/newsfirstlive-kannada/media/post_attachments/wp-content/uploads/2025/03/RAMYA-1.jpg)
ಇವತ್ತು ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್​ 50ನೇ ಹುಟ್ಟು ಹಬ್ಬದ ಸಂಭ್ರಮ.. ರಾಜ್ಯಾದ್ಯಂತ ಮರೆಯಲಾರದ ರಾಜರತ್ನನ ನೆನಪು ಮನೆ ಮಾಡಿದೆ.. ಮಧ್ಯರಾತ್ರಿಯಿಂದಲೇ ಅಪ್ಪು ಅಭಿಮಾನಿಗಳ ಸೆಲೆಬ್ರೇಷನ್ ಜೋರಾಗಿತ್ತು. ಅದ್ರ ಝಲಕ್​ ಇಲ್ಲಿದೆ ನೋಡಿ.
ಇವತ್ತು ಬಾನದಾರಿಯಲ್ಲಿ ಜಾರಿ ಹೋದ ಮರೆಯಲಾರದ ಮಾಣಿಕ್ಯ. ಕರ್ನಾಟಕ ರತ್ನ, ಅಭಿಮಾನಿಗಳ ಪಾಲಿನ ಆರಾಧ್ಯ ದೈವ.. ನಗುವಿನ ಒಡೆಯ ಪುನೀತ್​​ ರಾಜಕುಮಾರ್​ಗೆ 50ರ ಸಂಭ್ರಮ. ಅಪ್ಪು ನಮ್ಮೊಂದಿಗಿಲ್ಲದಿದ್ರೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರ ಅನ್ನೋದಕ್ಕೆ ಈ ಜನಸಾಗರವೇ ಸಾಕ್ಷಿ.
ಇವತ್ತು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಹುಟ್ಟುಹಬ್ಬ. ಮಧ್ಯರಾತ್ರಿಯಿಂದಲೇ ಅಪ್ಪು ಸಮಾಧಿ ಬಳಿ ಚಿಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸಮಾಧಿ ದರ್ಶನ ಪಡೆಯಲು ಆಗಮಿಸಿದ್ರು. ಆದ್ರೆ, ಬೆಳಗ್ಗೆ ದರ್ಶನ ವ್ಯವಸ್ಥೆ ಇರುವ ಕಾರಣದಿಂದ ಅಪ್ಪು ಅಭಿಮಾನಿಗಳು, ಕಂಠೀರವ ಸ್ಟುಡಿಯೋ ಮುಂದೆ ಪಟಾಕಿ ಸಿಡಿಸಿ, ಕೇಕ್​ ಕತ್ತರಿಸಿ ಸಂಭ್ರಮಿಸಿದ್ರು.. ಹಾಗೇ ಅಪ್ಪು ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿದ್ರು.
ಪುನೀತ್​​ ರಾಜ್​ಕುಮಾರ್​​ 50ನೇ ಹುಟ್ಟುಹಬ್ಬ ಪ್ರಯುಕ್ತ, ‘ಅಪ್ಪು’ಸಿನಿಮಾ ರೀ-ರಿಲೀಸ್ ಆಗಿ ಭರ್ಜರಿ​​ ಪ್ರದರ್ಶನ ಕಾಣ್ತಿದೆ. ನಿನ್ನೆ ಮೋಹಕ ತಾರೆ ರಮ್ಯಾ ಅಪ್ಪು ಸಿನಿಮಾ ನೋಡಿದ್ರು. ವೀರೇಶ್​​ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ಚಿತ್ರ ವೀಕ್ಷಿಸಿದ ರಮ್ಯಾ, ಸಿಕ್ಕಾಪಟ್ಟೆ ಖುಷಿ ಪಟ್ರು.. ರಮ್ಯಾರಿಗೆ ನಟಿ ಶರ್ಮಿಳಾ ಮಾಂಡ್ರೆ ಸಾಥ್ ನೀಡಿದ್ರು.
ಇನ್ನು, ಸಿನಿಮಾ ವೀಕ್ಷಿಸಿದ ಬಳಿಕ ಮಾತ್ನಾಡಿದ ರಮ್ಯಾ, 23 ವರ್ಷದ ಹಿಂದೆ ಈ ಸಿನಿಮಾನ ನೋಡಿದ್ದೆ. ಆಗಿದ್ದ ಸೇಮ್​ ಕ್ರೇಜ್​ ಈಗಲೂ ಇದೆ. ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ದು ಬಹಳ ಖುಷಿ ಕೊಡ್ತು. ನಾನು ಕೂಡ ಅಪ್ಪು ಫ್ಯಾನ್​ ಅಂತ ಹೇಳಿದ್ರು.
ಅಪ್ಪು ಹುಟ್ಟುಹುಬ್ಬ ಪ್ರಯುಕ್ತ ಹಬ್ಬದ ವಾತವರಣ ಸೃಷ್ಟಿಸಿದೆ.. ಅಪ್ಪು ದೈಹಿಕವಾಗಿ ನಮ್ಮೆಲ್ಲರನ್ನ ಅಗಲಿದ್ರೂ ಕೋಟಿ ಕೋಟಿ ಅಭಿಮಾನಿಗಳ ಹೃದಯಗಳಲ್ಲಿ ವಿರಾಜಮಾನರಾಗಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಅನ್ನೋ ರೀತಿ ಅಭಿಮಾನಿಗಳ ಆರಾಧ್ಯದೈವ ಎಂದಿಗೂ ಕನ್ನಡಿಗರ ಹೃದಯದಲ್ಲಿ ಅಜರಾಮರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ