newsfirstkannada.com

ತಿಲಕ್ ಅರ್ಧಶತಕ ತಪ್ಪಿಸಿದ ಹಾರ್ದಿಕ್ ವಿರುದ್ಧ ಕಿಡಿ; ಅಂದು ಕೊಹ್ಲಿಗಾಗಿ ಧೋನಿ ಮಾಡಿದ ತ್ಯಾಗ ನೆನೆದ ಫ್ಯಾನ್ಸ್​

Share :

Published August 9, 2023 at 5:58pm

Update August 9, 2023 at 5:59pm

    ತಿಲಕ್​ ಅರ್ಧಶತಕ ತಪ್ಪಿಸಿದ ಹಾರ್ದಿಕ್​ ಪಾಂಡ್ಯ

    ಹಾರ್ದಿಕ್​​ ಪಾಂಡ್ಯ ವಿರುದ್ಧ ಅಭಿಮಾನಿಗಳು ಕಿಡಿ

    ಕೊಹ್ಲಿಗಾಗಿ ಧೋನಿ ಮಾಡಿದ ತ್ಯಾಗ ನೆನೆದ ಫ್ಯಾನ್ಸ್​​​​

ಇತ್ತೀಚೆಗೆ ವೆಸ್ಟ್​​ ವಿಂಡೀಸ್​​ ವಿರುದ್ಧ ನಡೆದ ಮಾಡು ಇಲ್ಲವೆ ಮಾಡಿ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 2-1 ಅಂತರಕ್ಕೆ ಇಳಿದಿದೆ.

ಹೌದು, ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಕಾರಣ ವೈಸ್​ ಕ್ಯಾಪ್ಟನ್​​ ಸೂರ್ಯಕುಮಾರ್​ ಯಾದವ್​​ ಮತ್ತು ಯಂಗ್​ ಬ್ಯಾಟ್ಸ್​​ಮನ್​​​​ ತಿಲಕ್​ ವರ್ಮಾ. ಸೂರ್ಯಕುಮಾರ್ ಕೇವಲ 49 ಬಾಲ್​ನಲ್ಲಿ ಬರೋಬ್ಬರಿ 4 ಸಿಕ್ಸರ್​​​, 10 ಬೌಂಡರಿ ಸಮೇತ 83 ರನ್​ ಸಿಡಿಸಿ ಔಟಾದ್ರು. 2ನೇ ವಿಕೆಟ್​​​ಗೆ ಕ್ರೀಸ್​ಗೆ ಬಂದ ತಿಲಕ್​ ವರ್ಮಾ 37 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿ ಸಮೇತ 49 ರನ್ ಗಳಿಸಿ ಅಜೇಯರಾಗಿ ಉಳಿದರು.

ಕೇವಲ ಒಂದೇ ಒಂದು ರನ್​​ನಿಂದ ತಿಲಕ್​​ ಅರ್ಧತಕ ವಂಚಿತರಾದರು. ಕಾರಣ ಹಾರ್ದಿಕ್​ ಪಾಂಡ್ಯ 2 ರನ್​ ಬೇಕಿದ್ದಾಗ ಸಿಕ್ಸರ್​ ಸಿಡಿಸಿ ವಿನ್​ ಮಾಡಿಸಿದ್ದು. ಹೀಗಾಗಿ ಹಾರ್ದಿಕ್​ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಕೆಂಡಕಾರಿದ್ದಾರೆ.

ಟೀಂ ಇಂಡಿಯಾ ಗೆಲ್ಲಲು 2 ರನ್​ ಬೇಕಿತ್ತು. ಇನ್ನೂ 2 ಓವರ್​ ಇತ್ತು. ಹಾರ್ದಿಕ್​​​ ಸಿಂಗಲ್​ ತೆಗೆದು ವರ್ಮಾಗೆ ಹಾಡಲು ಅವಕಾಶ ನೀಡಬೇಕಿತ್ತು. ಈ ಹಿಂದೆ ಕೊಹ್ಲಿಗಾಗಿ ಧೋನಿ ಬ್ಯಾಟಿಂಗ್​ ತ್ಯಾಗ ಮಾಡಿದ್ದರು. ಅಂದು ಕೊಹ್ಲಿಗೆ ಪಂದ್ಯವನ್ನು ಮುಗಿಸುವ ಅವಕಾಶ ನೀಡಿ ಧೋನಿ ನಾಯಕರಾಗಿದ್ದರು. ಇಂದು ತಿಲಕ್​​ ವರ್ಮಾ ಅರ್ಧಶತಕವನ್ನು ಕಸಿದು ಹಾರ್ದಿಕ್​ ಪಾಂಡ್ಯ ಸೆಲ್ಫಿಶ್​ ಆಗಿದ್ದಾರೆ ಎಂದು ಟ್ರೋಲ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

 

ತಿಲಕ್ ಅರ್ಧಶತಕ ತಪ್ಪಿಸಿದ ಹಾರ್ದಿಕ್ ವಿರುದ್ಧ ಕಿಡಿ; ಅಂದು ಕೊಹ್ಲಿಗಾಗಿ ಧೋನಿ ಮಾಡಿದ ತ್ಯಾಗ ನೆನೆದ ಫ್ಯಾನ್ಸ್​

https://newsfirstlive.com/wp-content/uploads/2023/08/Tilak_Hardik.jpg

    ತಿಲಕ್​ ಅರ್ಧಶತಕ ತಪ್ಪಿಸಿದ ಹಾರ್ದಿಕ್​ ಪಾಂಡ್ಯ

    ಹಾರ್ದಿಕ್​​ ಪಾಂಡ್ಯ ವಿರುದ್ಧ ಅಭಿಮಾನಿಗಳು ಕಿಡಿ

    ಕೊಹ್ಲಿಗಾಗಿ ಧೋನಿ ಮಾಡಿದ ತ್ಯಾಗ ನೆನೆದ ಫ್ಯಾನ್ಸ್​​​​

ಇತ್ತೀಚೆಗೆ ವೆಸ್ಟ್​​ ವಿಂಡೀಸ್​​ ವಿರುದ್ಧ ನಡೆದ ಮಾಡು ಇಲ್ಲವೆ ಮಾಡಿ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 2-1 ಅಂತರಕ್ಕೆ ಇಳಿದಿದೆ.

ಹೌದು, ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ಕಾರಣ ವೈಸ್​ ಕ್ಯಾಪ್ಟನ್​​ ಸೂರ್ಯಕುಮಾರ್​ ಯಾದವ್​​ ಮತ್ತು ಯಂಗ್​ ಬ್ಯಾಟ್ಸ್​​ಮನ್​​​​ ತಿಲಕ್​ ವರ್ಮಾ. ಸೂರ್ಯಕುಮಾರ್ ಕೇವಲ 49 ಬಾಲ್​ನಲ್ಲಿ ಬರೋಬ್ಬರಿ 4 ಸಿಕ್ಸರ್​​​, 10 ಬೌಂಡರಿ ಸಮೇತ 83 ರನ್​ ಸಿಡಿಸಿ ಔಟಾದ್ರು. 2ನೇ ವಿಕೆಟ್​​​ಗೆ ಕ್ರೀಸ್​ಗೆ ಬಂದ ತಿಲಕ್​ ವರ್ಮಾ 37 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿ ಸಮೇತ 49 ರನ್ ಗಳಿಸಿ ಅಜೇಯರಾಗಿ ಉಳಿದರು.

ಕೇವಲ ಒಂದೇ ಒಂದು ರನ್​​ನಿಂದ ತಿಲಕ್​​ ಅರ್ಧತಕ ವಂಚಿತರಾದರು. ಕಾರಣ ಹಾರ್ದಿಕ್​ ಪಾಂಡ್ಯ 2 ರನ್​ ಬೇಕಿದ್ದಾಗ ಸಿಕ್ಸರ್​ ಸಿಡಿಸಿ ವಿನ್​ ಮಾಡಿಸಿದ್ದು. ಹೀಗಾಗಿ ಹಾರ್ದಿಕ್​ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಕೆಂಡಕಾರಿದ್ದಾರೆ.

ಟೀಂ ಇಂಡಿಯಾ ಗೆಲ್ಲಲು 2 ರನ್​ ಬೇಕಿತ್ತು. ಇನ್ನೂ 2 ಓವರ್​ ಇತ್ತು. ಹಾರ್ದಿಕ್​​​ ಸಿಂಗಲ್​ ತೆಗೆದು ವರ್ಮಾಗೆ ಹಾಡಲು ಅವಕಾಶ ನೀಡಬೇಕಿತ್ತು. ಈ ಹಿಂದೆ ಕೊಹ್ಲಿಗಾಗಿ ಧೋನಿ ಬ್ಯಾಟಿಂಗ್​ ತ್ಯಾಗ ಮಾಡಿದ್ದರು. ಅಂದು ಕೊಹ್ಲಿಗೆ ಪಂದ್ಯವನ್ನು ಮುಗಿಸುವ ಅವಕಾಶ ನೀಡಿ ಧೋನಿ ನಾಯಕರಾಗಿದ್ದರು. ಇಂದು ತಿಲಕ್​​ ವರ್ಮಾ ಅರ್ಧಶತಕವನ್ನು ಕಸಿದು ಹಾರ್ದಿಕ್​ ಪಾಂಡ್ಯ ಸೆಲ್ಫಿಶ್​ ಆಗಿದ್ದಾರೆ ಎಂದು ಟ್ರೋಲ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

 

Load More