/newsfirstlive-kannada/media/post_attachments/wp-content/uploads/2024/08/Gambhir_Rohit-Fight-1.jpg)
ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯ ಟೀಮ್ ಇಂಡಿಯಾದ ರಿಯಲ್ ಬಾಸ್ ಹೆಡ್ ಕೋಚ್ ಗೌತಮ್ ಗಂಭೀರ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದೆ. ಆಂಗ್ಲರ ವಿರುದ್ಧದ ಕದನದಲ್ಲೂ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಗಂಭೀರ್ ಮೇಲುಗೈ ಸಾಧಿಸಿದ್ದಾರೆ. ವಿಕೆಟ್ ಕೀಪರ್ ಕೋಟಾದಲ್ಲಿ ರಾಹುಲ್ನ ಆಡಿಸುವಲ್ಲಿ ಗಂಭೀರ್ ಸಕ್ಸಸ್ ಆದ್ರೆ, ಪಂತ್ಗಾಗಿ ಪಟ್ಟು ಹಿಡಿದಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ನಿರಾಶರಾಗಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ಸರಣಿ ಸೋತ ಬಳಿಕ ಕೋಚ್ ಗೌತಮ್ ಗಂಭೀರ್, ಕ್ಯಾಪ್ಟನ್ ರೋಹಿತ್ ಶರ್ಮಾ ನಡುವೆ ಎಲ್ಲಾ ಸರಿಯಿಲ್ಲ ಅನ್ನೋ ಸುದ್ದಿ ಸದ್ದು ಮಾಡಿತ್ತು. ಎಲ್ಲಾ ಸರಿಯಿದೆ ಎಂದು ಬಿಸಿಸಿಐನ ಕೆಲ ಅಧಿಕಾರಿಗಳು ಇದಕ್ಕೆ ತೇಪೆ ಹಚ್ಚೋ ಕೆಲ್ಸ ಮಾಡಿದ್ರು. ಇಂಡೋ-ಇಂಗ್ಲೆಂಡ್ ಮೊದಲ ಏಕದಿನ ಫೈಟ್ ಟೀಮ್ ಇಂಡಿಯಾದ ಕೋಚ್ vs ಕ್ಯಾಪ್ಟನ್ ನಡುವಿನ ಮುಸುಕಿನ ಗುದ್ದಾಟ ಇನ್ನೂ ಮುಗಿದಿಲ್ಲ ಅನ್ನೋ ಕತೆಯನ್ನ ಹೇಳ್ತಿದೆ.
ಫೈಟ್ನಲ್ಲಿ ಗೆದ್ದ ಗಂಭೀರ್
ಆಸ್ಟ್ರೇಲಿಯಾ ಪ್ರವಾಸದ ಹೀನಾಯ ಸೋಲಿನ ಬಳಿಕ ಗಂಭೀರ್ ಪವರ್ಕಟ್ ಮಾಡಿದೆ ಎನ್ನಲಾಗಿತ್ತು. ಅಸಲಿಗೆ ಗಂಭೀರ್ ಖದರ್ ಕಡಿಮೆಯಾಗಿಲ್ಲ. ಕ್ಯಾಪ್ಟನ್ ರೋಹಿತ್ ಶರ್ಮಾ ಅಲ್ಲ.. ಗೌತಮ್ ಗಂಭೀರ್ ಟೀಮ್ ಇಂಡಿಯಾದ ರಿಯಲ್ ಬಾಸ್ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಕೋಚ್ ಹೇಳಿದ್ದೇ ವೇದವಾಕ್ಯ.. ಫೈನಲ್ ಮಾಡಿದ್ದೇ ಟೀಮ್. ಕ್ಯಾಪ್ಟನ್ ಕೆಲಸ ಆನ್ಫೀಲ್ಡ್ ಮಾತ್ರ ಅನ್ನೋದನ್ನ ಇಂಗ್ಲೆಂಡ್ ಎದುರಿನ ಏಕದಿನ ಪಂದ್ಯ ರಿವೀಲ್ ಮಾಡಿದೆ.
ಇದನ್ನೂ ಓದಿ: 12.75 ಲಕ್ಷವರೆಗೆ ಆದಾಯ ತೆರಿಗೆ ವಿನಾಯತಿ ಬೆನ್ನಲ್ಲೇ.. ಮತ್ತೊಂದು ಗುಡ್ನ್ಯೂಸ್ ನಿರೀಕ್ಷೆಯಲ್ಲಿ ಜನ..!
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನಕ್ಕೂ ಮುನ್ನ ಸೆಲೆಕ್ಷನ್ ಹೆಡ್ಡೇಕ್ ಟೀಮ್ ಇಂಡಿಯಾಗೆ ಎದುರಾಗಿತ್ತು. ರಿಷಭ್ ಪಂತ್ vs ಕೆ.ಎಲ್.ರಾಹುಲ್. ಇಬ್ಬರಲ್ಲಿ ಯಾರು ವಿಕೆಟ್ ಕೀಪರ್ ಆಗಿ ಆಡ್ತಾರೆ ಅನ್ನೋ ಪ್ರಶ್ನೆ ಸಖತ್ ಸದ್ದು ಮಾಡಿತ್ತು. ಈ ಸ್ಲಾಟ್ನ ಸೆಲೆಕ್ಷನ್ಗಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಗಂಭೀರ್ ನಡುವೆ ಜಟಾಪಟಿಯೇ ನಡೆದಿತ್ತು. ಈ ಸೆಲೆಕ್ಷನ್ ಜಟಾಪಟಿಯಲ್ಲಿ ಕೊನೆಗೆ ಗೆದ್ದಿದ್ದು ಗೌತಮ್ ಗಂಭೀರ್.
ಪಂದ್ಯಕ್ಕೂ ಮುನ್ನ ರಿಷಭ್ ಪಂತ್ ಟೀಮ್ ಇಂಡಿಯಾ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಅನಿಸಿದ್ರು. ಕೆ.ಎಲ್ ರಾಹುಲ್ ತಂಡದಲ್ಲಿ ಇದ್ರೂ ಕೀಪರ್ ಜವಾಬ್ದಾರಿ ಪಂತ್ ಹೆಗಲೇರುತ್ತೆ ಎಂದು ನಿರೀಕ್ಷಿಲಾಗಿತ್ತು. ಪಂತ್ ಪ್ಲೇಯಿಂಗ್ ಇಲೆವೆನ್ನಿಂದಲೇ ಹೊರಬಿದ್ರು. ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಲಾಟ್ನಲ್ಲಿ ಕಣಕ್ಕಿಳಿದ್ರು. ಈ ನಿರ್ಧಾರದ ಹಿಂದಿನ ಸೂತ್ರಧಾರಿ ಹೆಡ್ ಕೋಚ್ ಗೌತಮ್ ಗಂಭೀರ್..
ಇದನ್ನೂ ಓದಿ: Repo rate: ಮತ್ತೊಂದು ಬಿಗ್ ರಿಲೀಫ್; ಗೃಹ, ವಾಹನ ಸಾಲ ಮಾಡೋರಿಗೆ ಗುಡ್ನ್ಯೂಸ್..!
ರೋಹಿತ್ಗೆ ಬೇಕಿತ್ತು ಪಂತ್
ಕೆ.ಎಲ್.ರಾಹುಲ್ ಆ್ಯಂಡ್ ರಿಷಭ್ ಪಂತ್ ಇಬ್ಬರಲ್ಲಿ ಯಾರಿಗೆ ಚಾನ್ಸ್ ನೀಡೋದು ಎಂಬ ವಿಚಾರದಲ್ಲಿ ಕ್ಯಾಪ್ಟನ್- ಕೋಚ್ ಭಿನ್ನ ನಿಲುವು ತಳೆದಿದ್ರು. ಹೆಡ್ ಕೋಚ್ ಗೌತಮ್ ಗಂಭೀರ್, ಕೆ.ಎಲ್.ರಾಹುಲ್ ಪರವಾಗಿ ನಿಂತರೆ, ನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್ ಪರವಾಗಿ ವಕಾಲತ್ತು ವಹಿಸಿದ್ರು. ಕಮ್ಬ್ಯಾಕ್ ಬಳಿಕ ಟಿ20, ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ಪಂತ್ನೇ ಏಕದಿನ ಫಾರ್ಮಟ್ನಲ್ಲೂ ಆಡಿಸೋ ಲೆಕ್ಕಾಚಾರ ರೋಹಿತ್ ಶರ್ಮಾದ್ದಾಗಿತ್ತು. ಗೌತಮ್ ಗಂಭೀರ್ ಕಳೆದ ಏಕದಿನ ವಿಶ್ವಕಪ್ ವೇಳೆ ಪಂತ್ ಅಲಭ್ಯತೆಯಲ್ಲಿ ಮಿಂಚಿದ್ದ ರಾಹುಲ್ನೇ ಮುಂದುವರೆಸೋ ಪಟ್ಟು ಹಿಡಿದಿದ್ರು. ಕೊನೆಗೆ ಸೆಲೆಕ್ಷನ್ ಫೈಟ್ನಲ್ಲಿ ಗೆದ್ದಿದ್ದಾರೆ.
ರಾಹುಲ್ ಫಸ್ಟ್ ಚಾಯ್ಸ್ ಕೀಪರ್
ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ಮಾತ್ರವಲ್ಲ.. ಈ ಹಿಂದಿನ ಶ್ರೀಲಂಕಾ ಎದುರಿನ ಸರಣಿ ವೇಳೆಯೂ ಪಂತ್ನ ಬೆಂಚ್ಗೆ ಸೀಮಿತ ಮಾಡಿ ಮೊದಲ 2 ಪಂದ್ಯಗಳಲ್ಲಿ ರಾಹುಲ್ ಹೆಗಲಿಗೆ ಕೀಪಿಂಗ್ ಜವಾಬ್ದಾರಿ ನೀಡಲಾಗಿತ್ತು. ಈ ನಿರ್ಧಾರ ಏಕದಿನ ಫಾರ್ಮೆಟ್ನಲ್ಲಿ ಕೆ.ಎಲ್ ರಾಹುಲ್ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಎಂಬ ಸ್ಪಷ್ಟ ಸಂದೇಶವನ್ನ ರವಾನಿಸಿದೆ. ಪಂತ್ ಅಲಭ್ಯತೆಯಲ್ಲಿ ಏಷ್ಯಾಕಪ್ ಹಾಗೂ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್ಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲೂ ವಿಕೆಟ್ ಕೀಪರ್ ಹೊಣೆಗಾರಿಕೆಯನ್ನ ನೀಡಲು ನಿರ್ಧರಿಸಿದಂತಿದೆ.
ಇದನ್ನೂ ಓದಿ: ಗಿಲ್, ಅಯ್ಯರ್, ಪಟೇಲ್ ಬ್ಯಾಟಿಂಗ್ ಅಬ್ಬರ.. ರೋಹಿತ್, ರಾಹುಲ್ ಮತ್ತೆ ದುರ್ಬಲ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್