ಕೊಹ್ಲಿಗೆ ಪಾಕ್ ಮಾಜಿ ಆಟಗಾರನಿಂದ ಬಂತು ಆಹ್ವಾನ
ಪಾಕ್ ಸೂಪರ್ ಲೀಗ್ನಲ್ಲಿ ಭಾಗವಹಿಸಿ ಎಂದು ಮನವಿ
ಭಾರತ ಸರ್ಕಾರಕ್ಕೂ ಮನವಿ ಮಾಡಿದ ಮಾಜಿ ಪ್ಲೇಯರ್
ಇತ್ತೀಚೆಗೆ ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಪಾಕ್ ಪರ್ವತಾರೋಹಿ ಶೆಹ್ರೋಜ್ ಕಾಶಿಫ್ ವಿಡಿಯೋ ಕರೆಯಲ್ಲಿ ಭೇಟಿ ಮಾಡಿದ್ದರು. ಸಂಭಾಷಣೆ ವೇಳೆ ಕೊಹ್ಲಿ ‘ನಾನು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ’ ಎಂದು ಹೇಳಿದ್ದರು. ಇದಕ್ಕೆ ಅನೇಕ ಪಾಕ್ ಅಭಿಮಾನಿಗಳು ಬೆಂಬಲ ಸೂಚಿದರು. ಆದರೀಗ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರೀದಿ ಕಿಂಗ್ ಕೊಹ್ಲಿಯನ್ನ ಬರಮಾಡಿಕೊಂಡಿದ್ದಾರೆ. ಜೊತೆಗೆ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಆಡುವಂತೆ ಕೇಳಿಕೊಂಡಿದ್ದಾರೆ.
ಶಾಹಿದ್ ಅಫ್ರೀದಿಯವರು ಕೊಹ್ಲಿ ಹೇಳಿಕೆಗೆ ಪಾಕ್ ಸೂಪರ್ ಲೀಗ್ನಲ್ಲಿ ಆಡುವಂತೆ ಕೇಳಿದ್ದಲ್ಲದೆ, ಅವಕಾಶ ನೀಡುವಂತೆ ಭಾರತ ಸರ್ಕಾರಕ್ಕೆ ಮನವಿಯನ್ನು ಮಾಡಿದ್ದಾರೆ.
ಇದನ್ನೂ ಓದಿ: ಧೋನಿ ನಿವೃತ್ತಿ ಬಳಿಕ CSK ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತೆ; ಭವಿಷ್ಯ ನುಡಿದ ಟೀಂ ಇಂಡಿಯಾದ ಮಾಜಿ ಆಟಗಾರ
ಇದಕ್ಕೂ ಮುನ್ನ ರೋಹಿತ್ ಶರ್ಮಾ ಕೂಡ ತಮ್ಮ ಬಯಸಕೆಯನ್ನು ತೋರ್ಪಡಿಸಿದ್ದರು. ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಆಡುವುದನ್ನು ವ್ಯಕ್ತಪಡಿಸಿದ್ದರು.
ಪಾಕ್-ಭಾರತ ಕ್ರಿಕೆಟ್ ಸಂಬಂಧ
ಭಾರತ ತಂಡ 2008ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿತು. ಅದೇ ವರ್ಷ ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಆ ಬಳಿಕ ಕ್ರಿಕೆಟ್ ಸಂಬಂಧ ಹದಗೆಟ್ಟಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕೊಹ್ಲಿಗೆ ಪಾಕ್ ಮಾಜಿ ಆಟಗಾರನಿಂದ ಬಂತು ಆಹ್ವಾನ
ಪಾಕ್ ಸೂಪರ್ ಲೀಗ್ನಲ್ಲಿ ಭಾಗವಹಿಸಿ ಎಂದು ಮನವಿ
ಭಾರತ ಸರ್ಕಾರಕ್ಕೂ ಮನವಿ ಮಾಡಿದ ಮಾಜಿ ಪ್ಲೇಯರ್
ಇತ್ತೀಚೆಗೆ ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಪಾಕ್ ಪರ್ವತಾರೋಹಿ ಶೆಹ್ರೋಜ್ ಕಾಶಿಫ್ ವಿಡಿಯೋ ಕರೆಯಲ್ಲಿ ಭೇಟಿ ಮಾಡಿದ್ದರು. ಸಂಭಾಷಣೆ ವೇಳೆ ಕೊಹ್ಲಿ ‘ನಾನು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ’ ಎಂದು ಹೇಳಿದ್ದರು. ಇದಕ್ಕೆ ಅನೇಕ ಪಾಕ್ ಅಭಿಮಾನಿಗಳು ಬೆಂಬಲ ಸೂಚಿದರು. ಆದರೀಗ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರೀದಿ ಕಿಂಗ್ ಕೊಹ್ಲಿಯನ್ನ ಬರಮಾಡಿಕೊಂಡಿದ್ದಾರೆ. ಜೊತೆಗೆ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಆಡುವಂತೆ ಕೇಳಿಕೊಂಡಿದ್ದಾರೆ.
ಶಾಹಿದ್ ಅಫ್ರೀದಿಯವರು ಕೊಹ್ಲಿ ಹೇಳಿಕೆಗೆ ಪಾಕ್ ಸೂಪರ್ ಲೀಗ್ನಲ್ಲಿ ಆಡುವಂತೆ ಕೇಳಿದ್ದಲ್ಲದೆ, ಅವಕಾಶ ನೀಡುವಂತೆ ಭಾರತ ಸರ್ಕಾರಕ್ಕೆ ಮನವಿಯನ್ನು ಮಾಡಿದ್ದಾರೆ.
ಇದನ್ನೂ ಓದಿ: ಧೋನಿ ನಿವೃತ್ತಿ ಬಳಿಕ CSK ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುತ್ತೆ; ಭವಿಷ್ಯ ನುಡಿದ ಟೀಂ ಇಂಡಿಯಾದ ಮಾಜಿ ಆಟಗಾರ
ಇದಕ್ಕೂ ಮುನ್ನ ರೋಹಿತ್ ಶರ್ಮಾ ಕೂಡ ತಮ್ಮ ಬಯಸಕೆಯನ್ನು ತೋರ್ಪಡಿಸಿದ್ದರು. ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಆಡುವುದನ್ನು ವ್ಯಕ್ತಪಡಿಸಿದ್ದರು.
ಪಾಕ್-ಭಾರತ ಕ್ರಿಕೆಟ್ ಸಂಬಂಧ
ಭಾರತ ತಂಡ 2008ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿತು. ಅದೇ ವರ್ಷ ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಆ ಬಳಿಕ ಕ್ರಿಕೆಟ್ ಸಂಬಂಧ ಹದಗೆಟ್ಟಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ