ಋತುರಾಜ್ ಗಾಯಕ್ವಾಡ್ ಬದಲಿಗೆ ಸಿಎಸ್​​ಕೆಗೆ ಸ್ಫೋಟಕ ಬ್ಯಾಟರ್ ಎಂಟ್ರಿ..

author-image
Ganesh
Updated On
ಋತುರಾಜ್ ಗಾಯಕ್ವಾಡ್ ಬದಲಿಗೆ ಸಿಎಸ್​​ಕೆಗೆ ಸ್ಫೋಟಕ ಬ್ಯಾಟರ್ ಎಂಟ್ರಿ..
Advertisment
  • ಗಾಯ ಹಿನ್ನೆಲೆಯಲ್ಲಿ ಐಪಿಎಲ್​​ನಿಂದ ಗಾಯಕ್ವಾಡ್ ಔಟ್
  • ಬದಲಿ ಆಟಗಾರನ ಹುಡುಕಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್
  • ಪವರ್ ಪ್ಲೇ ಸ್ಪೆಷಲಿಸ್ಟ್​ ಮೇಲೆ ಕಣ್ಣಿಟ್ಟಿರುವ ಸಿಎಸ್​​ಕೆ

ಸೋಲಿನ ಮೇಲೆ ಸೋಲು ಕಾಣುತ್ತಿರುವ ಸಿಎಸ್​​ಕೆಗೆ ಸ್ಫೋಟಕ ಬ್ಯಾಟರ್​ ಎಂಟ್ರಿ ಸಾಧ್ಯತೆ ದಟ್ಟವಾಗಿದೆ. ಋತುರಾಜ್ ಗಾಯಕ್ವಾಡ್ ಗಾಯಗೊಂಡು ಐಪಿಎಲ್-2025 ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಹಾಗಾಗಿ ಸಿಎಸ್​​ಕೆ ಫ್ರಾಂಚೈಸಿಯು ಗಾಯಕ್ವಾಡ್ ಬದಲಿಗೆ ಹೊಸ ಆಟಗಾರನ ಹುಡುಕಾಟದಲ್ಲಿದೆ.

ಮಾಹಿತಿ ಪ್ರಕಾರ, ಟೀಂ ಇಂಡಿಯಾದ ಒಂದು ಕಾಲದ ಸ್ಫೋಟಕ ಬ್ಯಾಟ್ಸಮನ್ ಪೃಥ್ವಿ ಶಾ ಅವರನ್ನು ಕರೆದುಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸಿಎಸ್​​ಕೆಯಲ್ಲಿ ರಚಿನ್ ರವೀಂದ್ರ ಹಾಗೂ ಕಾನ್ವೆ ಆರಂಭಿಕ ಬ್ಯಾಟರ್​​ ಆಗಿದ್ದಾರೆ. ಇಬ್ಬರೂ ಪವರ್​ ಪ್ಲೇನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಪವರ್​ ಪ್ಲೇ ಸ್ಪೆಷಲಿಸ್ಟ್ ಆಗಿರುವ ಪೃಥ್ವಿ ಶಾರನ್ನು ತಂಡಕ್ಕೆ ಸೇರಿಸಿಕೊಂಡು, ಸ್ಟ್ರಾಂಗ್ ಕಂಬ್ಯಾಕ್ ಮಾಡಲು ಚೆನ್ನೈ ಸೂಪರ್ ಕಿಂಕ್ಸ್​ ಪ್ಲಾನ್​ ಮಾಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಬ್ಯಾಕ್​ ಟು ಬ್ಯಾಕ್ ಸೋಲು.. ಕೊನೆಗೂ ಕಾರಣ ರಿವೀಲ್..!

publive-image

ಪೃಥ್ವಿ ಶಾ ಈ ಬಾರಿಯ ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಪರ 7 ಸೀಸನ್ ಆಡಿವ ಪೃಥ್ವಿ ಶಾ, 79 ಇನ್ನಿಂಗ್ಸ್​ ಆಡಿದ್ದಾರೆ. 23.94 ಸರಾಸರಿಯಲ್ಲಿ 1892 ರನ್​ಗಳಿಸಿದ್ದಾರೆ. 14 ಅರ್ಧ ಶತಕ ಇದರಲ್ಲಿ ಸೇರಿದೆ. ಇವರು ಅಗ್ರೆಸಿವ್ ಪವರ್​ಪ್ಲೇ ಸ್ಪೆಷಲಿಸ್ಟ್ ಆಗಿದ್ದಾರೆ. ಐಪಿಎಲ್​ ಕರಿಯರ್​ನಲ್ಲಿ 147.46 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. 2021ರ ಐಪಿಎಲ್​​ನಲ್ಲಿ ಅವರು ಸ್ಫೋಟಕ ಬ್ಯಾಟಿಂಗ್ ಆಡಿದರು. 15 ಇನ್ನಿಂಗ್ಸ್​​ನಲ್ಲಿ 31.93 ಸರಾಸರಿಯಲ್ಲಿ 479 ರನ್​ಗಳಿಸಿದ್ದರು. ಮಾತ್ರವಲ್ಲ, ನಾಲ್ಕು ಅರ್ಧಶತಕ ಕೂಡ ಬಾರಿಸಿದ್ದರು.

ಇನ್ನು, ಗಾಯಕ್ವಾಡ್​ ಅನುಪಸ್ಥಿತಿಯಲ್ಲಿ ಎಂಎಸ್​ ಧೋನಿ ಸಿಎಸ್​ಕೆ ತಂಡವನ್ನು ಮುನ್ನಡೆಸ್ತಿದ್ದಾರೆ. ಧೋನಿ ನೇತೃತ್ವದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್​ ವಿರುದ್ಧ ಹೀನಾಯವಾಗಿ ಸೋತಿದೆ. ಕೆಕೆಆರ್​ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಸಿಎಸ್​ಕೆ ಸತತ ಐದನೇ ಪಂದ್ಯ ಸೋತಿದೆ.

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಕಾರ್ತಿಕ್ ಆಕ್ರೋಶ.. RCB ಕೋಚ್​​ನಿಂದ ಬ್ಲೇಮ್ ಗೇಮ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment