CCTV ಕ್ಯಾಮೆರಾ ರಿಪೇರಿಗೆ; CM ಪ್ರೋಗ್ರಾಂ ಬೇರೆ; ಪಕ್ಕಾ ಪ್ಲಾನ್ ಮಾಡಿ 12 ಕೋಟಿ ಬ್ಯಾಂಕ್​ ದರೋಡೆ

author-image
Ganesh Nachikethu
Updated On
CCTV ಕ್ಯಾಮೆರಾ ರಿಪೇರಿಗೆ; CM ಪ್ರೋಗ್ರಾಂ ಬೇರೆ; ಪಕ್ಕಾ ಪ್ಲಾನ್ ಮಾಡಿ 12 ಕೋಟಿ ಬ್ಯಾಂಕ್​ ದರೋಡೆ
Advertisment
  • ರಾಜ್ಯದಲ್ಲಿ ಒಂದರ ಮೇಲೋಂದರಂತೆ ಬ್ಯಾಂಕ್ ದರೋಡೆ
  • ಎಂಟಿಎಂಗೆ ಹಣ ತುಂಬಿಸೋ ವೇಳೆ ಗುಂಡು ಹಾರಿಸಿ ಲೂಟಿ
  • ಬೀದರ್​​ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ

ಮಂಗಳೂರು: ರಾಜ್ಯದಲ್ಲಿ ಒಂದರ ಮೇಲೋಂದರಂತೆ ಬ್ಯಾಂಕ್ ದರೋಡೆ ಕೇಸ್​ಗಳು ನಡೆಯುತ್ತಿವೆ. ಗುರುವಾರ ಅಷ್ಟೇ ಬೀದರ್​​ನಲ್ಲಿ ಎಂಟಿಎಂಗೆ ಹಣ ತುಂಬಿಸೋ ಸಂದರ್ಭದಲ್ಲಿ ಸಿಬ್ಬಂದಿಗೆ ಗುಂಡು ಹಾರಿಸಿ ದರೋಡೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಅದು ಮಂಗಳೂರಲ್ಲಿ ಎಂಬುದು ಅಚ್ಚರಿ.

ಸಿನಿಮಾ ಶೈಲಿಯಲ್ಲೇ ಕಳ್ಳತನ

ಥೇಟ್​​ ಸಿನಿಮಾ ಶೈಲಿಯಲ್ಲೇ ಮಂಗಳೂರು ಬ್ಯಾಂಕ್​ನಲ್ಲಿ ದರೋಡೆ ನಡೆದಿದೆ. ಮಂಗಳೂರಿನ ಉಲ್ಲಾಳದ ಕೆಸಿ ರಸ್ತೆಯಲ್ಲಿರೋ ಕೋಟೆಕಾರು ಬ್ಯಾಂಕ್​​ಗೆ ನುಗ್ಗಿ ಹಾಡಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್​ಗೆ ನುಗ್ಗಿದ ಐದು ಜನರ ಖತರ್ನಾಕ್​​ ಕಳ್ಳರ ಗ್ಯಾಂಗ್​​ ಸಿಬ್ಬಂದಿಗೆ ಬೆದರಿಸಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ ಕದ್ದು ಎಸ್ಕೇಪ್​ ಆಗಿದೆ.

publive-image

ಪಕ್ಕಾ ಪ್ಲಾನ್​ ಮಾಡಿ ಕದ್ದ ಗ್ಯಾಂಗ್​

ಸುಮಾರು 12 ಕೋಟಿ ಹಣದೊಂದಿಗೆ ಚಿನ್ನ ಕದ್ದು ಎಸ್ಕೇಪ್​ ಆದ ಗ್ಯಾಂಗ್​​ ಕನ್ನಡದಲ್ಲೇ ಮಾತಾಡುತ್ತಿದ್ದರು ಎಂದು ತಿಳಿದು ಬಂದಿದೆ. ಫಿಯೆಟ್​ ಕಾರಿನಲ್ಲಿ ಬಂದು ಪಿಸ್ತೂಲು, ತಲವಾರು ತೋರಿಸಿ ಲೂಟಿ ಮಾಡಲಾಗಿದೆ.

ಸಿಸಿಟಿವಿ ಕ್ಯಾಮೆರಾ ರಿಪೇರಿಗೆ!

ಇಂದು ಸಿಸಿಟಿವಿ ಕ್ಯಾಮೆರಾ ರಿಪೇರಿಗೆ ನೀಡಲಾಗಿತ್ತು. ಅಷ್ಟೇ ಅಲ್ಲ ಶುಕ್ರವಾರ ಮಧ್ಯಾಹ್ನ ಆದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿಗಾಗಿ ತೆರಳುತ್ತಿದ್ದರು. ಮಂಗಳೂರಲ್ಲಿ ಸಿಎಂ ಪ್ರೋಗ್ರಾಮ್​ ಇದ್ದ ಕಾರಣ ಹೆಚ್ಚಿನ ಪೊಲೀಸ್​​ ಭದ್ರತೆ ಕೂಡ ಇತ್ತು. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿ ಪಕ್ಕಾ ಪ್ಲಾನ್​ ಮಾಡಿ ಕದಿಯಲಾಗಿದೆ. ಸ್ಥಳೀಯರು ಬ್ಯಾಂಕ್​ ಸಿಬ್ಬಂದಿ ಮೇಲೆ ಅನುಮಾನ ವ್ಯಪ್ತಡಿಸಿದ್ದಾರೆ.

ಇದನ್ನೂ ಓದಿ:ಆಟಗಾರರಿಗೆ BCCI ಮೂಗುದಾರ.. ‘10 ಪಾಯಿಂಟ್ಸ್​ ಪಾಲಿಸಿ’ಗೆ ಬೆಚ್ಚಿಬಿದ್ದ ಸ್ಟಾರ್​​ಗಳು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment