/newsfirstlive-kannada/media/post_attachments/wp-content/uploads/2024/04/Terrorist.jpg)
ಬೆಂಗಳೂರು: ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಮತ್ತೊಬ್ಬ ಉಗ್ರನ ಬಂಧನವಾಗಿದೆ. ಎನ್ ಐಎ ತನಿಖೆಯಿಂದ ಬಾಂಬ್ ಇಟ್ಟಿದ್ದ ಉಗ್ರನನ್ನು ಅರೆಸ್ಟ್ ಮಾಡಲಾಗಿದೆ. ಮುಸಾಫೀರ್ ಶಾಜೀನ್ ಹುಸೇನ್ ಎಂಬ ಉಗ್ರ ಬಾಂಬ್ ಇಟ್ಟವನು ಎಂದು ತಿಳಿದುಬಂದಿದೆ.
ಮುಸಾಫೀರ್ ಶಾಜೀನ್ ಹುಸೇನ್ನನ್ನು ಉತ್ತರ ಭಾರತದ ರಾಜ್ಯದಲ್ಲಿ ಅರೆಸ್ಟ್ ಮಾಡಲಾಗಿದೆ. ಎನ್ ಐಎ ತಂಡದಿಂದ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಇದನ್ನೂ ಓದಿ: ಹಲವು ಬಾರಿ ಅಬಾರ್ಷನ್.. 2ನೇ ಪತ್ನಿಗೆ ಮಗು ಆಗುತ್ತೆ ಅಂತ ಕೊಲೆಗೈದ ಪಾಪಿ ಪತಿ
ಎಲ್ಲಿ ತಲೆಮರೆಸಿಕೊಂಡಿದ್ದ ಗೊತ್ತಾ?
ಮುಸಾಫೀರ್ ಶಾಜೀನ್ ಹುಸೇನ್ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಕಡೆ ತಲೆಮರೆಸಿಕೊಂಡಿದ್ದನು. ಕೊನೆಗೂ ಆತನನ್ನು ಎನ್ಐಎ ತಂಡ ಬಂಧಿಸಿದೆ. ಉಗ್ರ ಮುಸಾಮೀರ್ ಶಾಜೀನ್ ಹುಸೇನ್ ಜೊತೆ ಮಾಸ್ಟರ್ ಮೈಂಡ್ ಮತೀನಾ ತಾಹಾ ಉಗ್ರನನ್ನು ಕೂಡ ಬಂಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ