/newsfirstlive-kannada/media/post_attachments/wp-content/uploads/2024/11/Dhanush.jpg)
ತಮಿಳು ನಟ ಧನುಷ್ ಮತ್ತು ಐಶ್ವರ್ಯ ರಜಿನಿಕಾಂತ್​ಗೆ ಚೆನ್ನೈನ ಕುಟುಂಬ ಕಲ್ಯಾಣ ನ್ಯಾಯಾಲಯವು ಡಿವೋರ್ಸ್​ ಮಂಜೂರು ಮಾಡಿದೆ. ಇಬ್ಬರ ಒಮ್ಮತದ ಆಧಾರದ ಮೇಲೆ ವಿಚ್ಛೇದನ ನೀಡಲಾಗಿದೆ. ಈ ಮೂಲಕ ಧನುಷ್-ಐಶ್ವರ್ಯ ದಾಂಪತ್ಯ ಜೀವನ ಅಧಿಕೃತವಾಗಿ ಅಂತ್ಯಗೊಂಡಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾರನ್ನು ಧನುಷ್ ಪ್ರೀತಿಸಿ 2004ರಲ್ಲಿ ಮದುವೆಯಾಗಿದ್ದರು. ಐಶ್ವರ್ಯಾ ಧನುಷ್​ಗಿಂತ ದೊಡ್ಡವರಾಗಿದ್ದರೂ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ನಡೆದಿತ್ತು. 2022, ಜನವರಿಯಲ್ಲಿ ಧನುಷ್ ಮತ್ತು ಐಶ್ವರ್ಯ ಸೋಶಿಯಲ್ ಮೀಡಿಯಾದಲ್ಲಿ ದೂರ ಆಗ್ತಿರುವ ಬಗ್ಗೆ ಘೋಷಣೆ ಮಾಡಿದ್ದರು. ಸುಮಾರು 18 ವರ್ಷಗಳ ಕಾಲ ಒಟ್ಟಿಗೆಯಿದ್ದ ಜೋಡಿ, ಬ್ರೇಕಪ್ ಮಾಡಿಕೊಂಡಿತ್ತು.
ಇದನ್ನೂ ಓದಿ:RCB ಮ್ಯಾನೇಜ್​ಮೆಂಟ್​ ಮೇಲೆ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡ್ರಾ.. ಕಾರಣವೇನು?
/newsfirstlive-kannada/media/post_attachments/wp-content/uploads/2023/07/RAJANIKANTH_SHOOTING_2.jpg)
ಬ್ರೇಕಪ್ ಘೋಷಣೆ ಬೆನ್ನಲ್ಲೇ ಎರಡು ಕುಟುಂಬ ಇಬ್ಬರನ್ನು ಮತ್ತೆ ಒಂದಾಗಿಸುವ ಪ್ರಯತ್ನ ಮಾಡಿದ್ದವು. ಅದು ಸಾಧ್ಯವಾಗದಿದ್ದಾಗ 2004ರಲ್ಲಿ ನಡೆದ ವಿವಾಹವನ್ನು ರದ್ದುಗೊಳಿಸುವಂತೆ ಚೆನ್ನೈನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಕೋರ್ಟ್​ ಮೆಟ್ಟಿಲೇರಿದ ನಂತರ ಧನುಷ್ ಮತ್ತು ಐಶ್ವರ್ಯಾ ಮಕ್ಕಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾತ್ರ ಭಾಗಿಯಾಗಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿದ ಕೋರ್ಟ್​ ಇದೀಗ ಡಿವೋರ್ಸ್​​ ಮಂಜೂರು ಮಾಡಿದೆ.
ಧನುಷ್ ಮತ್ತು ಐಶ್ವರ್ಯಗೆ ಇಬ್ಬರು ಮಕ್ಕಳಿದ್ದಾರೆ. ಈ ಜೋಡಿ ತಮಿಳು ಚಿತ್ರರಂಗದಲ್ಲಿ ‘ಲವ್ಲಿ ಕಪಲ್’ ಎಂದೇ ಖ್ಯಾತಿ ಪಡೆದಿತ್ತು. ಧನುಷ್​ ಅವರಿಗೆ ‘3’ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಐಶ್ವರ್ಯ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದರು. ವಿಚ್ಛೇದನ ಘೋಷಣೆ ನಂತರ ಐಶ್ವರ್ಯಾ ರಜನಿಕಾಂತ್ ಖಿನ್ನತೆಗೆ ಒಳಗಾಗಿದ್ದರು. ಅದರಿಂದ ಹೊರಬರಲು ಮತ್ತೆ ನಿರ್ದೇಶನದತ್ತ ಗಮನ ಹರಿಸಿದ್ದಾರೆ. ಈ ವರ್ಷ ಲಾಲ್ ಸಲಾಂ ಸಿನಿಮಾ ಬಿಡುಗಡೆಯಾಗಿದೆ. ಇದರಲ್ಲಿ ರಜನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಗಳ ವಿಚ್ಛೇದನದ ಬಗ್ಗೆ ರಜನಿಕಾಂತ್ ಕೊಂಚ ಅಸಮಧಾನಗೊಂಡಿದ್ದಾರೆ ಎಂಬ ವರದಿಗಳಿವೆ.
ಇದನ್ನೂ ಓದಿ:RCB ಮ್ಯಾನೇಜ್​ಮೆಂಟ್​ ಮೇಲೆ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡ್ರಾ.. ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us