Advertisment

ಕನ್ನಡ ಚಿತ್ರರಂಗಕ್ಕೆ ದರ್ಶನ್ ಪ್ರಕರಣ ಕಪ್ಪು ಚುಕ್ಕೆ; ಮಾಜಿ ಶಾಸಕ ಕುಮಾರ ಬಂಗಾರಪ್ಪ

author-image
AS Harshith
Updated On
ಕನ್ನಡ ಚಿತ್ರರಂಗಕ್ಕೆ ದರ್ಶನ್ ಪ್ರಕರಣ ಕಪ್ಪು ಚುಕ್ಕೆ; ಮಾಜಿ ಶಾಸಕ ಕುಮಾರ ಬಂಗಾರಪ್ಪ
Advertisment
  • ಇದೊಂದು ಹೀನ ಕೃತ್ಯ ಎಂದ ಮಾಜಿ ಶಾಸಕ ಕುಮಾರ ಬಂಗಾರಪ್ಪ
  • ಅಭಿಮಾನಿಗಳ ಮೇಲೆ ಈ ರೀತಿಯ ಅಕ್ರಮಣಗಳನ್ನು ಮಾಡಬಾರದು
  • ರಾಜಕುಮಾರ್ ನೋಡಿ ಕನ್ನಡ ಚಿತ್ರರಂಗ ,ದಕ್ಷಿಣ ಭಾರತದ ಚಿತ್ರರಂಗ ಬೆಳೆದಿದೆ

ಅಭಿಮಾನಿ ದೇವರುಗಳು ಎಂದ ಕನ್ನಡ ಚಿತ್ರರಂಗಕ್ಕೆ ದರ್ಶನ್ ಪ್ರಕರಣ ಕಪ್ಪು ಚುಕ್ಕೆ ತರಹ. ಇದೊಂದು ಹೀನ ಕೃತ್ಯ ಎಂದು ಶಿವಮೊಗ್ಗದಲ್ಲಿ ಮಾಜಿ ಶಾಸಕ ಕುಮಾರ ಬಂಗಾರಪ್ಪ ರಿಯ್ಯಾಕ್ಟ್ ಮಾಡಿದ್ದಾರೆ.

Advertisment

ಇದನ್ನೂ ಓದಿ: ದರ್ಶನ್ ಮತ್ತು ಗ್ಯಾಂಗ್ ವಿರುದ್ದ ಸದ್ಯ ಸಿಕ್ಕಿರುವ ಎವಿಡೆನ್ಸ್​ಗಳಿಷ್ಟು! ಇದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ

ಕನ್ನಡ ಚಿತ್ರರಂಗವನ್ನು ಉಳಿಸಿಕೊಂಡು ಹೋಗುವುದೇ ಕಷ್ಟಕರವಾದ ಪರಿಸ್ಥಿತಿಯಲ್ಲಿ ಇಂತಹ ಘಟನೆಗಳು ನಡೆಯಬಾರದು. ರಾಜಕುಮಾರ್ ನೋಡಿ ಕನ್ನಡ ಚಿತ್ರರಂಗ ,ದಕ್ಷಿಣ ಭಾರತದ ಚಿತ್ರರಂಗ ಬೆಳೆದಿದೆ. ಕನ್ನಡಕ್ಕಾಗಿ ಕಾವೇರಿಗಾಗಿ ನೆಲ,ಜಲ, ಭಾಷೆಗಾಗಿ ಅಭಿಮಾನಿಗಳನ್ನ ಹೋರಾಟಕ್ಕೆ ಇಳಿಸಿದ್ದ ಸಂದರ್ಭ ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಡಿಗೆ ಅಂತ ಹೋದವನು ಕೊಲೆ ಕೇಸ್‌ನಲ್ಲಿ ಲಾಕ್! ದರ್ಶನ್​ ಮಾಡಿದ ಕಿತಾಪತಿಗೆ ಕಾರ್​ ಡ್ರೈವರ್​ಗೆ ಸಂಕಷ್ಟ

Advertisment

ಬಳಿಕ, ಅಭಿಮಾನಿಗಳ ಮೇಲೆ ಈ ರೀತಿಯ ಅಕ್ರಮ ಮತ್ತು ಅಕ್ರಮಣಗಳನ್ನು ಮಾಡಬಾರದು. ಇದೊಂದು ಅಕ್ಷಮ್ಯ ಅಪರಾಧ.. ದರ್ಶನ್ ಈ ಪ್ರಕರಣದಲ್ಲಿ ಪೋಲಿಸ್ ಇಲಾಖೆ, ಚಿತ್ರರಂಗ, ಅದಕ್ಕೊಂದು ವ್ಯವಸ್ಥೆ ಇದೆ ಇದನ್ನೆಲ್ಲವನ್ನು ಬಳಕೆ ಮಾಡಬೇಕಿತ್ತು. ಚಿತ್ರರಂಗದವರು ಜನರಿಂದನೇ ಕೂಗಿಸಿಕೊಳ್ಳುವ ಕೆಳಮಟ್ಟಕ್ಕೆ ಹೋದರೆ ಹೇಗೆ? ಎಂದು ಮಾಜಿ ಶಾಸಕ ಕುಮಾರ ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment