/newsfirstlive-kannada/media/post_attachments/wp-content/uploads/2025/04/DG-IGP-Om-prakash.jpg)
ನಿವೃತ್ತ ಐಪಿಎಸ್ ಓಂ ಪ್ರಕಾಶ್ ಬರ್ಬರ ಕೊಲೆಯಾಗಿದ್ದಾರೆ. ತಮ್ಮದೇ ಪತ್ನಿಯಿಂದ ಹತ್ಯೆಯಾದ ಶಂಕೆ ಮೂಡಿದೆ.. ಮಾನಸಿಕ ಸ್ಥಿಮಿತ ಕಳೆದುಕೊಂಡಿರೋ ಪಲ್ಲವಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಣ್ಣು-ಹೊನ್ನು-ಮಣ್ಣಿನ ವಿಚಾರಕ್ಕೆ ಮರ್ಡರ್ ಶಂಕೆ!
ಓಂ ಪ್ರಕಾಶ್.. ಖಡಕ್ ಐಪಿಎಸ್ ಅಧಿಕಾರಿ.. ರಾಜ್ಯದ 38ನೇ ಡಿಜಿ ಐಜಿಪಿ ಆಗಿ ನಿವೃತ್ತ ಜೀವನ ಕಳೀತಿದ್ರು. ನಿವೃತ್ತ ಜೀವನ ಅಂದ್ರೆ, ಬದುಕಿನ ಬಂಗಾರದ ಕಾಲ.. ಆದ್ರೆ, ಓಂ ಪ್ರಕಾಶ್ ಅವರ ಕೊನೆ ದಿನಗಳು ಬದುಕಿನ ಬಾಣಗಳ ಮರಣ ಶಯ್ಯದಲ್ಲಿ ಹೊರಳಾಡ್ತಿತ್ತು.. ಜೀವನ ಪೂರ್ತಿ ಅದೆಷ್ಟು ಮರ್ಡರ್ಗಳ ರಹಸ್ಯ ಬೇಧಿಸಿದ್ದ ಓಂ ಪ್ರಕಾಶ್, ತಾವೇ ರಹಸ್ಯವಾಗಿ ತಮ್ಮದೇ ನಿವಾಸದಲ್ಲಿ ಬರ್ಬರ ರೀತಿಯಲ್ಲಿ ಹತ್ಯೆಯಾಗಿದ್ದಾರೆ..
ಇದನ್ನೂ ಓದಿ: ಹೊಸ ಬಣ್ಣ ಕಂಡು ಹಿಡಿದ ವಿಜ್ಞಾನಿಗಳು; ಜಗತ್ತಿನಲ್ಲೇ ಇದನ್ನ ನೋಡಿರೋದೋ 5 ಮಂದಿ ಮಾತ್ರ!
ಪಲ್ಲವಿಯನ್ನ ವಶಕ್ಕೆ ಪಡೆದು ಮನೆಯಲ್ಲೇ ಪೊಲೀಸರ ವಿಚಾರಣೆ!
ಅನುರಾಗ ಅರಳಿದ ಸಮಯದಲ್ಲಿ ಓಂ ಪ್ರಕಾಶ್ರಿಗೆ ಸಿಕ್ಕಿದ್ದೆ ಪಲ್ಲವಿ.. ಆದ್ರೆ, ಜೀವನ ಸಂಗಾತಿ, ಜೀವಕ್ಕೆ ಎರವಾಗ್ತಾಳೆ ಅನ್ನೋ ಸಂಗತಿ, ಕ್ರೈಂ ಜಗತ್ತಿನ ದಿ ಬೆಸ್ಟ್ ಆಫೀಸರ್ ಓಂ ಪ್ರಕಾಶ್ರಿಗೆ ಹೊಳೆಯದೇ ಹೋಗಿದ್ದು ಕಾಲಗರ್ಭದ ದುರಂತ.. ಅದ್ಯಾವುದೋ ಹೆಣ್ಣಿನ ಮಾಯೆ.. ಒಡಹುಟ್ಟಿದವರಿಗೆ ಮಣ್ಣು ಹಂಚಿದ್ರು ಅನ್ನೋ ಕಾರಣಕ್ಕೆ ಓಂ ಪ್ರಕಾಶ್ ಕೊನೆ ದಿನಗಳನ್ನ ಎಣಿಸಿದ್ರಾ ಅನ್ನೋ ಸಂಶಯಗಳು ಹೊರಳಾಡ್ತಿವೆ.. ಅಜಾನುಬಾಹು ದೇಹದ 8 ರಿಂದ 10 ಭಾಗದಲ್ಲಿ ಹರಿದ ಹರಿತ ಚಾಕು, ಉಸಿರು ನಿಲ್ಸಿದೆ..
ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್ ಹತ್ಯೆ
ಎಂಟರಿಂದ ಹತ್ತು ಬಾರಿ ಓಂ ಪ್ರಕಾಶ್ಗೆ ಇರಿದು ಕೊಲೆ ಮಾಡಿದ್ದು ಗೊತ್ತಾಗಿದೆ. ಓಂ ಪ್ರಕಾಶ್ ಎದೆ, ಹೊಟ್ಟೆ, ಕೈ ಭಾಗಕ್ಕೆ ಇರಿದ ಗುರುತುಗಳಿವೆ.. ಮನೆಯಲ್ಲಿದ್ದ ಚಾಕುವನ್ನು ಪೊಲೀಸರು ಸಹ ವಶಕ್ಕೆ ಪಡೆದಿದ್ದಾರೆ.. ಮೋಸ್ಟ್ಲೀ ಚಾಕುವಿನಿಂದ ಪಲ್ಲವಿಯೇ ಇರಿದು ಕೊಲೆ ಮಾಡಿದ ಶಂಕೆ ಇದೆ.. ಓಂ ಪ್ರಕಾಶ್ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಎಫ್ಎಸ್ಎಲ್ ತಂಡ, ಕ್ರೈಂ ಸೀನ್ನಲ್ಲಿ ಸಾಕ್ಷಿ ಸಂಗ್ರಹಿಸಿ ತೆರಳಿದೆ.. ಕೊಲೆ ಸ್ಥಳದಲ್ಲಿ ಸಿಕ್ಕಿ ಎಲ್ಲಾ ವಸ್ತುಗಳನ್ನ ಶೇಖರಿಸಿದೆ.. ಕ್ರೈಂ ಸೀನ್ನಲ್ಲಿ ಸಿಕ್ಕಿರುವ ರಕ್ತದ ಸ್ಯಾಂಪಲ್, ಕೂದಲು ಸೇರಿ ಪ್ರತಿಯೊಂದನ್ನ ಸಂಗ್ರಹಿಸಲಾಗಿದೆ.. ಸಂಗ್ರಹಿಸಿರುವ ಎಲ್ಲಾ ಸ್ಯಾಂಪಲ್ ವರದಿಯನ್ನ ಪೊಲೀಸರಿಗೆ ನೀಡಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಮಳೆ.. ರಾಜ್ಯದ ಹಲವೆಡೆ ವರುಣನ ಅಬ್ಬರ; ಹವಾಮಾನ ಇಲಾಖೆ ಎಚ್ಚರಿಕೆ ಏನು?
ಮಧ್ಯಾಹ್ನ ಸುಮಾರು 4:30ಕ್ಕೆ 112ಗೆ ಕರೆ ಬಂದಿದೆ.. ಆಗ ಕೊಲೆ ಆಗಿರೋದು ಗೊತ್ತಾಗಿದೆ.. ಈ ವೇಳೆ ಮನೆಯಲ್ಲಿ ಮೂವರು ಇದ್ರು.. ಮಗನಿಂದಲೂ ಮಾಹಿತಿ ಪಡೆಯಲಾಗಿದೆ.. ಕೊಲೆಗೆ ಶಾರ್ಪ್ ವೆಪನ್ ಬಳಕೆ ಆಗಿದೆ.. ಯಾವ ಕಾರಣಕ್ಕೆ ಕೊಲೆ ಅನ್ನೋದು ತನಿಖೆ ಬಳಿಕ ಗೊತ್ತಾಗಲಿದೆ ಅಂತ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹೇಳಿದ್ದಾರೆ.
ಮೊದಲ ಫ್ಲೋರ್ನಲ್ಲಿ ಓಂ ಪ್ರಕಾಶ್ ಮಗ ಮತ್ತು ಸೊಸೆ ಇದ್ದಾರೆ. ಹತ್ಯೆ ನಡೆದ ಮನೆಯ ಗ್ರೌಂಡ್ಫ್ಲೋರ್ನಲ್ಲಿನ ಸಾಕ್ಷಿಗಳನ್ನ ರಕ್ಷಿಸುವ ನಿಟ್ಟಿನಲ್ಲಿ ಪೊಲೀಸರು ಸೀಜ್ ಮಾಡಿದ್ದಾರೆ.. ಒಟ್ಟಾರೆ, ಓಂ ಪ್ರಕಾಶ್ ಅವರ ಬರ್ಬರ ಹತ್ಯೆ ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ಪತ್ನಿಯಿಂದಲೇ ನಿವೃತ್ತ DG-IGP ಓಂ ಪ್ರಕಾಶ್ ಜೀವ ತೆಗೆದ ಭಯಾನಕ ಕೃತ್ಯ; ಅಸಲಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ