ಕೊನೆಗೂ ಭಾರತಕ್ಕೆ ಬಂದ ಮುಂಬೈನಲ್ಲಿ ಮಾರಣಹೋಮ ನಡೆಸಿದ್ದ ಪಾಪಿ! ರಾಣಾ ಮಾಡಿದ ರಕ್ಕಸ ಕೃತ್ಯಗಳೇನು?

author-image
Gopal Kulkarni
Updated On
ಭಾರತಕ್ಕೆ ಕಾಲಿಟ್ಟ 26/11 ಮಾಸ್ಟರ್ ಮೈಂಡ್‌ ತಹವ್ವೂರ್​ ರಾಣಾ NIA ವಶಕ್ಕೆ; ಮುಂದೇನು?
Advertisment
  • ಅಮೆರಿಕಾದಿಂದ ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಮಾಸ್ಟರ್ ಮೈಂಡ್​
  • ತಹವ್ವೂರ್ ರಾಣಾನನ್ನ ಭಾರತಕ್ಕೆ ಕರೆತಂದ ಎನ್​ಐಎ ಮತ್ತು ಐಬಿ ಅಧಿಕಾರಿಗಳು
  • 2008, ನವೆಂಬರ್ 26 ರಂದು ನಡೆದ ಮುಂಬೈ ದಾಳಿಯ ರುವಾರಿ ತಹವ್ವೂರ್ ರಾಣಾ

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವವ್ವೂರ್ ರಾಣಾ ಕೊನೆಗೂ ಭಾರತಕ್ಕೆ ಕರೆತರಲಾಗಿದೆ. 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯ ರೂವಾರಿಯೇ ಈ ತಹವ್ವೂರ್​ ರಾಣಾ. ಭಾರತದ ಮೋಸ್ಟ್ ವಾಂಟೆಡ್​ ಈ ಉಗ್ರ, ಪಾಕಿಸ್ತಾನದಿಂದ ಕೆನಡಾಗೆ ಹೋಗಿ ನೆಲೆಸಿದ್ದ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಅಮೆರಿಕಾ ಆತನನ್ನು ಬಂಧಿಸಿತ್ತು. ಸದ್ಯ ಭಾರತ ಸರ್ಕಾರದ ಮನವಿ ಹಾಗೂ ದ್ವಿಪಕ್ಷೀಯ ಮಾತುಕತೆಗಳ ಫಲವಾಗಿ ಅಮೆರಿಕಾ ರಾಣಾನನ್ನು ಗಡಿಪಾರು ಮಾಡಿದೆ. ಈ ಹಿನ್ನೆಲೆ ಈತನನ್ನು ಭಾರತಕ್ಕೆ ಶಿಫ್ಟ್ ಮಾಡಲಾಗಿದೆ. ಅಮೆರಿಕಾದ ಸುಪ್ರೀಂಕೋರ್ಟ್​ ಅನುಮತಿ ಪಡೆದುಕೊಂಡು ಈ ನೀಚನನ್ನು ಭಾರತಕ್ಕೆ ಎಳೆದುಕೊಂಡು ಬರಲಾಗಿದೆ

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್​ಗಳಲ್ಲಿ ರಾಣಾ ಕೂಡ ಒಬ್ಬ. ಹಫೀಸ್ ಸಯೀದ್​ನ ಲಷ್ಕರ್ ಏ ತೊಯ್ಬಾದ ಉಗ್ರ ಸಂಘಟನೆಯ ಭಯೋತ್ಪಾದಕರಿಗೆ ಭಾರತದತ್ತ ದಾರಿ ತೋರಿದ್ದೇ ಈ ರಾಣಾ. ಈತನು ಕೂಡ ಲಷ್ಕರ್ ಏ ತೊಯ್ಬಾದ ಸಕ್ರಿಯ ಸದಸ್ಯ. ಐಎಸ್​ಐ ಅಧಿಕಾರಿ ಮೇಜರ್ ಇಕ್ಬಾಲ್​ನ ಅತ್ಯಾಪ್ತ ಈ ತಹಾವ್ವುರ್​ ರಾಣಾ. ಕೆನಡಾ ನಾಗರಿಕನಾಗಿರುವ ಈತ ಪಾಕಿಸ್ತಾನದಲ್ಲಿ ತನ್ನ ಭಯೋತ್ಪಾದನಾ ಕಾರ್ಯಗಳನ್ನು ನಡೆಸುತ್ತಿದ್ದ.

publive-image

ಲಷ್ಕರ್ ಏ ತೊಯ್ಬಾದ ಮತ್ತೊಬ್ಬ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಗೆ ಪಾಸ್​​ಪಾರ್ಟ್​ ಒದಗಿಸಿಕೊಟ್ಟಿದ್ದೇ ಈ ರಾಣಾ. ಇದೇ ಪಾಸ್​ಪೋರ್ಟ್ ಬಳಸಿಕೊಂಡು ಹೆಡ್ಲಿ ಭಾರತಕ್ಕೆ ಬಂದು ಹೋಗಿದ್ದ. ಇದೇ ವೇಳೆ ಟಾರ್ಗೆಟ್​​ಗಳನ್ನು ಗುರುತಿಸಿಕೊಂಡು ಹೋಗಿದ್ದ ಹೆಡ್ಲಿ. ರಾಣಾ ಕೂಡ ಮುಂಬೈಗೆ ಬಂದು ಹೋಗಿದ್ದ 2008 ರ ನವೆಂಬರ್ 11 ಮತ್ತು 21 ರ ನಡವೆ ಮುಂಬೈಗೆ ಬಂದು ಹೋಗಿದ್ದ ರಾಣಾ, ಪೋವಾಯ್​ನ ರೈನೈಸಾನ್ಸ್ ಹೋಟೆಲ್​ನಲ್ಲಿ ತಂಗಿದ್ದ ಎಂಬ ಮಾಹಿತಿ ಇದೆ.

ಇದನ್ನೂ ಓದಿ:30 ವರ್ಷ, 3 ಮಕ್ಕಳು.. ಮತಾಂತರಗೊಂಡು PUC ವಿದ್ಯಾರ್ಥಿ ಜೊತೆ ಮದುವೆಯಾದ ಮಹಿಳೆ!

2008 ನವೆಂಬರ್ 26 ರಂದು ಈತ ಟಾರ್ಗೆಟ್​ ಮಾಡಿದ್ದ ಸ್ಥಳಗಳಲ್ಲಿಯೇ 10 ಜನ ಉಗ್ರರು ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಫೋಲ್ಡ್​ ಕೆಫೆ. ನಾರಿಮನ್ ಹೌಸ್​, ಹೋಟೆಲ್ ತಾಜ್​ ಸೇರಿ ಹಲವು ಕಡೆ ಉಗ್ರರು ದಾಳಿ ನಡೆಸಿದ್ದರು. ಈ ಎಲ್ಲಾ ಟಾರ್ಗೆಟ್​​ಗಳನ್ನು ಫಿಕ್ಸ್ ಮಾಡಿದ್ದೇ ರಾಣಾ.

ಇದನ್ನೂ ಓದಿ:ಚೀನಾ ಬಿಟ್ಟು ಉಳಿದ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಡೊನಾಲ್ಡ್​ ಟ್ರಂಪ್.. ಕಾರಣವೇನು?

ಇದು ಮಾತ್ರವಲ್ಲ ಈ ದಾಳಿಯನ್ನು ತಹಾವ್ವೂರ್​ ರಾಣ ಸಮರ್ಥಿಸಿಕೊಂಡಿದ್ದ. ಇದಕ್ಕೆ ಕಾರಣರಾದವರಿಗೆ ಪಾಕ್ ಸೇನೆ ಗೌರವ ಕೊಡಬೇಕು ಎಂದಿದ್ದ. ಇಂತಹ ನರರಾಕ್ಷಸ ಈಗ ಭಾರತದ ಎನ್​ಐಎ ಹಾಗೂ ಇಂಟಲಿಜೆನ್ಸ್ ಬ್ಯುರೊದ ಅಧಿಕಾರಿಗಳೊಂದಿಗೆ ಅಮೆರಿಕಾದಿಂದ ಭಾರತಕ್ಕೆ ಬಂದಿದ್ದಾನೆ. ಈತನ ವಿಚಾರಣೆ ದೆಹಲಿಯ ಕೋರ್ಟ್​ನಲ್ಲಿಯೇ ನಡೆಯಲಿದ್ದು. ತಿಹಾರ್ ಜೈಲಿನಲ್ಲಿ ಈತನನ್ನು ಬಂಧಿಸಿಡಲು ನಿರ್ಧಾರ ಮಾಡಲಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment