯಾಗುತ್ತದೆ ಎಂದು ಅಂಪೈರ್ ಮಾತನಾಡುತ್ತಿದ್ದರು. ಅವರು ಆಟವನ್ನು ಮುಂದೂಡಲು ಬಯಸಿದರು. ಅದು ನಿಜವಾಗಿಯೂ ಅರ್ಥಪೂರ್ಣವಾಗಿದೆ’’ ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ಇದನ್ನೂ ಓದಿ: RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?
ಬಳಿಕ ಮಾತು ಮುಂದುವರೆಸಿದ ಅವರು, ‘‘ನಾನು ಸ್ಯಾಂಟ್ನರ್ಗೆ ಹೇಳುತ್ತಿದ್ದೆ, ಇದು ರಾಂಚಿಯಲ್ಲಿ ನಡೆದಂತೆ 5ನೇ ದಿನ ಟೆಸ್ಟ್ ಪಂದ್ಯವಾಗಿದೆ. ಅದರಲ್ಲಿ 200 ರನ್ ಗಳಿಸೋದು ಕೂಡ ನಂಬಲಸಾಧ್ಯವಾಗಿತ್ತು. ಕಳೆದ 6 ಪಂದ್ಯಗಳಲ್ಲಿ ಬ್ಯಾಟರ್ಗಳು ಉತ್ತಮ ಉದ್ದೇಶ ಮತ್ತು ಉತ್ತಮ ಸ್ಟೈಕ್ ರೇಟ್ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ’’ ಎಂದರು.
ಧೋನಿ ಬಗ್ಗೆ ಯೋಚಿಸಿದ್ದೆ
ನಾವು ಮೊದಲೇ ನಿಧನವಾಗಿ ಆಡುತ್ತಿದ್ದೆವು. ಹೆಚ್ಚಿನ ಉದ್ದೇಶವನ್ನು ಬಯಸಿದ್ದೆವು. 175 ರನ್ ಬಾರಿಸಲು ಯೋಚಿಸಿದ್ದೆವು. ಅದು ಸ್ವಲ್ಪ ಹತ್ತಿರವಾಯಿತು. ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದೆ. ಆತ ಅದನ್ನು ಹಲವು ಬಾರಿ ಮೀರಿಸಿದ್ದಾನೆ. ಒದ್ದೆಯಾದ ಚೆಂಡಿನೊಂದಿಗೆ ನಾವು ಬೌಲಿಂಗ್ ಮಾಡಿದ ರೀತಿ ನಂಬಲಾಗದಂತಿತ್ತು. ಅದನ್ನು ನಾವು ಬದಲಾಯಿಸಲು ಯತ್ನಿಸಿದೆವು.
ಇದನ್ನೂ ಓದಿ: RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?
ಮ್ಯಾನ್ ಆಫ್ ದಿ ಮ್ಯಾಚ್ ಯಶ್ ದಯಾಳ್ಗೆ ಅರ್ಪಿಸುತ್ತೇನೆ
ನಾನು ಮ್ಯಾನ್ ಆಫ್ ದಿ ಮ್ಯಾಚ್ ಅನ್ನು ಯಶ್ ದಯಾಳ್ಗೆ ಅರ್ಪಿಸುತ್ತೇನೆ. ಅವರು ಬೌಲಿಂಗ್ ಮಾಡಿದ ರೀತಿ ನಂಬಲಸಾಧ್ಯವಾದಂತಿತ್ತು. ಯಾರ್ಕರ್ ಮೊದಲ ಎಸೆತದಲ್ಲೆ ವರ್ಕೌಟ್ ಆಗಿಲ್ಲ. ಬಳಿಕ ವೇಗವಾಗಿ ಎಸೆಯಲು ಯತ್ನಿಸಿದರು. ಅದು ಚೆನ್ನಾಗಿ ಕೆಲಸ ಮಾಡಿತು. ಸಿಎಸ್ಕೆ ಮತ್ತು ಆರ್ಸಿಬಿ ನಂಬಲಾಗದ ವಾತವರಣ ಮತ್ತು ಬೆಂಬಲ ನೀಡಿದ ಪ್ರೇಕ್ಷಕರಿಗೆ ಧನ್ಯವಾದ. ನಾವು 6 ಪಂದ್ಯ ಗೆದ್ದಿದ್ದು ನಿಜವಾಗಿ ಮುಖ್ಯವಾಗಿದೆ ಎಂದು ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ