newsfirstkannada.com

ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದ.. ಮಗಳ ಸಹವಾಸಕ್ಕೆ ಬರಬೇಡ ಅಂದಿದ್ದಕ್ಕೆ ಅಪ್ಪನಿಗೆ ಏನ್ ಮಾಡಿದ ಗೊತ್ತಾ?

Share :

Published September 3, 2023 at 7:27am

Update September 3, 2023 at 7:32am

    ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದು ಪ್ರಾಣ ತಿನ್ನುತ್ತಿದ್ದ ಯುವಕ

    ಬಾಲಕಿ ಶಾಲೆಗೆ ಹೋಗುವಾಗ, ಬರುವಾಗ ಹಿಂಬಾಲಿಸಿ ಟಾರ್ಚರ್‌

    ಮಗಳ ಸಹವಾಸಕ್ಕೆ ಬರಬೇಡ ಎಂದು ಬುದ್ಧಿವಾದ ಹೇಳಿದ್ದೇ ತಪ್ಪಾ?

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಸಿಲ್ಲಿ, ಸಿಲ್ಲಿ ಕಾರಣಗಳಿಗೆಲ್ಲಾ ರಕ್ತದೋಕುಳಿ ಆಡಲಾಗುತ್ತೆ. ಇಲ್ಲೊಬ್ಬ ಪಾತಕಿ ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದು ಅಡ್ಡಿ ಬಂದ ಆಕೆಯ ಅಪ್ಪನ ಜೀವವನ್ನೇ ತೆಗೆದಿದ್ದಾನೆ. ಮಗಳ ಸಹವಾಸಕ್ಕೆ ಬರಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಅಪ್ಪನ ಮರ್ಡರ್ ಆಗಿದೆ.

ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿ ಈ ಭಯಾನಕ ಹತ್ಯೆ ನಡೆದಿದೆ. ಕೊಲೆ ಆರೋಪಿ ಝಹೀದ್‌ ಪ್ರೀತಿಸುವಂತೆ 15 ವರ್ಷದ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಶಾಲೆಗೆ ಹೋಗುವಾಗ, ಬರುವಾಗ ಪ್ರೀತ್ಸೆ ಅಂತ ಪ್ರಾಣ ತಿನ್ನುತ್ತಿದ್ದ ಎನ್ನಲಾಗಿದೆ. ಕೊನೆಗೆ ಮಗಳು ಬೇಸತ್ತು ಈ ಪೋಲಿಯ ವಿಚಾರವನ್ನ ತನ್ನ ತಂದೆ ಮೃತ ಅನ್ವರ್ ಹುಸೇನ್‌ಗೆ ತಿಳಿಸಿದ್ದಾಳೆ.

ಕಳೆದ ಮೂರು ತಿಂಗಳ ಹಿಂದೆ ಆರೋಪಿ ಝಹೀದ್‌ಗೆ ಮೃತ ಅನ್ವರ್‌ ಬುದ್ಧಿವಾದ ಹೇಳಿದ್ದಾನೆ. ಪಾತಕಿ ಝಹೀದ್‌ ನಿನ್ನೆ ಮತ್ತೆ ಅಪ್ರಾಪ್ತೆಯನ್ನ ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಮಗಳ ವಿಚಾರಕ್ಕೆ ಮತ್ತೆ ಬರಬೇಡ ಎಂದು ಹೇಳಲು ಹೋದಾಗ ಝಹೀದ್‌, ಅನ್ವರ್​ ಹುಸೇನ್​ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಡೆಡ್ಲಿ ಮರ್ಡರ್ ಮಾಡಿದ ಬಳಿಕ ಝಹೀದ್‌ ಪರಾರಿಯಾಗಿದ್ದು, ಅಶೋಕನಗರ ಪೊಲೀಸ್ರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದ.. ಮಗಳ ಸಹವಾಸಕ್ಕೆ ಬರಬೇಡ ಅಂದಿದ್ದಕ್ಕೆ ಅಪ್ಪನಿಗೆ ಏನ್ ಮಾಡಿದ ಗೊತ್ತಾ?

https://newsfirstlive.com/wp-content/uploads/2023/09/Bangalore-Murder.jpg

    ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದು ಪ್ರಾಣ ತಿನ್ನುತ್ತಿದ್ದ ಯುವಕ

    ಬಾಲಕಿ ಶಾಲೆಗೆ ಹೋಗುವಾಗ, ಬರುವಾಗ ಹಿಂಬಾಲಿಸಿ ಟಾರ್ಚರ್‌

    ಮಗಳ ಸಹವಾಸಕ್ಕೆ ಬರಬೇಡ ಎಂದು ಬುದ್ಧಿವಾದ ಹೇಳಿದ್ದೇ ತಪ್ಪಾ?

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಸಿಲ್ಲಿ, ಸಿಲ್ಲಿ ಕಾರಣಗಳಿಗೆಲ್ಲಾ ರಕ್ತದೋಕುಳಿ ಆಡಲಾಗುತ್ತೆ. ಇಲ್ಲೊಬ್ಬ ಪಾತಕಿ ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದು ಅಡ್ಡಿ ಬಂದ ಆಕೆಯ ಅಪ್ಪನ ಜೀವವನ್ನೇ ತೆಗೆದಿದ್ದಾನೆ. ಮಗಳ ಸಹವಾಸಕ್ಕೆ ಬರಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಅಪ್ಪನ ಮರ್ಡರ್ ಆಗಿದೆ.

ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿ ಈ ಭಯಾನಕ ಹತ್ಯೆ ನಡೆದಿದೆ. ಕೊಲೆ ಆರೋಪಿ ಝಹೀದ್‌ ಪ್ರೀತಿಸುವಂತೆ 15 ವರ್ಷದ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಶಾಲೆಗೆ ಹೋಗುವಾಗ, ಬರುವಾಗ ಪ್ರೀತ್ಸೆ ಅಂತ ಪ್ರಾಣ ತಿನ್ನುತ್ತಿದ್ದ ಎನ್ನಲಾಗಿದೆ. ಕೊನೆಗೆ ಮಗಳು ಬೇಸತ್ತು ಈ ಪೋಲಿಯ ವಿಚಾರವನ್ನ ತನ್ನ ತಂದೆ ಮೃತ ಅನ್ವರ್ ಹುಸೇನ್‌ಗೆ ತಿಳಿಸಿದ್ದಾಳೆ.

ಕಳೆದ ಮೂರು ತಿಂಗಳ ಹಿಂದೆ ಆರೋಪಿ ಝಹೀದ್‌ಗೆ ಮೃತ ಅನ್ವರ್‌ ಬುದ್ಧಿವಾದ ಹೇಳಿದ್ದಾನೆ. ಪಾತಕಿ ಝಹೀದ್‌ ನಿನ್ನೆ ಮತ್ತೆ ಅಪ್ರಾಪ್ತೆಯನ್ನ ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಮಗಳ ವಿಚಾರಕ್ಕೆ ಮತ್ತೆ ಬರಬೇಡ ಎಂದು ಹೇಳಲು ಹೋದಾಗ ಝಹೀದ್‌, ಅನ್ವರ್​ ಹುಸೇನ್​ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಡೆಡ್ಲಿ ಮರ್ಡರ್ ಮಾಡಿದ ಬಳಿಕ ಝಹೀದ್‌ ಪರಾರಿಯಾಗಿದ್ದು, ಅಶೋಕನಗರ ಪೊಲೀಸ್ರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More