ಟೀಮ್​ ಇಂಡಿಯಾ ಆಯ್ಕೆಗಾಗಿ ಗಂಭೀರ್​​, ರೋಹಿತ್​ ಮಧ್ಯೆ ಜಗಳ; ಕೋಚ್​​ ಲೆಕ್ಕಾಚಾರ ಉಲ್ಟಾ ಮಾಡಿದ ಕ್ಯಾಪ್ಟನ್​​

author-image
Ganesh Nachikethu
Updated On
KL ರಾಹುಲ್- ಹಾರ್ದಿಕ್ ಪಾಂಡ್ಯ ನಡುವೆ ಬಿಗ್ ಫೈಟ್​.. ರೋಹಿತ್ ಶರ್ಮಾ ನಂತರ ಭಾರತದ ಕ್ಯಾಪ್ಟನ್ ಯಾರು?
Advertisment
  • ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ
  • ಟೀಮ್​ ಇಂಡಿಯಾ ಆಯ್ಕೆಗೆ ರೋಹಿತ್​, ಗಂಭೀರ್​ ಜಗಳ
  • ಕ್ಯಾಪ್ಟನ್​ ರೋಹಿತ್, ಗಂಭೀರ್​ ಮಧ್ಯೆ ನಡೆದಿದ್ದೇನು..?

ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಬಲಿಷ್ಠ ಭಾರತ ತಂಡ ಪ್ರಕಟವಾಗಿದೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ಟೀಮ್​ ಇಂಡಿಯಾ ಘೋಷಣೆ ಮಾಡಲಾಗಿದೆ. 12.30ಕ್ಕೆ ಸುದ್ದಿಗೋಷ್ಠಿ ಕರೆದ್ರೂ 3 ಗಂಟೆಗೆ ಟೀಮ್​ ಇಂಡಿಯಾ ಘೋಷಣೆ ಆಗಲು ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಕೋಚ್​ ಗೌತಮ್​ ಗಂಭೀರ್​ ನಡುವಿನ ಭಿನ್ನಾಭಿಪ್ರಾಯ ಅನ್ನೋ ವಿಚಾರ ಬಹಿರಂಗವಾಗಿದೆ.

ಅಜಿತ್​ ಅಗರ್ಕರ್​​ ನೇತೃತ್ವದ ಬಿಸಿಸಿಐ ಸೆಲೆಕ್ಷನ್​ ಕಮಿಟಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರ ಜತೆ ಚರ್ಚಿಸಿ ಒಂದು ಪಟ್ಟಿ ಸಿದ್ಧಪಡಿಸಿತ್ತು. ಮಧ್ಯಾಹ್ನ 12.30ಕ್ಕೆ ಇನ್ನೇನು ತಂಡ ಘೋಷಣೆ ಆಗಬೇಕು ಎನ್ನುವಷ್ಟರಲ್ಲಿ ಗಂಭೀರ್​​, ರೋಹಿತ್​ ಮಧ್ಯೆ ಚರ್ಚೆ ನಡೆದಿದೆ.

ಹಾರ್ದಿಕ್​ಗಾಗಿ ಗಂಭೀರ್​ ಬ್ಯಾಟಿಂಗ್​​

ಇನ್ನು, ಗೌತಮ್​ ಗಂಭೀರ್​ ಹಾರ್ದಿಕ್​ ಪಾಂಡ್ಯ ಅವರನ್ನು ವೈಸ್​ ಕ್ಯಾಪ್ಟನ್​ ಎಂದು ಘೋಷಣೆ ಮಾಡುವಂತೆ ಪಟ್ಟು ಹಿಡಿದಿದ್ದರು. ಆದರೆ ಅಜಿತ್ ಅಗರ್ಕರ್ ಹಾಗೂ ರೋಹಿತ್ ಶರ್ಮಾ, ಶುಭ್ಮನ್​ ಗಿಲ್​ ಅವರನ್ನೇ ವೈಸ್​ ಕ್ಯಾಪ್ಟನ್​ ಮಾಡಿದ್ದಾರೆ ಎಂದು ವರದಿ ಆಗಿದೆ.

ಸಂಜು ಸ್ಯಾಮ್ಸನ್​ ಪರ ಗಂಭೀರ್​ ಬ್ಯಾಟಿಂಗ್​​

ಇನ್ನು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ನೀಡಬೇಕೆಂದು ಗೌತಮ್ ಗಂಭೀರ್ ತಾಕೀತು ಮಾಡಿದ್ದರು. ರೋಹಿತ್ ಶರ್ಮಾ ಪಂತ್ ಪರ ಬ್ಯಾಟ್​ ಮಾಡಿದ್ದು, ಗಂಭೀರ್​ ಮಾತಿಗೆ ಸೊಪ್ಪು ಹಾಕಲಿಲ್ಲ. ಈ ಮೂಲಕ ಗಂಭೀರ್​, ರೋಹಿತ್​ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಎದ್ದು ಕಾಣುತ್ತಿದೆ.

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್​ ಪಂತ್, ರವೀಂದ್ರ ಜಡೇಜಾ.

ಇದನ್ನೂ ಓದಿ:ಮಹಾ ಎಡವಟ್ಟು; ಸಂಜು ಸ್ಯಾಮ್ಸನ್​​ ಚಾಂಪಿಯನ್ಸ್​ ಟ್ರೋಫಿಯಿಂದ ಹೊರಗುಳಿಯಲು ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment