25 ವರ್ಷಗಳಿಂದ ಬೇಡಿಕೆಗೆ ಸ್ಪಂದಿಸದ ಸರ್ಕಾರ ಮತ್ತು ಅಧಿಕಾರಿಗಳು.. ಊರಿಗೆ ತಾವೇ ತೇಲುವ ಸೇತುವೆ ನಿರ್ಮಿಸಿದ ರೈತರು

author-image
AS Harshith
Updated On
25 ವರ್ಷಗಳಿಂದ ಬೇಡಿಕೆಗೆ ಸ್ಪಂದಿಸದ ಸರ್ಕಾರ ಮತ್ತು ಅಧಿಕಾರಿಗಳು.. ಊರಿಗೆ ತಾವೇ ತೇಲುವ ಸೇತುವೆ ನಿರ್ಮಿಸಿದ ರೈತರು
Advertisment
  • ಕೃಷ್ಣಾ ನದಿ ನಡುಗಡ್ಡೆಯಲ್ಲಿರುವ ರೈತರ ನೋವು ಆಲಿಸದ ಸರ್ಕಾರ ಮತ್ತು ಅಧಿಕಾರಿಗಳು
  • 25 ವರ್ಷಗಳ ಬೇಡಿಕೆಗೆ ಬೇಸತ್ತ ರೈತರು ಒಟ್ಟುಗೂಡಿ ಏನು ಮಾಡಿದ್ರು ಗೊತ್ತಾ?
  • 600 ಫೂಟ್ ಉದ್ದದ ಸೇತುವೆಯ ನಿರ್ಮಾಣ ಮಾಡಲು ಹೊರ ರೈತರು

ಬಾಗಲಕೋಟೆ: 25 ವರ್ಷಗಳ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು ಹಾಗೂ ಸರ್ಕಾರ ನಡೆಗೆ ಬೇಸತ್ತು ರೈತರೇ ಸೇತುವೆ ನಿರ್ಮಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಂಕನವಾಡಿ ನಡುಗಡ್ಡೆ ಪ್ರದೇಶದಲ್ಲಿ ರೈತರು ದೇಣಿಗೆ ಮೂಲಕ ತೇಲುವ ಸೇತುವೆ ನಿರ್ಮಿಸ್ತಿದ್ದಾರೆ.

publive-image

ಕೃಷ್ಣಾ ನದಿ ನಡುಗಡ್ಡೆಯಲ್ಲಿರುವ ಕಂಕನವಾಡಿ ಗ್ರಾಮದಲ್ಲಿ 500-700 ಎಕರೆ ಜಮೀನು ಇದೆ. ಹೀಗಾಗಿ ಪ್ರತಿ ವರ್ಷ ನದಿ ತುಂಬಿದಾಗ ಇಲ್ಲಿನ ರೈತರು ಬೋಟ್ ಮೂಲಕ ನಿತ್ಯದ ಜೀವ ಸಾಗಿಸುವ ಅನಿವಾರ್ಯತೆ ಎದುರಾಗುತ್ತೆ. ಅಲ್ಲದೇ ಕಬ್ಬಿನ ಬೆಳೆಯನ್ನೂ ಸಹ ಬೋಟ್ ಮೂಲಕ ಸಾಗಿಸಲಾಗುತ್ತೆ. ಸರ್ಕಾರಕ್ಕೆ ಈ ಬಗ್ಗೆ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ. ಇದ್ರಿಂದ ರೈತರೆಲ್ಲಾ ಕೂಡಿಕೊಂಡು ಅಂದಾಜು 25 ಲಕ್ಷ ವೆಚ್ಚದಲ್ಲಿ ಬ್ಯಾರೆಲ್ ಸೇತುವೆ ನಿರ್ಮಾಣ ಕಾರ್ಯ ನಡೆಸಿದ್ದಾರೆ.

ಇದನ್ನು ಓದಿ:ಪರೀಕ್ಷೆ ಬರೆಯುವ ಸಮಯದಲ್ಲಿ ಹೃದಯಾಘಾತ; 9ನೇ ತರಗತಿ ವಿದ್ಯಾರ್ಥಿ ಸಾವು

publive-image

ಈಗಾಗಲೆ ಸುಮಾರು 600 ಫೂಟ್ ಉದ್ದದ ಸೇತುವೆಯಲ್ಲಿ 500 ಫೂಟ್ ಕಂಪ್ಲೀಟ್ ಆಗಿದೆ. ಇನ್ನು ಸೇತುವೆಗೆ ಸುಮಾರು 15 ಟನ್ ಕಬ್ಬಿಣ, 300 ಬ್ಯಾರೆಲ್ ಬಳಕೆ ಮಾಡಿಕೊಳ್ಳಲಾಗಿದ್ದು, ನಡುಗಡ್ಡೆಯಲ್ಲಿರುವ 100ಕ್ಕೂ ಹೆಚ್ಚು ಕುಟುಂಬಗಳಿಗೆ, ಶಾಲಾ ಮಕ್ಕಳಿಗೆ ಅನುಕೂಲ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment