Advertisment

ಜನಪದ ಕಲಾವಿದ ಗುರುರಾಜ್​ ಹೊಸಕೋಟೆ ಕಾರು ಅಪಘಾತ.. ಮಹಾಲಿಂಗಪುರಕ್ಕೆ ಹೊರಟಿದ್ದಾಗ ಅವಘಡ

author-image
AS Harshith
Updated On
ಜನಪದ ಕಲಾವಿದ ಗುರುರಾಜ್​ ಹೊಸಕೋಟೆ ಕಾರು ಅಪಘಾತ.. ಮಹಾಲಿಂಗಪುರಕ್ಕೆ ಹೊರಟಿದ್ದಾಗ ಅವಘಡ
Advertisment
  • ಸೋರಗಾವಿಯ ಬಳಿ ಅಪಘಾತಕ್ಕೀಡಾದ ಗುರುರಾಜ್ ಹೊಸಕೋಟೆ ಕಾರು
  • ಎದುರುಗಡೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಸಂಭವಿಸಿದ ಅವಘಡ
  • ನಜ್ಜುಗುಜ್ಜಾದ ಕಾರಿನ ಮುಂಭಾಗ.. ಗುರುರಾಜ್ ಹೊಸಕೋಟೆಗೆ ಏನಾಗಿದೆ?

ಬಾಗಲಕೋಟೆ: ಜನಪದ ಕಲಾವಿದ, ಚಿತ್ರನಟ ಗುರುರಾಜ್ ಹೊಸಕೋಟೆ ಕಾರು ಅಪಘಾತವಾಗಿದೆ. ಎದುರುಗಡೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಕಾರು ಅಪಘಾತದಲ್ಲಿ ಗುರುರಾಜ್ ಪಾರಾಗಿದ್ದಾರೆ.

Advertisment

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೋರಗಾವಿಯ ಬಳಿ ಅಪಘಾತವಾಗಿದೆ. ಸಿಂಧನೂರಿನಿಂದ ಮಹಾಲಿಂಗಪುರಕ್ಕೆ ಹೊರಟಿದ್ದಾಗ ಅಪಘಾತವಾಗಿದೆ. ಜನಪದ ಕಲಾವಿದ ಗುರುರಾಜ್ ಹೊಸಕೋಟೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಮಂಗಳೂರಿಗೂ ತಟ್ಟಿದ ಮಧ್ಯ ಪ್ರಾಚ್ಯ ಉದ್ವಿಗ್ನತೆ! ‘ಇಸ್ರೇಲ್​ ಟ್ರಾವೆಲ್ಸ್​’ನ ಹೆಸರು ಬದಲಾಯಿಸಿದ ಬಸ್​ ಮಾಲೀಕ

publive-image

ಗುರುರಾಜ್​ ಹೊಸಕೋಟೆ ಜನಪದ ಸಮೂಹ ಗೀತೆಗಳನ್ನು ರಚಿಸಿ ಹಾಡುತ್ತಾರೆ. ಜೊತೆಗೆ ನೃತ್ಯವನ್ನು ಸಂಯೋಜನೆ ಮಾಡುತ್ತಾರೆ. ಅವರ ಹಾಡುಗಾರಿಕೆಯಿಂದಲೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇದಲ್ಲದೆ ಅನೇಕ ಸಿನಿಮಾಗಳಲ್ಲೂ ಹಾಡಿದ್ದಾರೆ. ಕರಿಯ, ದಾಸ, ಜೋಗಿ, ಅಂಬಿ ಹೀಗೆ ಅನೇಕ ಸಿನಿಮಾಗಳಿಗೆ ಹಾಡಿನ ಮೂಲಕ ಧ್ವನಿ ನೀಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment