newsfirstkannada.com

ಶವ ಸಾಗಿಸಲು ನಿರಾಕರಣೆ; ಚೀಲದಲ್ಲಿ ಮಗುವಿನ ಮೃತದೇಹವನ್ನು ಸುತ್ತಿ ಬಸ್ ಏರಿದ ತಂದೆ

Share :

17-06-2023

    ಮಗುವಿನ ಮೃತದೇಹ ಸಾಗಿಸಲು ದುಪ್ಪಟ್ಟು ಹಣದ ಬೇಡಿಕೆ

    ಇದು ಕಣ್ಣೀರ ಕಥೆ.. ಶವ ಸಾಗಣೆ ಮಾಡಲು ಒಪ್ಪದ ಆಸ್ಪತ್ರೆ ಮಂಡಳಿ

    ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸುತ್ತಿ ಬಸ್​ ಏರಿದ ತಂದೆ

​ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸುತ್ತಿ ಬಸ್​ನಲ್ಲಿ ಸಾಗಿಸಿದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಶವ ಸಾಗಣೆ ಮಾಡುವ ವಾಹನಕ್ಕೆ ಆಸ್ಪತ್ರೆ ಮಂಡಳಿ ಎರಡಷ್ಟು ಹಣಕ್ಕೆ ಬೇಡಿಕೆ ಇಟ್ಟ ಕಾರಣ ಕೊನೆಗೆ ತಂದೆ ತನ್ನ ಮಗುವಿನ ಮೃತದೇಹವನ್ನು ಬಸ್​ನಲ್ಲಿಯೇ ಸಾಗಿಸಿದ್ದಾರೆ.

ದಿಂಡೋರಿಯ ಸಹಜ್​ಪುರಿ ನಿವಾಸಿ ಸುನಿಲ್​ ಧುರ್ವೆ ಮತ್ತು ಪತ್ನಿ ಜಮ್ನಿ ಬಾಯಿಗೆ ಜೂನ್​ 13ರಂದು ಗಂಡು ಮಗು ಜನಿಸಿತ್ತು. ಆದರೆ ಈ ಮಗು ದೈಹಿಕವಾಗಿ ದುರ್ಬಲವಾಗಿತ್ತು. ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿ ಆರೋಗ್ಯವಂತನನ್ನಾಗಿ ಮಾಡಬೇಕು ಎಂಬ ದೃಷ್ಟಿಯಿಂದ ಸುನಿಲ್​​ ಮಗುವನ್ನು ಜೂನ್​ 14ರಂದು ಜಬಲ್ಪುರ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಮಾಹಿತಿಯಂತೆಯೇ ಕರೆದೊಯ್ದು ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಆದರೆ ಜೂನ್​ 15ರಂದು ಮಗು ಸಾವನ್ನಪ್ಪಿದೆ.

ಸಾವನ್ನಪ್ಪಿದ ಮಗುವನ್ನು ಡಿಂಡೋರಿಗೆ ತೆಗೆದುಕೊಂಡು ಹೋಗಲು ತಂದೆ ಸುನೀಲ್​ ಸರ್ಕಾರಿ ಆಸ್ಪತ್ರೆಯ ಆಡಳಿತ ಮಂಡಳಿ ಬಳಿ ವಾಹನ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಅಧಿಕಾರಿಗಳು ಇದಕ್ಕೆ ಒಪ್ಪಳಿಲ್ಲ. ಕೊನೆಗೆ ಖಾಸಗಿ ವಾಹನ ಕೇಳಿದಾಗ ಬೆಲೆ ದುಪ್ಪಟ್ಟು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಸುನೀಲ್​ ತನ್ನ ಮಗುವನ್ನು ಚೀಲದಲ್ಲಿ ಸುತ್ತಿ ಬಸ್​ ಏರಿದ್ದಾರೆ. ಕಣ್ಣೀರು ಹಾಕುತ್ತಲೇ ಮಗುವಿನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶವ ಸಾಗಿಸಲು ನಿರಾಕರಣೆ; ಚೀಲದಲ್ಲಿ ಮಗುವಿನ ಮೃತದೇಹವನ್ನು ಸುತ್ತಿ ಬಸ್ ಏರಿದ ತಂದೆ

https://newsfirstlive.com/wp-content/uploads/2023/06/Sunil.jpg

    ಮಗುವಿನ ಮೃತದೇಹ ಸಾಗಿಸಲು ದುಪ್ಪಟ್ಟು ಹಣದ ಬೇಡಿಕೆ

    ಇದು ಕಣ್ಣೀರ ಕಥೆ.. ಶವ ಸಾಗಣೆ ಮಾಡಲು ಒಪ್ಪದ ಆಸ್ಪತ್ರೆ ಮಂಡಳಿ

    ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸುತ್ತಿ ಬಸ್​ ಏರಿದ ತಂದೆ

​ನವಜಾತ ಶಿಶುವಿನ ಮೃತದೇಹವನ್ನು ಚೀಲದಲ್ಲಿ ಸುತ್ತಿ ಬಸ್​ನಲ್ಲಿ ಸಾಗಿಸಿದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಶವ ಸಾಗಣೆ ಮಾಡುವ ವಾಹನಕ್ಕೆ ಆಸ್ಪತ್ರೆ ಮಂಡಳಿ ಎರಡಷ್ಟು ಹಣಕ್ಕೆ ಬೇಡಿಕೆ ಇಟ್ಟ ಕಾರಣ ಕೊನೆಗೆ ತಂದೆ ತನ್ನ ಮಗುವಿನ ಮೃತದೇಹವನ್ನು ಬಸ್​ನಲ್ಲಿಯೇ ಸಾಗಿಸಿದ್ದಾರೆ.

ದಿಂಡೋರಿಯ ಸಹಜ್​ಪುರಿ ನಿವಾಸಿ ಸುನಿಲ್​ ಧುರ್ವೆ ಮತ್ತು ಪತ್ನಿ ಜಮ್ನಿ ಬಾಯಿಗೆ ಜೂನ್​ 13ರಂದು ಗಂಡು ಮಗು ಜನಿಸಿತ್ತು. ಆದರೆ ಈ ಮಗು ದೈಹಿಕವಾಗಿ ದುರ್ಬಲವಾಗಿತ್ತು. ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿ ಆರೋಗ್ಯವಂತನನ್ನಾಗಿ ಮಾಡಬೇಕು ಎಂಬ ದೃಷ್ಟಿಯಿಂದ ಸುನಿಲ್​​ ಮಗುವನ್ನು ಜೂನ್​ 14ರಂದು ಜಬಲ್ಪುರ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರ ಮಾಹಿತಿಯಂತೆಯೇ ಕರೆದೊಯ್ದು ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು. ಆದರೆ ಜೂನ್​ 15ರಂದು ಮಗು ಸಾವನ್ನಪ್ಪಿದೆ.

ಸಾವನ್ನಪ್ಪಿದ ಮಗುವನ್ನು ಡಿಂಡೋರಿಗೆ ತೆಗೆದುಕೊಂಡು ಹೋಗಲು ತಂದೆ ಸುನೀಲ್​ ಸರ್ಕಾರಿ ಆಸ್ಪತ್ರೆಯ ಆಡಳಿತ ಮಂಡಳಿ ಬಳಿ ವಾಹನ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಅಧಿಕಾರಿಗಳು ಇದಕ್ಕೆ ಒಪ್ಪಳಿಲ್ಲ. ಕೊನೆಗೆ ಖಾಸಗಿ ವಾಹನ ಕೇಳಿದಾಗ ಬೆಲೆ ದುಪ್ಪಟ್ಟು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಸುನೀಲ್​ ತನ್ನ ಮಗುವನ್ನು ಚೀಲದಲ್ಲಿ ಸುತ್ತಿ ಬಸ್​ ಏರಿದ್ದಾರೆ. ಕಣ್ಣೀರು ಹಾಕುತ್ತಲೇ ಮಗುವಿನ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More