/newsfirstlive-kannada/media/post_attachments/wp-content/uploads/2025/04/RANA-TO-INDIA.jpg)
26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವವ್ವೂರ್ ರಾಣಾ ಕೊನೆಗೂ ಭಾರತಕ್ಕೆ ಕರೆತರಲಾಗಿದೆ. 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯ ರೂವಾರಿಯೇ ಈ ತಹವ್ವೂರ್ ರಾಣಾ. ಭಾರತದ ಮೋಸ್ಟ್ ವಾಂಟೆಡ್ ಈ ಉಗ್ರ, ಪಾಕಿಸ್ತಾನದಿಂದ ಕೆನಡಾಗೆ ಹೋಗಿ ನೆಲೆಸಿದ್ದ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಅಮೆರಿಕಾ ಆತನನ್ನು ಬಂಧಿಸಿತ್ತು. ಸದ್ಯ ಭಾರತ ಸರ್ಕಾರದ ಮನವಿ ಹಾಗೂ ದ್ವಿಪಕ್ಷೀಯ ಮಾತುಕತೆಗಳ ಫಲವಾಗಿ ಅಮೆರಿಕಾ ರಾಣಾನನ್ನು ಗಡಿಪಾರು ಮಾಡಿದೆ. ಈ ಹಿನ್ನೆಲೆ ಈತನನ್ನು ಭಾರತಕ್ಕೆ ಶಿಫ್ಟ್ ಮಾಡಲಾಗಿದೆ. ಅಮೆರಿಕಾದ ಸುಪ್ರೀಂಕೋರ್ಟ್ ಅನುಮತಿ ಪಡೆದುಕೊಂಡು ಈ ನೀಚನನ್ನು ಭಾರತಕ್ಕೆ ಎಳೆದುಕೊಂಡು ಬರಲಾಗಿದೆ
26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ಗಳಲ್ಲಿ ರಾಣಾ ಕೂಡ ಒಬ್ಬ. ಹಫೀಸ್ ಸಯೀದ್ನ ಲಷ್ಕರ್ ಏ ತೊಯ್ಬಾದ ಉಗ್ರ ಸಂಘಟನೆಯ ಭಯೋತ್ಪಾದಕರಿಗೆ ಭಾರತದತ್ತ ದಾರಿ ತೋರಿದ್ದೇ ಈ ರಾಣಾ. ಈತನು ಕೂಡ ಲಷ್ಕರ್ ಏ ತೊಯ್ಬಾದ ಸಕ್ರಿಯ ಸದಸ್ಯ. ಐಎಸ್ಐ ಅಧಿಕಾರಿ ಮೇಜರ್ ಇಕ್ಬಾಲ್ನ ಅತ್ಯಾಪ್ತ ಈ ತಹಾವ್ವುರ್ ರಾಣಾ. ಕೆನಡಾ ನಾಗರಿಕನಾಗಿರುವ ಈತ ಪಾಕಿಸ್ತಾನದಲ್ಲಿ ತನ್ನ ಭಯೋತ್ಪಾದನಾ ಕಾರ್ಯಗಳನ್ನು ನಡೆಸುತ್ತಿದ್ದ.
ಲಷ್ಕರ್ ಏ ತೊಯ್ಬಾದ ಮತ್ತೊಬ್ಬ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಗೆ ಪಾಸ್ಪಾರ್ಟ್ ಒದಗಿಸಿಕೊಟ್ಟಿದ್ದೇ ಈ ರಾಣಾ. ಇದೇ ಪಾಸ್ಪೋರ್ಟ್ ಬಳಸಿಕೊಂಡು ಹೆಡ್ಲಿ ಭಾರತಕ್ಕೆ ಬಂದು ಹೋಗಿದ್ದ. ಇದೇ ವೇಳೆ ಟಾರ್ಗೆಟ್ಗಳನ್ನು ಗುರುತಿಸಿಕೊಂಡು ಹೋಗಿದ್ದ ಹೆಡ್ಲಿ. ರಾಣಾ ಕೂಡ ಮುಂಬೈಗೆ ಬಂದು ಹೋಗಿದ್ದ 2008 ರ ನವೆಂಬರ್ 11 ಮತ್ತು 21 ರ ನಡವೆ ಮುಂಬೈಗೆ ಬಂದು ಹೋಗಿದ್ದ ರಾಣಾ, ಪೋವಾಯ್ನ ರೈನೈಸಾನ್ಸ್ ಹೋಟೆಲ್ನಲ್ಲಿ ತಂಗಿದ್ದ ಎಂಬ ಮಾಹಿತಿ ಇದೆ.
ಇದನ್ನೂ ಓದಿ:30 ವರ್ಷ, 3 ಮಕ್ಕಳು.. ಮತಾಂತರಗೊಂಡು PUC ವಿದ್ಯಾರ್ಥಿ ಜೊತೆ ಮದುವೆಯಾದ ಮಹಿಳೆ!
2008 ನವೆಂಬರ್ 26 ರಂದು ಈತ ಟಾರ್ಗೆಟ್ ಮಾಡಿದ್ದ ಸ್ಥಳಗಳಲ್ಲಿಯೇ 10 ಜನ ಉಗ್ರರು ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಫೋಲ್ಡ್ ಕೆಫೆ. ನಾರಿಮನ್ ಹೌಸ್, ಹೋಟೆಲ್ ತಾಜ್ ಸೇರಿ ಹಲವು ಕಡೆ ಉಗ್ರರು ದಾಳಿ ನಡೆಸಿದ್ದರು. ಈ ಎಲ್ಲಾ ಟಾರ್ಗೆಟ್ಗಳನ್ನು ಫಿಕ್ಸ್ ಮಾಡಿದ್ದೇ ರಾಣಾ.
ಇದನ್ನೂ ಓದಿ:ಚೀನಾ ಬಿಟ್ಟು ಉಳಿದ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್.. ಕಾರಣವೇನು?
ಇದು ಮಾತ್ರವಲ್ಲ ಈ ದಾಳಿಯನ್ನು ತಹಾವ್ವೂರ್ ರಾಣ ಸಮರ್ಥಿಸಿಕೊಂಡಿದ್ದ. ಇದಕ್ಕೆ ಕಾರಣರಾದವರಿಗೆ ಪಾಕ್ ಸೇನೆ ಗೌರವ ಕೊಡಬೇಕು ಎಂದಿದ್ದ. ಇಂತಹ ನರರಾಕ್ಷಸ ಈಗ ಭಾರತದ ಎನ್ಐಎ ಹಾಗೂ ಇಂಟಲಿಜೆನ್ಸ್ ಬ್ಯುರೊದ ಅಧಿಕಾರಿಗಳೊಂದಿಗೆ ಅಮೆರಿಕಾದಿಂದ ಭಾರತಕ್ಕೆ ಬಂದಿದ್ದಾನೆ. ಈತನ ವಿಚಾರಣೆ ದೆಹಲಿಯ ಕೋರ್ಟ್ನಲ್ಲಿಯೇ ನಡೆಯಲಿದ್ದು. ತಿಹಾರ್ ಜೈಲಿನಲ್ಲಿ ಈತನನ್ನು ಬಂಧಿಸಿಡಲು ನಿರ್ಧಾರ ಮಾಡಲಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ