Advertisment

ದೆಹಲಿ ಹೈಕೋರ್ಟ್​ ಜಡ್ಜ್​ ಮನೆಯಲ್ಲಿ ಭಾರೀ ಪ್ರಮಾಣದ ಹಣ ವಶಕ್ಕೆ; ವರ್ಗಾವಣೆಗೊಂಡ ನ್ಯಾಯಮೂರ್ತಿ

author-image
Gopal Kulkarni
Updated On
ದೆಹಲಿ ಹೈಕೋರ್ಟ್​ ಜಡ್ಜ್​ ಮನೆಯಲ್ಲಿ ಭಾರೀ ಪ್ರಮಾಣದ ಹಣ ವಶಕ್ಕೆ; ವರ್ಗಾವಣೆಗೊಂಡ ನ್ಯಾಯಮೂರ್ತಿ
Advertisment
  • ದೆಹಲಿ ಹೈಕೋರ್ಟ್​ ಜಸ್ಟಿಸ್ ಬಂಗಲೆಗೆ ಬೆಂಕಿ ಬಿದ್ದ ಅವಘಡ ಪ್ರಕರಣ
  • ಬೆಂಕಿ ನಂದಿಸಿದ ಅಗ್ನಿ ಶಾಮಕ ದಳದ ಕೈಗೆ ಅಪಾರ ಪ್ರಮಾಣ ಹಣ ಪತ್ತೆ
  • ನ್ಯಾಯಮೂರ್ತಿ ವರ್ಮಾ ಅವರನ್ನು ಪೆರಂಟ್​ ಕೋರ್ಟ್​​ಗೆ ಮತ್ತೆ ವರ್ಗಾವಣೆ

ದೆಹಲಿಯ ಹೈಕೋರ್ಟ್​ ನ್ಯಾಯಮೂರ್ತಿ ಯಶ್ವಂತ್ ವರ್ಮರನ್ನ ಸುಪ್ರೀಂ ಕೋರ್ಟ್​ ಕೊಲಿಜಿಯಂ, ಅವರನ್ನು ಪೆರೇಂಟ್​ ಕೋರ್ಟ್​ಗೆ ವರ್ಗಾವಣೆ ಮಾಡಿದ್ದಾರೆ. ಇತ್ತೀಚೆಗೆ ಅವರ ಮನೆಯಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾದ ಕಾರಣದಿಂದಾಗಿ ಅವರನ್ನು ವಾಪಸ್ ಅಲಹಾಬಾದ್​ನ ಪೇರೆಂಟ್​ ಕೋರ್ಟ್​ಗೆ ವರ್ಗಾವಣೆ ಮಾಡಲಾಗಿದೆ.

Advertisment

ಮೂಲಗಳ ಪ್ರಕಾರ ಇತ್ತೀಚೆಗೆ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸಕ್ಕೆ ಬೆಂಕಿ ಬಿದ್ದಿತ್ತು. ಅವರ ಕುಟುಂಬದವರು ಕೂಡಲೇ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದರು. ಬೆಂಕಿಯನ್ನು ಆರಿಸಿದ ಬಳಿಕ, ಅಗ್ನಿಶಾಮಕ ದಳದ ಸಿಬ್ಬಂದಿ ‘ವರ್ಮಾ ಅವರ ಬಂಗಲೆಯಲ್ಲಿ ಅಪಾರ ಪ್ರಮಾಣದ ನಗದು ಇರುವುದನ್ನು ಪತ್ತೆ ಮಾಡಿದ್ದರು. ಈ ಒಂದು ವಿಷಯ ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡಿತ್ತು.

ಇದನ್ನೂ ಓದಿ:ಮಾತಾಹರಿಯಿಂದ ಮಾಧುರಿ ಗುಪ್ತಾವರೆಗೂ.. ಜಗತ್ತಿನಲ್ಲಿ ಹನಿಟ್ರ್ಯಾಪ್​ಗೆ ಫೇಮಸ್​ ಆದ ಮೋಹಿನಿಯರು ಇವರೇ!

ಈ ಮಾಹಿತಿಯನ್ನು ಪಡೆದ ಸುಪ್ರೀಂ ಕೋರ್ಟ್​ನ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಕೊಲಿಜಿಯಂ ಸಭೆ ಕರೆದು ಸರ್ವಾನುಮತದಿಂದ ಜಸ್ಟಿಸ್ ವರ್ಮಾ ಅವರನ್ನು ಈ ಹಿಂದೆ 2021ರವರೆಗೆ ಸೇವೆ ಸಲ್ಲಿಸುತ್ತಿದ್ದ ಅಲಹಾಬಾದ್ ಹೈಕೋರ್ಟ್​​ಗೆ ಮರಳಿ ವರ್ಗಾವಣೆ ಮಾಡಲು ತೀರ್ಮಾನ ತೆಗೆದುಕೊಂಡು ಆದೇಶ ನೀಡಲಾಗಿದೆ.

Advertisment

ಇದನ್ನೂ ಓದಿ:ವಿಶ್ವದಲ್ಲಿ ಮೊದಲ ಹನಿಟ್ರ್ಯಾಪ್ ನಡೆದಿದ್ದು ಯಾವಾಗ? ‘ಮೊಜ್ನೋ ಗರ್ಲ್ಸ್’​ ಮಾಯಾಜಾಲದ ಬಗ್ಗೆ ನಿಮಗೆ ಗೊತ್ತಾ?

ಇಷ್ಟು ಮಾತ್ರವಲ್ಲ ಜಸ್ಟಿಸ್​ ಯಶ್ವಂತ್ ವರ್ಮಾ ವಿರುದ್ಧ ತನಿಖೆ ಆಗ್ರಹ ಹಾಗೂ ಅವರ ಮೇಲೆ ಮಹಾಭಿಯೋಗ ನಡೆಸುವ ಬಗ್ಗೆಯೂ ಆರಂಭಿಕ ಚರ್ಚೆಗಳು ಕೂಡ ಆರಂಭವಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment