/newsfirstlive-kannada/media/post_attachments/wp-content/uploads/2024/10/HDK_SIDDESHWARA.jpg)
ಹಾಸನ: ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರು ಸಿದ್ದೇಶ್ವರಸ್ವಾಮಿಯ ದರ್ಶನ ಪಡೆಯುವಾಗ ಬಲಗಡೆಯಿಂದ ಒಂದಲ್ಲ, ಎರಡಲ್ಲ ಒಟ್ಟು 3 ಹೂಗಳು ಬಿದ್ದಿದ್ದು ಇದು ದೇವರ ಶುಭ ಸೂಚನೆ ಎನ್ನಲಾಗುತ್ತಿದೆ. ಇದರಿಂದ ಹೆಚ್​.ಡಿ ಕುಮಾರಸ್ವಾಮಿ, ಪತ್ನಿ ಅನಿತಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರು ಇಂದು ಕುಟುಂಬ ಸಮೇತರಾಗಿ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಸಿದ್ದೇಶ್ವರಸ್ವಾಮಿ ದರ್ಶನಕ್ಕೆ ಪತ್ನಿ, ಸೊಸೆ, ಮೊಮ್ಮಗನ ಜೊತೆ ಬಂದಿದ್ದರು. ಈ ವೇಳೆ ಹೆಚ್​.ಡಿ ಕುಮಾರಸ್ವಾಮಿ ಅವರು ಗರ್ಭಗುಡಿ ಹೊರಭಾಗದಲ್ಲಿ ನಿಂತು ದೇವರ ದರ್ಶನ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಪೂಜಾರಿ ಪೂಜೆ ಸಲ್ಲಿಸುವಾಗ ಸಿದ್ದೇಶ್ವರ ಸ್ವಾಮಿಯ ಬಲಗಡೆಯಿಂದ 3 ಹೂವುಗಳು ಬಿದಿವೆ. ಇದು ಶುಭ ಸೂಚನೆ ಎನ್ನಲಾಗಿದೆ.
ಇದನ್ನೂ ಓದಿ: Diwali Festival; ದೀಪಾವಳಿಗೆ ಪಟಾಕಿ ಸಿಡಿಸುವಾಗ ಇರಲಿ ಎಚ್ಚರ.. ಈ ತಪ್ಪು ಮಾಡಬೇಡಿ!
/newsfirstlive-kannada/media/post_attachments/wp-content/uploads/2024/10/HDK_SIDDESHWARA_1.jpg)
ದೇವರ ಮೇಲಿಂದ ಹೂವು ಬೀಳುವುದನ್ನ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಕೈ ಸನ್ನೆ ಮಾಡಿ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯ ಬಿಡುವಿಲ್ಲದ ಕೆಲಸ ನಡುವೆ ಕುಟುಂಬ ಸಮೇತರಾಗಿ ಹೆಚ್​.ಡಿ ಕುಮಾರಸ್ವಾಮಿ ಅವರು ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us