/newsfirstlive-kannada/media/post_attachments/wp-content/uploads/2025/06/MYS_HOLIGE_RCB.jpg)
ಮೈಸೂರು: ಸತತ 18 ವರ್ಷಗಳ ಕನಸು ಈಡೇರಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೇವಲ ಒಂದೇ ಒಂದು ಹೆಜ್ಜೆ ಬಾಕಿ ಇದೆ. ನಾಳೆ ಅಂದರೆ ಜೂನ್ 1 ರಂದು ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ನಲ್ಲಿ ಬಿಗ್ ಫೈಟ್ ನಡೆಯಲಿದೆ. ಆರ್ಸಿಬಿ ಫೈನಲ್ ಪಂದ್ಯ ಗೆದ್ದರೇ ಉಚಿತ ಹೋಳಿಗೆ ಊಟ ಹಾಕಿಸಲಾಗುವುದು ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ಮೈಸೂರಿನ ಆರ್ಸಿಬಿಯ ಅಪ್ಪಟ ಅಭಿಮಾನಿ ಆಗಿರುವ ಬಸವರಾಜ ಬಸಪ್ಪ ಅವರು ತಂಡ ಕ್ವಾಲಿಫೈಯರ್-1 ರಲ್ಲಿ ಗೆದ್ದು ಫೈನಲ್ಗೆ ಹೋಗಿದ್ದಕ್ಕೆ ಈಗಾಗಲೇ ಗನ್ ಹೌಸ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಹೋಳಿಗೆ ಊಟ ಹಾಕಿಸಿದ್ದಾರೆ. ಫೈನಲ್ ಪಂದ್ಯಕ್ಕೂ ಒಂದು ದಿನ ಮೊದಲು ಸಾಂಕೇತಿಕವಾಗಿ ಇವತ್ತೇ ಉಚಿತ ಹೋಳಿಗೆ ಊಟ ವಿತರಿಸಿದ್ದಾರೆ.
ನಾಳೆ ಫೈನಲ್ನಲ್ಲಿ ಆರ್ಸಿಬಿ ಭರ್ಜರಿ ಗೆಲುವು ಪಡೆದು ಟ್ರೋಫಿ ಎತ್ತಿ ಹಿಡಿದರೆ ಮೈಸೂರಿನ ಎಲ್ಲಾ 16 ಇಂದಿರಾ ಕ್ಯಾಂಟೀನ್ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ರಿಂಕು ಸಿಂಗ್, MP ಪ್ರಿಯಾ ಸರೋಜ್ ಮದುವೆ ಯಾವಾಗ.. ಇಬ್ಬರು ಪರಿಚಯ ಆಗಿದ್ದು ಹೇಗೆ?
ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲೂ ಇದೇ ರೀತಿ ಊಟ ಹಾಕಿಸಲಿ. ಗೆದ್ದ ಸಂಭ್ರಮದಲ್ಲಿ ಎಲ್ಲರೂ ಸಿಹಿ ಊಟ ಸವಿಯಲಿ. ಗೆಲುವಿನ ಸಂಭ್ರಮ ಹಂಚಿಕೊಳ್ಳಲಿ ಅಂತ ಬಸವರಾಜ ಬಸಪ್ಪ ಸೇರಿದಂತೆ ಆರ್ಸಿಬಿ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ