Advertisment

ಅಭಿಮಾನಿಗಳಿಗೆ RCB ಅಂದ್ರೆ ಜೀವ.. ಫ್ರಾಂಚೈಸಿ ಮಾಲೀಕರಿಗೆ ಫ್ಯಾನ್ಸ್ ಅಂದ್ರೆ ಜಸ್ಟ್ ಬ್ಯುಸಿನೆಸ್..!

author-image
Ganesh
Updated On
KSCAಗೆ ಸಂಕಷ್ಟದ ಮೇಲೆ ಸಂಕಷ್ಟ.. ಬಿಬಿಎಂಪಿಯಿಂದಲೂ ಶಾಕಿಂಗ್ ನಿರ್ಧಾರ..!
Advertisment
  • ಕನ್ನಡಿಗರು ಅಂದ್ರೆ RCB ಫ್ರಾಂಚೈಸಿಗೆ ಸದಾ ಅಸಡ್ಡೆ
  • ಒಬ್ಬನೇ ಒಬ್ಬ ಸಪೋರ್ಟ್​​​ ಸ್ಟಾಫ್​​ ಕನ್ನಡದವರಿಲ್ಲ
  • ಫ್ರಾಂಚೈಸಿ ನಿರ್ಧಾರಕ್ಕೆ ಕನ್ನಡಿಗರ ನಿರ್ಧಾರ ಹೋಗಿದೆ

ಹೊರ ಜಗತ್ತಿಗೆ ಅಸಂಖ್ಯ ಅಭಿಮಾನಿಗಳೇ ಅವ್ರೆ ಆರ್​​ಸಿಬಿ ತಂಡದ ಶಕ್ತಿ. 2008ರಿಂದ 2025.. ಈ ಸುದೀರ್ಘ 25 ವರ್ಷಗಳ ಪ್ರಯಾಣದಲ್ಲಿ ಸೀಸನ್​​ನಿಂದ ಸೀಸನ್​ಗೆ ತಂಡದ ಮೇಲೆ ಅಭಿಮಾನಿಗಳ ಪ್ರೀತಿ ಹೆಚ್ಚಾಗ್ತಿದ್ಯೇ ಹೊರತು ಒಂದು ಪರ್ಸೆಂಟ್​ ಕೂಡ ಕಡಿಮೆಯಾಗಿಲ್ಲ. ಇಡೀ ಕರ್ನಾಟಕ ಜನ ಆರ್​ಸಿಬಿ ಕೇಳಿದಕ್ಕಿಂತ ಹೆಚ್ಚಾಗಿ ಪ್ರೀತಿ ನೀಡಿದ್ದಾರೆ. ಆರ್​​ಸಿಬಿ ಫ್ರಾಂಚೈಸಿ ಮಾಲೀಕರು ಫ್ಯಾನ್ಸ್​ನ ಜಸ್ಟ್​​​ ಬ್ಯುಸಿನೆಸ್​​ ಆ್ಯಂಗಲ್​ನಲ್ಲಿ ನೋಡ್ತಿದ್ದಾರೆ. ಅಭಿಮಾನಿಗಳ ಅಭಿಮಾನ ಇವರಿಗೆ ಬಂಡವಾಳ.

Advertisment

17 ವರ್ಷಗಳು.. ಸೋಲು, ಹತಾಶೆ, ಹಿನ್ನಡೆಯನ್ನೇ ಹಾಸುಹೊದ್ದಿದ್ದ ಅಸಂಖ್ಯ ಛಿದ್ರವಾದ ಹೃದಯಗಳು. ಈ ಸುದೀರ್ಘ ಕಾಯುವಿಕೆ, ನೋವು ಕೊನೆಗೂ ಈ ಸೀಸನ್​ನಲ್ಲಿ ಅಂತ್ಯವಾಯ್ತು. ಲಾಯಲ್​ ಅಭಿಮಾನಿಗಳ ಪ್ರಾರ್ಥನೆಗೆ ಕೊನೆಗೂ ಆ ದೇವರು ಕಣ್ಣು ಬಿಟ್ಟು. 17 ವರ್ಷಗಳು ಕನಸು ನನಸಾಗಿ 18 ಗಂಟೆಯೂ ಕಳೆದಿರಲಿಲ್ಲ. ಅದ್ಯಾರ ಕಣ್ಣು ಬಿತ್ತೋ.. ಘೋರ ದುರಂತ ನಡೆದು ಬಿಡ್ತು.

ಇದನ್ನೂ ಓದಿ: ಕಾಲ್ತುಳಿತ ಪ್ರಕರಣದಲ್ಲಿ ವಿರಾಟ್ ಕೊಹ್ಲಿಗೂ ಸಂಕಷ್ಟ.. ದಾಖಲಾಯ್ತು ಕೇಸ್..!

publive-image

ಅಭಿಮಾನಿಗಳ ಪ್ರಾರ್ಥನೆಗೆ ದೇವರು ಕೃಪೆ ತೋರಿದ ಧನ್ಯವಾದ ಹೇಳಬೇಕೋ? ಅಥವಾ ಸಂಭ್ರಮವನ್ನ ಅಷ್ಟೇ ವೇಗವಾಗಿ ಕಿತ್ತುಕೊಂಡ ಎಂದು ಶಪಸಿಬೇಕೋ? ಒಂದೋ ಗೊತ್ತಾಗ್ತಿಲ್ಲ. 11 ಜನ ಅಮಾಯಕ ಅಭಿಮಾನಿಗಳ ಸಾವಿಗೆ ಕಾರಣ ಯಾರು? ಹಲವರು ಗಾಯ ಮಾಡಿಕೊಂಡು ನೋವಲ್ಲಿ ನರಳಾಡ್ತಿದ್ದಾರಲ್ಲಾ ಇದಕ್ಕೆ ಹೊಣೆ ಯಾರು? ಇದಕ್ಕೆ ಉತ್ತರ ಆರ್​​​ಸಿಬಿ ಮ್ಯಾನೇಜ್​​ಮೆಂಟ್​. ಮತ್ತವರ ಬ್ಯುಸಿನೆಸ್​ ಮೈಂಡ್​ಸೆಟ್​.

Advertisment

ಅಭಿಮಾನಿಗಳ ಅಭಿಮಾನ ಫ್ರಾಂಚೈಸಿಯ ಬಂಡವಾಳ..!

ಚೊಚ್ಚಲ ಐಪಿಎಲ್​ ಟ್ರೋಫಿ ಗೆದ್ದ ಸಂಭ್ರಮವನ್ನ ಹೋಮ್​ಗ್ರೌಂಡ್​ನಲ್ಲಿ ಅಭಿಮಾನಿಗಳ ಮುಂದೆ ಮಾಡಬೇಕು ಅನ್ನೋದೆಲ್ಲಾ ಸರಿ. ಹಾಗಂತ ಅಲ್ಲೂ ಬ್ಯುಸಿನೆಸ್​ ಲೆಕ್ಕಾಚಾರ ಹಾಕಿದ್ದು ಸರೀನಾ? ಕಪ್​ ತಂದು ಅಭಿಮಾನಗಳ ಮುಂದೆ ಸೆಲಬ್ರೇಟ್​ ಮಾಡಬೇಕು ಅನ್ನೋದೊಂದೆ ಫ್ರಾಂಚೈಸಿಯ ಉದ್ದೇಶವಾಗಿರಲಿಲ್ಲ. ತಮ್ಮ ತಂಡಕ್ಕಿರೋ ಅಭಿಮಾನಿಗಳ ಬಲವನ್ನ ಇಡೀ ವಿಶ್ವಕ್ಕೆ ಮತ್ತೊಮ್ಮೆ ತೋರಿಸೋ ಲೆಕ್ಕಾಚಾರವೂ ಇತ್ತು. ಈ ಇವೆಂಟ್​ ಸರಿಯಾಗಿ ನಡೆದಿದ್ರೆ ತಂಡದ ಬ್ರ್ಯಾಂಡ್​ವ್ಯಾಲ್ಯೂ ಮತ್ತಷ್ಟು ಹೆಚ್ಚಾಗ್ತಾ ಇತ್ತು ಅನ್ನೋದ್ರಲ್ಲಿ ಡೌಟೇ ಬೇಡ.

ಇದನ್ನೂ ಓದಿ: ಟ್ರೋಫಿ ಗೆಲ್ಲಿಸಿಕೊಟ್ಟ ಪಾಟೀದಾರ್ ಜರ್ನಿ ಹಿಂದೆ ತ್ಯಾಗದ ಕತೆ.. ಝೀರೋ ಟು ಹೀರೋ..!

publive-image

ಫೈನಲ್​ ಪಂದ್ಯದ ಬಳಿಕ ಆಟಗಾರರ ಈ ವರ್ಷದ ಕಾಂಟ್ರ್ಯಾಕ್ಟ್​ ಮುಗಿಯುತ್ತೆ. ಟೈಮ್​ ತೆಗೆದುಕೊಂಡು 2 ದಿನ ತಡೆದು ಸರಿಯಾಗಿ ಪ್ಲಾನ್​ ಮಾಡಿ ಸೆಲಬ್ರೇಷನ್​ ಮಾಡೋಕೆ ಹೊರಟ್ರೆ, ಹಲವು ಆಟಗಾರರು ತವರಿಗೆ ಹೋಗೋ ಸಾಧ್ಯತೆಯಿತ್ತು. ಗೆದ್ದ ಜೋಷ್​​ ಕಡಿಮೆಯಾಗ್ತಿತ್ತು. ಈವೆಂಟ್​​ಗೆ​ ಕಳೆಗುಂದೋ ಸಾಧ್ಯತೆಯಿತ್ತು. ಹೀಗಾಗಿಯೇ ಫ್ರಾಂಚೈಸಿ ಪಂದ್ಯ ಮುಗಿದ ಬೆನ್ನಲ್ಲೇ ತುರಾತುರಿಯಲ್ಲಿ ಕಾರ್ಯಕ್ರಮವನ್ನ ಆಯೋಜಿಸಿತು. ಸರಿಯಾದ ಪ್ಲಾನ್​​ ಇಲ್ಲದೆ ಪೊಲೀಸರ ಸಲಹೆಯನ್ನ ಗಾಳಿಗೆ ತೂರಿ ಕಾರ್ಯಕ್ರಮ ಆಯೋಜಿಸಿದ್ದು ಅಮಾಯಕರ ಸಾವಿಗೆ ಕಾರಣವಾಯ್ತು.

Advertisment

ಫ್ಯಾನ್ಸ್​ ಪ್ರಾಣ ಕಳೆದುಕೊಂಡ್ರೂ ನಿಲ್ಲಲಿಲ್ಲ ಸಂಭ್ರಮ

ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಆರ್​​ಸಿಬಿ ವಿಧಾನಸೌದದಿಂದ ಸ್ಟೇಡಿಯಂಗೆ ಬರೋಕೆ ಮುನ್ನವೇ ಕಾಲ್ತುಳಿತ ಸಂಭ್ರವಿಸಿತ್ತು. ಇದ್ರ ಮಾಹಿತಿ ಗೊತ್ತಿದ್ದೂ ಸ್ಟೇಡಿಯಂ ಒಳಗೆ ಫ್ರಾಂಚೈಸಿ ಸಂಭ್ರಮಾಚರಣೆ ನಡೆಸಿತು. ಸಂತಾಪ ಸೂಚಿಸಲಿಲ್ಲ, ವಿಷಾದ ವ್ಯಕ್ತಪಡಿಸಲಿಲ್ಲ. ಕನಿಷ್ಟ ಪಕ್ಷ ಸುರಕ್ಷಿತ ಮನೆಗೆ ಹೋಗಿ. ಅವಸರ ಬೇಡ ಎಂಬ ಒಂದು ಹೇಳಿಕೆಯನ್ನಾದ್ರೂ ಕೊಡಿಸಬಹುದಿತ್ತಲ್ವಾ?

ಕನ್ನಡಿಗರು ಅಂದ್ರೆ ಫ್ರಾಂಚೈಸಿಗೆ ಸದಾ ಅಸಡ್ಡೆ

ಕನ್ನಡಿಗರ ವಿಚಾರದಲ್ಲಿ ಫ್ರಾಂಚೈಸಿಗೆ ಅಸಡ್ಡೆ.. ಆರಂಭಿಕ ಸೀಸನ್​​ ಹೊರತುಪಡಿಸಿದ್ರೆ, ಉಳಿದ ಸೀಸನ್​ಗಳಲ್ಲಿ ಕರ್ನಾಟಕದ ಆಟಗಾರರು ಲೆಕ್ಕಕ್ಕಿದ್ರು. ಆಟಕ್ಕಿರಲಿಲ್ಲ..! ಆಕ್ಷನ್​ನಲ್ಲೂ ಅಷ್ಟೇ.. ವಿದೇಶಿ ಆಟಗಾರರ ಮೇಲೆಲ್ಲಾ ಕೋಟಿ-ಕೋಟಿ ಸುರಿಯೋ ಫ್ರಾಂಚೈಸಿ ಕನ್ನಡಿಗರಿಗೆ ಬಿಡ್​​ ಮಾಡೋಕೆ ಹಿಂದೆ ಮುಂದೆ ನೋಡೋದು ಜಗತ್ತಿಗೆ ಗೊತ್ತು. ಮೆಗಾ ಆಕ್ಷನ್​ನಲ್ಲಿ ಕೆ.ಎಲ್​ ರಾಹುಲ್​ ಖರೀದಿ ವಿಚಾರದಲ್ಲಿ ಮಾಡಿದ್ದೂ ಅದನ್ನೇ.

ಇದನ್ನೂ ಓದಿ: KSCAಗೆ ತಾತ್ಕಾಲಿಕ ರಿಲೀಫ್ ಕೊಟ್ಟ ಹೈಕೋರ್ಟ್​.. RCB ನಿಖಿಲ್ ಸೋಸಲೆ ವಿಚಾರಣೆ ಏನಾಯ್ತು..?

Advertisment

publive-image

ಒಬ್ಬೆ ಒಬ್ಬ ಸಪೋರ್ಟ್​​​ ಸ್ಟಾಫ್​​ ಕನ್ನಡದವರಿಲ್ಲ

ಜಂಟಲ್​ಮನ್​ ಗೇಮ್​ಗೆ ಲೆಜೆಂಡ್​ಗಳನ್ನ ಉಡುಗೊರೆಯಾಗಿ ನೀಡಿದ ರಾಜ್ಯ ನಮ್ದು. ಆದ್ರೆ, ಆ ಲೆಜೆಂಡ್​ಗಳ್ಯಾರೂ ಆರ್​​ಸಿಬಿಗೆ ಬೇಡ. ಇಡೀ ಆರ್​​ಸಿಬಿ ತಂಡದ ಸಪೋರ್ಟ್​ ಸ್ಟಾಫ್​ನಲ್ಲಿ ಒಬ್ಬೇ ಒಬ್ಬ ಕನ್ನಡಿಗ ಇಲ್ಲ. ಇಷ್ಟರಮಟ್ಟಿಗೆ ಕನ್ನಡಿಗರನ್ನ ನಗ್ಲೆಟ್​ ಮಾಡೋ ಫ್ರಾಂಚೈಸಿ ತನ್ನ ಕೆಟ್ಟ ನಿರ್ಧಾರ ತಳೆದು 11 ಮಂದಿ ಕನ್ನಡಿಗರ ಬಲಿ ಪಡೆದಿದೆ. ಮುಂದಾದ್ರೂ ಆರ್​​ಸಿಬಿ ಕನ್ನಡಿಗರು, ಕರ್ನಾಟಕ, ಮುಖ್ಯವಾಗಿ ಅಭಿಮಾನಿಗಳ ವಿಚಾರದಲ್ಲಿ ಬದಲಾಗಬೇಕಿದೆ.

ಇದನ್ನೂ ಓದಿ: ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್‌ ಮೇಲೆ ತಿರಂಗ ಧ್ವಜ ಹಾರಿಸಿದ ಪ್ರಧಾನಿ; ಮೋದಿ ಸಂಭ್ರಮದ ಕ್ಷಣಗಳು ಇಲ್ಲಿದೆ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment