/newsfirstlive-kannada/media/post_attachments/wp-content/uploads/2024/04/PUNEETH_SOUNDARYA_JAGADEESH.jpg)
ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆ ಕೇಸ್ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಸೌಂದರ್ಯ ಜಗದೀಶ್ ಸಾವನ್ನಪ್ಪಿದಾಗ ಅವರ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಆ ಡೆತ್ನೋಟ್ನಲ್ಲಿ ಜಗದೀಶ್ ಅವರು ಕೆಲವೇ ಕೆಲವು ಸಾಲುಗಳನ್ನು ಬರೆದಿದ್ದು, ಪೊಲೀಸರ ತನಿಖೆಯಲ್ಲಿ ಸಾವಿನ ಅಸಲಿ ಕಾರಣವೇನು ಅನ್ನೋದು ಬಯಲಾಗಿದೆ.
ಆತ್ಮಹತ್ಯೆಗೂ ಮುನ್ನ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಡೆತ್ನೋಟ್ ಬರೆದಿದ್ದರು. ಅದನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಸೌಂದರ್ಯ ಜಗದೀಶ್ ಅವರು ಡೆತ್ನೋಟ್ನಲ್ಲಿ ತನ್ನ ಬ್ಯುಸಿನೆಸ್ ಲಾಸ್ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಸೌಂದರ್ಯ ಕನ್ಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದರು. ಸೌಂದರ್ಯ ಕನ್ಸ್ಟ್ರಕ್ಷನ್ನ್ಲಿ ನಷ್ಟ ಅನುಭವಿಸಿದ್ದು ಆ ನಷ್ಟಕ್ಕೆ ಪಾಲುದಾರರೇ ಕಾರಣ ಎಂದು ಜಗದೀಶ್ ಅವರು ಉಲ್ಲೇಖ ಮಾಡಿದ್ದಾರೆ.
ಡೆತ್ ನೋಟ್ನಲ್ಲಿ 60 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಡೆತ್ ನೋಟ್ ಆಧರಿಸಿಯೇ ಪತ್ನಿ ಶಶಿರೇಖಾ ಅವರು ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಶಶಿರೇಖಾ ದೂರಿನನ್ವಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಸೌಂದರ್ಯ ಜಗದೀಶ್ ಬ್ಯುಸಿನೆಸ್ ಪಾರ್ಟ್ನರ್ ಆಗಿದ್ದ ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವರ ಮೇಲೆ FIR ದಾಖಲಾಗಿದೆ.
ಇದನ್ನೂ ಓದಿ:ತವರು ಮನೆಗೆ ಹೋದ ಹೆಂಡತಿ ವಾಪಸ್ ಬರಲೇ ಇಲ್ಲ.. ಬಾಮೈದರ ಹೆಸರು ಬರೆದು ಪ್ರಾಣ ಬಿಟ್ಟ ಗಂಡ
ಜಗದೀಶ್ ಕನ್ಸ್ಟ್ರಕ್ಷನ್ ನಷ್ಟಕ್ಕೆ ಪಾಲುದಾರರೇ ಕಾರಣ ಎಂದು ಸೌಂದರ್ಯ ಜಗದೀಶ್ ಅವರು ಡೆತ್ನೋಟಲ್ಲಿ ಉಲ್ಲೇಖ ಮಾಡಿದ್ದಾರೆ. 60 ಕೋಟಿ ರೂಪಾಯಿ ನಷ್ಟದಲ್ಲಿದ್ದು ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಡೆತ್ ನೋಟ್ನಿಂದ ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ