ಬದುಕು ಬದಲಾಯಿಸಿದ ವೀಳ್ಯದೆಲೆ.. ಕಪ್ಪು ಮಣ್ಣಿನಲ್ಲಿ ಗದಗ ರೈತನ ಚಮತ್ಕಾರ..!

author-image
Ganesh
Updated On
ಬದುಕು ಬದಲಾಯಿಸಿದ ವೀಳ್ಯದೆಲೆ.. ಕಪ್ಪು ಮಣ್ಣಿನಲ್ಲಿ ಗದಗ ರೈತನ ಚಮತ್ಕಾರ..!
Advertisment
  • ವರ್ಷಕ್ಕೆ ಬರ್ತಿದೆ ಲಕ್ಷಾಂತರ ರೂಪಾಯಿ ಆದಾಯ
  • ಇಳಿ ವಯಸ್ಸಲ್ಲೂ ಆರ್ಥಿಕವಾಗಿ ಸದೃಢರಾಗಿ ಮಾದರಿ
  • 1 ಎಕರೆಯಲ್ಲಿ ಸುಮಾರು 1100 ವೀಳ್ಯದೆಲೆ ಬಳ್ಳಿ ನೆಟ್ಟಿದ್ದಾರೆ

ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ರೈತ ವೀರಪ್ಪ ತಲ್ಲೂರು ವಿಳ್ಯದೆಲೆ ಬೆಳೆದು ತಮ್ಮ ಬದುಕನ್ನು ಬದಲಾಯಿಸಿಕೊಂಡಿದ್ದಾರೆ.

publive-image

ವೃದ್ಧ ರೈತ ತಮಗೆ ಇರುವ ಎರಡು ಎಕರೆ ಜಮೀನಿನಲ್ಲಿ 1 ಎಕರೆಯಲ್ಲಿ ವಿಳ್ಯದೆಲೆ ಬೆಳೆದಿದ್ದಾರೆ. ನರೇಗಾ ಯೋಜನೆಯಡಿ ವೀಳ್ಯದೆಲೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢ ಆಗುವ ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ. 1 ಎಕರೆಯಲ್ಲಿ ಸುಮಾರು 1100 ವೀಳ್ಯದೆಲೆ ಬಳ್ಳಿ ನೆಟ್ಟಿದ್ದಾರೆ. ನುಗ್ಗೆ, ಬೋರಲ, ಚೊಗಸಿ, ಗಿಡಗಳಿಗೆ ಬಳ್ಳಿ ಹಬ್ಬಿಸಿ ಸಮಗ್ರ ಕೃಷಿ ಮಾಡುವ ಮೂಲಕ ವರ್ಷಕ್ಕೆ ಅಂದಾಜು ಲಕ್ಷಾಂತರ ರೂಪಾಯಿ ಆದಾಯ ಗಳಿಸ್ತಿದ್ದಾರೆ.

publive-image

ಸಾಮಾನ್ಯವಾಗಿ ವೀಳ್ಯದೆಲೆ ಬೆಳೆಯನ್ನ ಕೆಂಪು ಮಣ್ಣಿನಲ್ಲಿ ಬೆಳೆಯುತ್ತಾರೆ. ಅದರಲ್ಲೂ ರೋಣ ಭಾಗದಲ್ಲಿ ಈ ಬೆಳೆ ಕಾಣಸಿಗೋದಿಲ್ಲ. ಬಹುತೇಕ ಗದಗ ಜಿಲ್ಲೆಯಲ್ಲಿ ಒಣಬೇಸಾಯ ಪದ್ದತಿಯಲ್ಲಿ ಬೆಳೆ ಬಳೆಯಲಾಗುತ್ತೆ. ಈ ರೈತ ಬೋರ್​ವೆಲ್ ಕೊರಸಿ ಕೇವಲ 2 ಇಂಚು ನೀರಿನಲ್ಲಿ ನೀರಾವರಿ ಮಾಡ್ತಿದ್ದಾರೆ.‌ ಪವಾಡವೆಂಬಂತೆ ವೀಳ್ಯದೆಲೆ ಸಹ ಉತ್ತಮ ಇಳುವರಿ ಬಂದಿದ್ದು ತಿಂಗಳಿಗೆ 15 ರಿಂದ 20 ಸಾವಿರ ರೂ ಆದಾಯದ ನಿರೀಕ್ಷೆ ಮಾಡ್ತಿದ್ದಾರೆ.

ಇದನ್ನೂ ಓದಿ:Pushpa 2: The Rule: ಟಿಕೆಟ್ ಬುಕ್ಕಿಂಗ್​ನಲ್ಲಿ ಹೊಸ ದಾಖಲೆ; ಕರ್ನಾಟಕದಲ್ಲಿ ಹೇಗಿದೆ ಕ್ರೇಜ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment