newsfirstkannada.com

ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ.. ಫೈರಿಂಗ್ ಮಾಡಿದ ಇನ್​ಸ್ಪೆಕ್ಟರ್ಸ್​

Share :

Published April 14, 2024 at 12:52pm

    ಕೊಲೆ ಕೇಸ್​ನಲ್ಲಿ ಸಂಬಂಧಿಸಿದಂತೆ ಬಂಧಿಸಲು ಬಂದಿದ್ದ ಪೊಲೀಸ್ರು

    ಒಂದೇ ಕುಟುಂಬದ ನಾಲ್ವರನ್ನು ಅರೆಸ್ಟ್ ಮಾಡುವಾಗ ನಡೆದ ಘಟನೆ

    ಪ್ರಾಣ ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ ಪೊಲೀಸ್ರು

ಕೋಲಾರ: ಅರೆಸ್ಟ್ ಮಾಡುವಾಗ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಕ್ಕೆ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಮಾಲೂರು ತಾಲೂಕಿನ ಸಿಗೊಂಡಹಳ್ಳಿ ಬಳಿ ನಡೆದಿದೆ.

ಆರೋಪಿಗಳಾದ ಪ್ರಮೋದ್ ಮತ್ತು ಅನಿಲ್ ಎನ್ನುವರ ಮೇಲೆ ಫೈರಿಂಗ್ ಮಾಡಲಾಗಿದೆ. ಕೊಲೆ ಕೇಸ್​ವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಇವರನ್ನು ಬಂಧಿಸಲು ಹೋಗಿದ್ದರು. ಆದರೆ ಈ ವೇಳೆ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣ ರಕ್ಷಣೆಗಾಗಿ ಕೋಲಾರದ ಮಾಸ್ತಿ ಇನ್​ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಅವರು ಪ್ರಮೋದ್​ ಮೇಲೆ ಫೈರಿಂಗ್ ಮಾಡಿದ್ರೆ, ಶ್ರೀನಿವಾಸಪುರ ಇನ್​ಸ್ಪೆಕ್ಟರ್ ಗೊರವಿನಕೊಳ್ಳ ಅವರಿಂದ ಅನಿಲ್ ಮೇಲೆ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಮಕ್ಕಳ ಹತ್ಯೆ ಮಾಡಿ ಜೈಲು ಸೇರಿದ್ದ ತಾಯಿ.. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆ**ತ್ಯೆ

ಕೋಲಾರದ ಮಾಲೂರು ತಾಲೂಕಿನ ಟೇಕಲ್​ನಲ್ಲಿ ಲೋಕೇಶ್ ಎಂಬುವರನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳಾದ ತಂದೆ ರಾಜಪ್ಪ, ತಾಯಿ ಜಯಮ್ಮ, ಇಬ್ಬರು ಮಕ್ಕಳಾದ‌ ಪ್ರಮೋದ್, ಅನಿಲ್ ಬಂಧನಕ್ಕೆಂದು ಬಂದಿದ್ದರು. ಇದೇ ವೇಳೆ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಕ್ಕೆ ಪೊಲೀಸರು ಗುಂಡು ಹಾರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನ.. ಫೈರಿಂಗ್ ಮಾಡಿದ ಇನ್​ಸ್ಪೆಕ್ಟರ್ಸ್​

https://newsfirstlive.com/wp-content/uploads/2024/04/KLR_FIRING.jpg

    ಕೊಲೆ ಕೇಸ್​ನಲ್ಲಿ ಸಂಬಂಧಿಸಿದಂತೆ ಬಂಧಿಸಲು ಬಂದಿದ್ದ ಪೊಲೀಸ್ರು

    ಒಂದೇ ಕುಟುಂಬದ ನಾಲ್ವರನ್ನು ಅರೆಸ್ಟ್ ಮಾಡುವಾಗ ನಡೆದ ಘಟನೆ

    ಪ್ರಾಣ ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ ಪೊಲೀಸ್ರು

ಕೋಲಾರ: ಅರೆಸ್ಟ್ ಮಾಡುವಾಗ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಕ್ಕೆ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಮಾಲೂರು ತಾಲೂಕಿನ ಸಿಗೊಂಡಹಳ್ಳಿ ಬಳಿ ನಡೆದಿದೆ.

ಆರೋಪಿಗಳಾದ ಪ್ರಮೋದ್ ಮತ್ತು ಅನಿಲ್ ಎನ್ನುವರ ಮೇಲೆ ಫೈರಿಂಗ್ ಮಾಡಲಾಗಿದೆ. ಕೊಲೆ ಕೇಸ್​ವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಇವರನ್ನು ಬಂಧಿಸಲು ಹೋಗಿದ್ದರು. ಆದರೆ ಈ ವೇಳೆ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣ ರಕ್ಷಣೆಗಾಗಿ ಕೋಲಾರದ ಮಾಸ್ತಿ ಇನ್​ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಅವರು ಪ್ರಮೋದ್​ ಮೇಲೆ ಫೈರಿಂಗ್ ಮಾಡಿದ್ರೆ, ಶ್ರೀನಿವಾಸಪುರ ಇನ್​ಸ್ಪೆಕ್ಟರ್ ಗೊರವಿನಕೊಳ್ಳ ಅವರಿಂದ ಅನಿಲ್ ಮೇಲೆ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಮಕ್ಕಳ ಹತ್ಯೆ ಮಾಡಿ ಜೈಲು ಸೇರಿದ್ದ ತಾಯಿ.. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆ**ತ್ಯೆ

ಕೋಲಾರದ ಮಾಲೂರು ತಾಲೂಕಿನ ಟೇಕಲ್​ನಲ್ಲಿ ಲೋಕೇಶ್ ಎಂಬುವರನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳಾದ ತಂದೆ ರಾಜಪ್ಪ, ತಾಯಿ ಜಯಮ್ಮ, ಇಬ್ಬರು ಮಕ್ಕಳಾದ‌ ಪ್ರಮೋದ್, ಅನಿಲ್ ಬಂಧನಕ್ಕೆಂದು ಬಂದಿದ್ದರು. ಇದೇ ವೇಳೆ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಕ್ಕೆ ಪೊಲೀಸರು ಗುಂಡು ಹಾರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More