Advertisment

12 ಗಂಟೆಯ ನಂತರ ವಿನೋದ್ ದೋಂಡಾಳೆ ಅಂತ್ಯಕ್ರಿಯೆ.. ನಿರ್ದೇಶಕನ ಈ ನಿರ್ಧಾರಕ್ಕೆ ಎಲ್ಲರ ಕಣ್ಣು ಒದ್ದೆ

author-image
AS Harshith
Updated On
12 ಗಂಟೆಯ ನಂತರ ವಿನೋದ್ ದೋಂಡಾಳೆ ಅಂತ್ಯಕ್ರಿಯೆ.. ನಿರ್ದೇಶಕನ ಈ ನಿರ್ಧಾರಕ್ಕೆ ಎಲ್ಲರ ಕಣ್ಣು ಒದ್ದೆ
Advertisment
  • ಕರಿಮಣಿ ಸೀರಿಯಲ್ ನಿರ್ದೇಶಕ ವಿನೋದ್ ದೋಂಡಾಳೆ
  • ನೀನಾಸಂ ಸತೀಶ್ ಜೊತೆ ಅಶೋಕ ಬ್ಲೇಡ್‌ ಸಿನಿಮಾ ಮಾಡುತ್ತಿದ್ರು
  • ಫ್ಯಾನ್​ಗೆ ನೇಣು ಬಿಗಿದುಕೊಂಡು ಸೂಸೈಡ್​ ಮಾಡಿಕೊಂಡ ನಿರ್ದೇಶಕ

ಕರಿಮಣಿ ಸೀರಿಯಲ್ ನಿರ್ದೇಶಕ, ಸ್ಯಾಂಡಲ್‌ವುಡ್‌ನ ನಿರ್ಮಾಪಕ ವಿನೋದ್ ದೋಂಡಾಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಶೋಕ ಬ್ಲೇಡ್‌ ಸಿನಿಮಾ ಮಾಡಲು ಕೋಟಿ ಕೋಟಿ ಹಣ ಹಾಕಿದ್ದ ನಿರ್ದೇಶಕ ಆತ್ಮಹತ್ಯೆ ಮಾಡುವ ಮೂಲಕ ಬದುಕು ಮುಗಿಸಿದ್ದಾರೆ. ಮನೆಯಲ್ಲೇ ಫ್ಯಾನ್​ಗೆ ನೇಣು ಬಿಗಿದುಕೊಂಡು ಸೂಸೈಡ್​ ಮಾಡಿಕೊಂಡಿದ್ದಾರೆ.

Advertisment

ಇದನ್ನೂ ಓದಿ: ಟ್ರಾನ್ಸ್​ಫಾರ್ಮರ್ ಹಿಡಿದು ಹೆಸ್ಕಾಂ ನೌಕರ ಆತ್ಮಹ*.. ವಿದ್ಯುತ್ ಪ್ರವಹಿಸಿ ಸುಟ್ಟು ಕರಕಲಾದ ಲೈನ್​ಮೆನ್

ಇಂದು ಮಧ್ಯಾಹ್ನ 12 ಗಂಟೆ ನಂತರ ವಿನೋದ್ ದೋಂಡಾಳೆಯವರ ಅಂತ್ಯಕ್ರಿಯೆ ನಡೆಯಲಿದೆ. ನಗರದ ಚಾಮರಾಜಪೇಟೆ ಟಿ.ಆರ್ ಮಿಲ್ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಸದ್ಯ ಕಿರುತೆರೆ ನಟ, ನಟಿಯರು ವಿನೋದ್ ದೋಂಡಾಳೆಯವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ನಿರ್ದೇಶಕನ ಇಂಥಾ ನಿರ್ಧಾರ ಇಡೀ ಕನ್ನಡ ಕಿರುತೆರೆ, ಸ್ಯಾಂಡಲ್‌ವುಡ್‌ ದಿಗ್ಗಜರು ಕಂಗಾಲಾಗುವಂತೆ ಮಾಡಿದೆ.

ಇದನ್ನೂ ಓದಿ: KRS ಡ್ಯಾಂ ಬಹುತೇಕ ಭರ್ತಿ, ನದಿ ಪಾತ್ರದಲ್ಲಿ ಪ್ರವಾಹ ಭೀತಿ! ಒಳ ಹರಿವು, ಹೊರ ಹರಿವು ಎಷ್ಟಿದೆ?

Advertisment

ವಿನೋದ್ ದೋಂಡಾಳೆ ಮನೆಯ ಸೆಕೆಂಡ್ ಫ್ಲೋರ್ನಲ್ಲಿರೋ ಸಿಂಗಲ್ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುತ್ತಾ ಬಂದಿದ್ದರು. ಆದರೀಗ ಇವರ ಸಾವು ಅನೇಕ ಚಿತ್ರನಟರಿಗೆ ಅರಿಗಿಸಿಕೊಳ್ಳಲಾಗುತ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment