Advertisment

ದರ್ಶನ್​​ ಭೇಟಿಗೆ ಸ್ನೇಹಿತರು, ಸೆಲೆಬ್ರಿಟಿಗಳಿಗೆ ಅವಕಾಶವಿಲ್ಲ; ಡಿಐಜಿ ಟಿಪಿ ಶೇಷಾ

author-image
AS Harshith
Updated On
ದರ್ಶನ್ ಬಾಯಲ್ಲಿ ಈಗ 10 ಪಶ್ಚಾತಾಪದ ಮಾತು.. ಪತ್ನಿ ವಿಜಯಲಕ್ಷ್ಮಿ ನೆನೆದು ಭಾವುಕ; ಹೇಳಿದ್ದೇನು?
Advertisment
  • ದರ್ಶನ್​ ಬಳ್ಳಾರಿ ಜೈಲಿಗೆ ಸೇರಿ ಇಂದಿಗೆ ಮೂರು ದಿನ
  • ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಇದ್ದಾರೆ ಕೈದಿ ನಂಬರ್-​ 511
  • ದರ್ಶನ್ ಸೆಲ್ ಮುಂದೆ 3 ಸಿಸಿಟಿವಿ ಕ್ಯಾಮೆರಾಗಳಿವೆ

ದರ್ಶನ್​ ಬಳ್ಳಾರಿ ಜೈಲಿಗೆ ಸೇರಿ ಇಂದಿಗೆ ಮೂರು ದಿನ. ಅನೇಕರು ಅವರ ಭೇಟಿಗೆ ಕಾಯುತ್ತಿದ್ದಾರೆ. ಆದರೆ 511 ನಂಬರ್​ನ ಕೈದಿ ಭೇಟಿಗೆ ಯಾರಿಗೂ ಅವಕಾಶವಿಲ್ಲ ಎಂದು ಡಿಐಜಿ ಟಿಪಿ ಶೇಷಾರವರು ಖಡಕ್​ ಆಗಿ ಹೇಳಿದ್ದಾರೆ.

Advertisment

ದರ್ಶನ್​ ಅವರ ಮೊದಲ ರಕ್ತ ಸಂಬಂಧಿಗಳಿಗೆ ಮಾತ್ರ ಭೇಟಿಗೆ ಅವಕಾಶವಿದೆ. ಅದನ್ನು ಬಿಟ್ಟರೆ ವಕೀಲರಿಗೆ ಅವಕಾಶವಿದೆ. ಸ್ನೇಹಿತರು, ಸೆಲೆಬ್ರಿಟಿಗಳು ಬಂದ್ರೆ ಭೇಟಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ದರ್ಶನ್​​ಗೆ ಕಷ್ಟದ ಪಾಡು.. ವೆಸ್ಟರ್ನ್​ ಟಾಯ್ಲೆಟ್ ಸೌಲಭ್ಯಕ್ಕೆ ಬೇಡಿಕೆ

ದರ್ಶನ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಇದ್ದಾರೆ. 15 ಸೆಲ್‌ಗಳ ಪೈಕಿ ಬೇರೆ ಬೇರೆ ಸ್ಥಳದಲ್ಲಿ ನಾಲ್ಕು ಜನ ಖೈದಿಗಳಿದ್ದಾರೆ. ದರ್ಶನ ಅಕ್ಕಪಕ್ಕ ಯಾರು ಇಲ್ಲ. ದರ್ಶನ ಶೇಲ್ ಮುಂದೆ ಮೂರು ಸಿಸಿ ಕ್ಯಾಮರಾ ಇದೆ. ಬಾಡಿವೂರ್ನ್ ಕ್ಯಾಮೆರಾ ಮೂಲಕ ನಿಗಾವಹಿಸಲಾಗಿದೆ.  ದರ್ಶನ ಮೇಲೆ ನಿಗಾ ಜಾಸ್ತಿದೆ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ: ಸೂರ್ಯ, ಚಂದ್ರ ಹಗಲು ರಾತ್ರಿ ಇದ್ರೆನೇ ಚಂದ; ದರ್ಶನ್ ಕುರಿತ ವಿಚಾರಕ್ಕೆ ಸುದೀಪ್ ಖಡತ್ ಮಾತು

ಜೈಲಾಧಿಕಾರಿ ಬಳಿ ದರ್ಶನ್​ ಮನವಿ

ದರ್ಶನ್​​ಗೆ ಬೆನ್ನು ನೋವು ಇರುವ ಕಾರಣ, ಮೋಷನ್ ಸಮಸ್ಯೆಯಿಂದ ದರ್ಶನ ಊಟ ಬೇಡ ಅಂತಿದ್ದಾರೆ. ಜೈಲು ಊಟ ಸರಿಯಾಗಿ ನೀಡಲಾಗ್ತಿದೆ. ಸದ್ಯ ಜೈಲಾಧಿಕಾರಿಗಳ ಬಳಿ ಸರ್ಜಿಕಲ್ ಚೇರ್‌ಗೆ ದರ್ಶನ್​​ ಮನವಿ ಮಾಡಿದ್ದಾರೆ. ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡ್ತೀವಿ. ಅದರ ಬಳಿಕ ಏನು ನಿರ್ಣಯ ತೆಗೆದುಕೊಳ್ಳಬೇಕು ಅದನ್ನು ಮಾಡುತ್ತೀವೆ ಎಂದು ಡಿಐಜಿ ಟಿಪಿ ಶೇಷಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment