newsfirstkannada.com

ಮಿಸ್ ಯು ಕೀರ್ತಿ​​.. ಲಕ್ಷ್ಮೀ ಬಾರಮ್ಮ ಸೀರಿಯಲ್​ನಿಂದ ಹೊರ ಬಂದ್ರಾ ನಟಿ ತನ್ವಿ ರಾವ್​​? ಫ್ಯಾನ್ಸ್​ ಬೇಸರ!

Share :

Published August 19, 2024 at 6:10am

Update August 19, 2024 at 6:08am

    ಸಾಮಾಜಿಕ ಜಾಲಾತಾಣದಲ್ಲಿ ​ಕೀರ್ತಿ ಬೇಗ ಬಾ ಅಂತ ಕಾಮೆಂಟ್ಸ್​ ಹಾಕಿದ ಫ್ಯಾನ್ಸ್​

    ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ ಈ ಸೀರಿಯಲ್​

    ತಪ್ಪು ಮಾಡಿದ ಕಾವೇರಿಗೆ ಶಿಕ್ಷೆ ಕೊಡಿಸಬೇಕು ಎಂದು ವೀಕ್ಷಕರಿಂದ ಭಾರೀ ಆಕ್ರೋಶ

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ತನ್ನದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.

ಈಗಂತೂ ಲಕ್ಷ್ಮೀ ಬಾರಮ್ಮ ಸೀರಿಯಲ್​ ಕಥೆಯನ್ನು ಬಹಳ ರೋಚಕವಾಗಿ ತೆರೆಗೆ ತರುತ್ತಿದ್ದಾರೆ. ಅದರಂತೆ ಒಂದು ವಾರದಿಂದ ನಡೆಯುತ್ತಿರೋ ಎಪಿಸೋಡ್​ಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಥೆಗೆ ಬರುವುದಾದರೆ, ಕಾವೇರಿಯ ಅಸಲಿ ಮುಖವಾಡ ಕಳಚಲೆಂದು ಬೆಟ್ಟದ ತುದಿಯಲ್ಲಿ ಮಂಟಪ ಹಾಕಿಸಿದ್ದಳು ಕೀರ್ತಿ. ಅದಕ್ಕಾಗಿ ಕಾವೇರಿಯನ್ನು ಡೋಲು ಬಡಿಸುತ್ತಲೇ ಅಲ್ಲಿಗೆ ಕರೆಸಿಕೊಂಡಿದ್ದಳು. ಅದೇ ಸಮಯದಲ್ಲಿ ಕಾವೇರಿ ಹಾಗೂ ಕೀರ್ತಿ ನಡುವೆ ಮಾತಿನ ಚಕಮಕಿ ನಡೆದಿದೆ. ಆ ವೇಳೆ ಕೀರ್ತಿ ಮುಂದೆ ಮತ್ತೆ ಕಾವೇರಿ ನಾಟಕ ಮಾಡಿ ಬೆಟ್ಟದ ಮೇಲಿಂದ ಕೀರ್ತಿ ಕೆಳಗೆ ಬಿದ್ದಿದ್ದಳು. ಬಳಿಕ ತನಗೆ ಏನೂ ಗೊತ್ತಿಲ್ಲದ ಹಾಗೇ ಮನೆಯವರ ಮುಂದೆ ನಟಕವಾಡುತ್ತಿದ್ದಾಳೆ.

ಇದನ್ನೂ ಓದಿ: ಡಾ.ಬ್ರೋ ಕಾರ್ಯಕ್ಕೆ ಫ್ಯಾನ್ಸ್‌ ಫಿದಾ.. ಸ್ವಾತಂತ್ರ್ಯ ದಿನಾಚರಣೆ ದಿನವೇ ಗಗನ್ ಹೊಸ ಸಾಹಸ; ಏನದು?

ಇನ್ನು, ಕೀರ್ತಿಯ ಪಾತ್ರಕ್ಕೆ ನ್ಯಾಯ ಸಿಗದೆ ಕೊನೆ ಮಾಡಿರೋದಕ್ಕೆ ವೀಕ್ಷಕರು ನಿರ್ದೇಶಕರ ಮೇಲೆ ಕೋಪಗೊಂಡಿದ್ದಾರೆ.  ಕೀರ್ತಿಗೆ ಏನಾಗಿದೆ? ವಿ ಮಿಸ್​ ಯೂ ಕೀರ್ತಿ, ಸತ್ಯ ಹುಡುಕಲು ಹೋಗಿದ್ದ ಕೀರ್ತಿ ಮತ್ತೆ ಬದುಕಿ ಬರೋದಿಲ್ವಾ? ಯಾಕೆ ಕೀರ್ತಿಯನ್ನು ಮತ್ತೆ ತೆರೆ ಮೇಲೆ ತೋರಿಸುತ್ತಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು, ಕಾವೇರಿಗೆ ಶಿಕ್ಷೆ ಆಗಲೇಬೇಕು ಅಂತ ಕಾಮೆಂಟ್ಸ್​ ಹಾಕುವ ಮೂಲಕ ಕೀರ್ತಿ ಪರವಾಗಿ ಮಾತಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ಯಾವ ರೀತಿ ಟ್ವಿಸ್ಟ್​ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿಸ್ ಯು ಕೀರ್ತಿ​​.. ಲಕ್ಷ್ಮೀ ಬಾರಮ್ಮ ಸೀರಿಯಲ್​ನಿಂದ ಹೊರ ಬಂದ್ರಾ ನಟಿ ತನ್ವಿ ರಾವ್​​? ಫ್ಯಾನ್ಸ್​ ಬೇಸರ!

https://newsfirstlive.com/wp-content/uploads/2024/08/laxmi-baramma6.jpg

    ಸಾಮಾಜಿಕ ಜಾಲಾತಾಣದಲ್ಲಿ ​ಕೀರ್ತಿ ಬೇಗ ಬಾ ಅಂತ ಕಾಮೆಂಟ್ಸ್​ ಹಾಕಿದ ಫ್ಯಾನ್ಸ್​

    ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ ಈ ಸೀರಿಯಲ್​

    ತಪ್ಪು ಮಾಡಿದ ಕಾವೇರಿಗೆ ಶಿಕ್ಷೆ ಕೊಡಿಸಬೇಕು ಎಂದು ವೀಕ್ಷಕರಿಂದ ಭಾರೀ ಆಕ್ರೋಶ

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ತನ್ನದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.

ಈಗಂತೂ ಲಕ್ಷ್ಮೀ ಬಾರಮ್ಮ ಸೀರಿಯಲ್​ ಕಥೆಯನ್ನು ಬಹಳ ರೋಚಕವಾಗಿ ತೆರೆಗೆ ತರುತ್ತಿದ್ದಾರೆ. ಅದರಂತೆ ಒಂದು ವಾರದಿಂದ ನಡೆಯುತ್ತಿರೋ ಎಪಿಸೋಡ್​ಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಕಥೆಗೆ ಬರುವುದಾದರೆ, ಕಾವೇರಿಯ ಅಸಲಿ ಮುಖವಾಡ ಕಳಚಲೆಂದು ಬೆಟ್ಟದ ತುದಿಯಲ್ಲಿ ಮಂಟಪ ಹಾಕಿಸಿದ್ದಳು ಕೀರ್ತಿ. ಅದಕ್ಕಾಗಿ ಕಾವೇರಿಯನ್ನು ಡೋಲು ಬಡಿಸುತ್ತಲೇ ಅಲ್ಲಿಗೆ ಕರೆಸಿಕೊಂಡಿದ್ದಳು. ಅದೇ ಸಮಯದಲ್ಲಿ ಕಾವೇರಿ ಹಾಗೂ ಕೀರ್ತಿ ನಡುವೆ ಮಾತಿನ ಚಕಮಕಿ ನಡೆದಿದೆ. ಆ ವೇಳೆ ಕೀರ್ತಿ ಮುಂದೆ ಮತ್ತೆ ಕಾವೇರಿ ನಾಟಕ ಮಾಡಿ ಬೆಟ್ಟದ ಮೇಲಿಂದ ಕೀರ್ತಿ ಕೆಳಗೆ ಬಿದ್ದಿದ್ದಳು. ಬಳಿಕ ತನಗೆ ಏನೂ ಗೊತ್ತಿಲ್ಲದ ಹಾಗೇ ಮನೆಯವರ ಮುಂದೆ ನಟಕವಾಡುತ್ತಿದ್ದಾಳೆ.

ಇದನ್ನೂ ಓದಿ: ಡಾ.ಬ್ರೋ ಕಾರ್ಯಕ್ಕೆ ಫ್ಯಾನ್ಸ್‌ ಫಿದಾ.. ಸ್ವಾತಂತ್ರ್ಯ ದಿನಾಚರಣೆ ದಿನವೇ ಗಗನ್ ಹೊಸ ಸಾಹಸ; ಏನದು?

ಇನ್ನು, ಕೀರ್ತಿಯ ಪಾತ್ರಕ್ಕೆ ನ್ಯಾಯ ಸಿಗದೆ ಕೊನೆ ಮಾಡಿರೋದಕ್ಕೆ ವೀಕ್ಷಕರು ನಿರ್ದೇಶಕರ ಮೇಲೆ ಕೋಪಗೊಂಡಿದ್ದಾರೆ.  ಕೀರ್ತಿಗೆ ಏನಾಗಿದೆ? ವಿ ಮಿಸ್​ ಯೂ ಕೀರ್ತಿ, ಸತ್ಯ ಹುಡುಕಲು ಹೋಗಿದ್ದ ಕೀರ್ತಿ ಮತ್ತೆ ಬದುಕಿ ಬರೋದಿಲ್ವಾ? ಯಾಕೆ ಕೀರ್ತಿಯನ್ನು ಮತ್ತೆ ತೆರೆ ಮೇಲೆ ತೋರಿಸುತ್ತಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು, ಕಾವೇರಿಗೆ ಶಿಕ್ಷೆ ಆಗಲೇಬೇಕು ಅಂತ ಕಾಮೆಂಟ್ಸ್​ ಹಾಕುವ ಮೂಲಕ ಕೀರ್ತಿ ಪರವಾಗಿ ಮಾತಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್​ ಯಾವ ರೀತಿ ಟ್ವಿಸ್ಟ್​ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More