newsfirstkannada.com

ಗಂಗಾಧರ ಸ್ವಾಮೀಜಿ ಮಠ ಪ್ರವೇಶಿಸಬಾರದು; ಕಲಾದಗಿ ಗುರುಲಿಂಗೇಶ್ವರ ಮಠಕ್ಕೆ ಬೀಗ ಜಡಿದ ಭಕ್ತರು

Share :

Published February 18, 2024 at 8:45am

    ಗಂಗಾಧರ ಸ್ವಾಮೀಜಿ ಪೀಠಾಧಿಪತಿ ವಿವಾದ

    ಇದೇ ವಿಚಾರಕ್ಕೆ ಕೋರ್ಟ್ ಮೊರೆ ಹೋಗಿದ್ದ ಭಕ್ತರು

    ಗಂಗಾಧರ ಸ್ವಾಮೀಜಿ ನಮಗೆ ಬೇಡವೇ ಬೇಡ ಎಂದ ಭಕ್ತರು

ಬಾಗಲಕೋಟೆ: ಕಲಾದಗಿ ಗುರುಲಿಂಗೇಶ್ವರ ಮಠ ಪೀಠಾಧಿಪತಿ ವಿವಾದ ವಿಚಾರ ಮಠದ ಬಾಗಿಲಿಗೆ ಭಕ್ತರು ಬೀಗ ಜಡಿದಿದ್ದಾರೆ.

ಕಳೆದ 2015 ರಲ್ಲಿ ಶ್ರೀಚಂದ್ರಶೇಖರ ಸ್ವಾಮೀಜಿಯವರು ಲಿಂಗೈಕ್ಯರಾದ ಬಳಿಕ ರಂಭಾಪುರಿ ಜಗದ್ಗುರುಗಳು ಗಂಗಾಧರ ಸ್ವಾಮೀಜಿಯವರನ್ನು ಪೀಠಾಧಿಪತಿಯಾಗಿ ನೇಮಿಸಿದ್ದರು. ಗಂಗಾಧರ ಸ್ವಾಮೀಜಿ ಆಯ್ಕೆಯನ್ನು ಭಕ್ತರು ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದ ತೀರ್ಪು ಬರುವ ಮೊದಲೇ ನೂತನ ಪೀಠಾಧಿಪತಿಗಳು ಮಠದ ದುರುಸ್ಥಿ ಕಾರ್ಯ ನಡೆಸಿದ್ದು, ಗಂಗಾಧರ ಸ್ವಾಮೀಜಿ ನಮಗೆ ಬೇಡವೇ ಬೇಡ. ಕೋರ್ಟ್ ನಲ್ಲಿ ಪರಿಹಾರವಾದ ನಂತರ ಮಠ ಪ್ರವೇಶಿಸಲಿ ಎಂದು ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ಏನಿದು ವಿವಾದ?

ಕಳೆದ 2015 ರಲ್ಲಿ ಕಲಾದಗಿಯ ಶ್ರೀ ಗುರುಲಿಂಗೇಶ್ವರ ಮಠದ ಅಂದಿನ ಪೀಠಾಧಿಪತಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಲಿಂಗೈಕ್ಯರಾದ ಬಳಿಕ, ನೂತನ ಪೀಠಾಧಿಪತಿ ನೇಮಕ ವಿವಾದ ಭುಗಿಲೇಳುತ್ತೆ. ಗ್ರಾಮಸ್ಥರು ವಿದ್ವತ್ ಇರುವಂತಹ ಸ್ವಾಮೀಜಿಯವರನ್ನ ಪೀಠಾಧಿಪತಿಯನ್ನಾಗಿ ನೇಮಿಸಲು ಪಟ್ಟು ಹಿಡಿತಾರೆ.ಆದ್ರೆ ರಂಭಾಪುರಿ ಜಗದ್ಗುರುಗಳು ಲಿಂಗೈಕ್ಯರಾಗಿದ್ದ ಶ್ರೀ ಚಂದ್ರಶೇಖರ್ ಸ್ವಾಮೀಜಿಯವರ ಸಂಬಂಧಿ(ತಂಗಿಯ ಮಗ) ಕೆ.ಎಂ.ಗಂಗಾಧರ ಅವರನ್ನ ಪೀಠಾಧಿಪತಿಯನ್ನಾಗಿ ನೇಮಿಸ್ತಾರೆ. ಹೀಗಾಗಿ ವಿವಾದ ದೊಡ್ಡ ಮಟ್ಟಕ್ಕೆ ತಿರುಗಿ ಗದ್ದಲ ಗಲಾಟೆ ಮಾರಾಮಾರಿಗಳು ನಡೆಯುತ್ತವೆ.

ಇದಾದ ಬಳಿಕ ಮಠದ ಪೀಠಾಧಿಪತಿ ವಿವಾದ ನ್ಯಾಯಲಯದ ಮೆಟ್ಟಿಲೇರುತ್ತೆ. ಇನ್ನೂ ಕೂಡ ವಿವಾದ ಜಿಲ್ಲಾ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಸದ್ಯದ ಪೀಠಾಧಿಪತಿ ಕೆ.ಎಂ.ಗಂಗಾಧರ ಅವರು ಮಠವನ್ನ ದುರಸ್ತಿ ಮಾಡಿಸುವುದಿ,ಮಠಕ್ಕೆ ಸಂಭಂಧಿಸಿದ ಹೊಲದಲ್ಲಿ ಉಳುಮೆ ಮಾಡಿಸುವುದು ಹಾಗೂ ಇತರೇ ಚಟುವಟಿಕೆಗಳನ್ನ ನಡೆಸುತ್ತಿರುವುದರಿಂದ ಗ್ರಾಮಸ್ಥರು ತೀರ್ಪು ಬರುವ ವರೆಗೆ ಮಠದ ಆಸ್ತಿ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ರಂಭಾಪುರಿ ಜಗದ್ಗುರುಗಳಯಲು ಕಲಾದಗಿ ಮಾರ್ಗವಾಗಿ ಉದಗಟ್ಟಿಗೆ ತೆರಳುವ ವೇಳೆ ಚಪ್ಪಲಿ ಎಸೆತದ ಘಟನೆ ಜರುಗಿದೆ.ಇನ್ನು ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ರಂಭಾಪುರಿ ಜಗದ್ಗುರುಗಳು ನ್ಯಾಯಾಲಯದಿಂದ ಬರುವ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಗಾಧರ ಸ್ವಾಮೀಜಿ ಮಠ ಪ್ರವೇಶಿಸಬಾರದು; ಕಲಾದಗಿ ಗುರುಲಿಂಗೇಶ್ವರ ಮಠಕ್ಕೆ ಬೀಗ ಜಡಿದ ಭಕ್ತರು

https://newsfirstlive.com/wp-content/uploads/2024/02/Kalburgi-3.jpg

    ಗಂಗಾಧರ ಸ್ವಾಮೀಜಿ ಪೀಠಾಧಿಪತಿ ವಿವಾದ

    ಇದೇ ವಿಚಾರಕ್ಕೆ ಕೋರ್ಟ್ ಮೊರೆ ಹೋಗಿದ್ದ ಭಕ್ತರು

    ಗಂಗಾಧರ ಸ್ವಾಮೀಜಿ ನಮಗೆ ಬೇಡವೇ ಬೇಡ ಎಂದ ಭಕ್ತರು

ಬಾಗಲಕೋಟೆ: ಕಲಾದಗಿ ಗುರುಲಿಂಗೇಶ್ವರ ಮಠ ಪೀಠಾಧಿಪತಿ ವಿವಾದ ವಿಚಾರ ಮಠದ ಬಾಗಿಲಿಗೆ ಭಕ್ತರು ಬೀಗ ಜಡಿದಿದ್ದಾರೆ.

ಕಳೆದ 2015 ರಲ್ಲಿ ಶ್ರೀಚಂದ್ರಶೇಖರ ಸ್ವಾಮೀಜಿಯವರು ಲಿಂಗೈಕ್ಯರಾದ ಬಳಿಕ ರಂಭಾಪುರಿ ಜಗದ್ಗುರುಗಳು ಗಂಗಾಧರ ಸ್ವಾಮೀಜಿಯವರನ್ನು ಪೀಠಾಧಿಪತಿಯಾಗಿ ನೇಮಿಸಿದ್ದರು. ಗಂಗಾಧರ ಸ್ವಾಮೀಜಿ ಆಯ್ಕೆಯನ್ನು ಭಕ್ತರು ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದ ತೀರ್ಪು ಬರುವ ಮೊದಲೇ ನೂತನ ಪೀಠಾಧಿಪತಿಗಳು ಮಠದ ದುರುಸ್ಥಿ ಕಾರ್ಯ ನಡೆಸಿದ್ದು, ಗಂಗಾಧರ ಸ್ವಾಮೀಜಿ ನಮಗೆ ಬೇಡವೇ ಬೇಡ. ಕೋರ್ಟ್ ನಲ್ಲಿ ಪರಿಹಾರವಾದ ನಂತರ ಮಠ ಪ್ರವೇಶಿಸಲಿ ಎಂದು ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ಏನಿದು ವಿವಾದ?

ಕಳೆದ 2015 ರಲ್ಲಿ ಕಲಾದಗಿಯ ಶ್ರೀ ಗುರುಲಿಂಗೇಶ್ವರ ಮಠದ ಅಂದಿನ ಪೀಠಾಧಿಪತಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಲಿಂಗೈಕ್ಯರಾದ ಬಳಿಕ, ನೂತನ ಪೀಠಾಧಿಪತಿ ನೇಮಕ ವಿವಾದ ಭುಗಿಲೇಳುತ್ತೆ. ಗ್ರಾಮಸ್ಥರು ವಿದ್ವತ್ ಇರುವಂತಹ ಸ್ವಾಮೀಜಿಯವರನ್ನ ಪೀಠಾಧಿಪತಿಯನ್ನಾಗಿ ನೇಮಿಸಲು ಪಟ್ಟು ಹಿಡಿತಾರೆ.ಆದ್ರೆ ರಂಭಾಪುರಿ ಜಗದ್ಗುರುಗಳು ಲಿಂಗೈಕ್ಯರಾಗಿದ್ದ ಶ್ರೀ ಚಂದ್ರಶೇಖರ್ ಸ್ವಾಮೀಜಿಯವರ ಸಂಬಂಧಿ(ತಂಗಿಯ ಮಗ) ಕೆ.ಎಂ.ಗಂಗಾಧರ ಅವರನ್ನ ಪೀಠಾಧಿಪತಿಯನ್ನಾಗಿ ನೇಮಿಸ್ತಾರೆ. ಹೀಗಾಗಿ ವಿವಾದ ದೊಡ್ಡ ಮಟ್ಟಕ್ಕೆ ತಿರುಗಿ ಗದ್ದಲ ಗಲಾಟೆ ಮಾರಾಮಾರಿಗಳು ನಡೆಯುತ್ತವೆ.

ಇದಾದ ಬಳಿಕ ಮಠದ ಪೀಠಾಧಿಪತಿ ವಿವಾದ ನ್ಯಾಯಲಯದ ಮೆಟ್ಟಿಲೇರುತ್ತೆ. ಇನ್ನೂ ಕೂಡ ವಿವಾದ ಜಿಲ್ಲಾ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಸದ್ಯದ ಪೀಠಾಧಿಪತಿ ಕೆ.ಎಂ.ಗಂಗಾಧರ ಅವರು ಮಠವನ್ನ ದುರಸ್ತಿ ಮಾಡಿಸುವುದಿ,ಮಠಕ್ಕೆ ಸಂಭಂಧಿಸಿದ ಹೊಲದಲ್ಲಿ ಉಳುಮೆ ಮಾಡಿಸುವುದು ಹಾಗೂ ಇತರೇ ಚಟುವಟಿಕೆಗಳನ್ನ ನಡೆಸುತ್ತಿರುವುದರಿಂದ ಗ್ರಾಮಸ್ಥರು ತೀರ್ಪು ಬರುವ ವರೆಗೆ ಮಠದ ಆಸ್ತಿ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ರಂಭಾಪುರಿ ಜಗದ್ಗುರುಗಳಯಲು ಕಲಾದಗಿ ಮಾರ್ಗವಾಗಿ ಉದಗಟ್ಟಿಗೆ ತೆರಳುವ ವೇಳೆ ಚಪ್ಪಲಿ ಎಸೆತದ ಘಟನೆ ಜರುಗಿದೆ.ಇನ್ನು ಬಾಗಲಕೋಟೆ ನಗರದಲ್ಲಿ ಮಾತನಾಡಿರುವ ರಂಭಾಪುರಿ ಜಗದ್ಗುರುಗಳು ನ್ಯಾಯಾಲಯದಿಂದ ಬರುವ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More