newsfirstkannada.com

ಕಾಂಗ್ರೆಸ್​ ಶಾಸಕರಿಗೆ ಬಿಜೆಪಿಯಿಂದ ಬಿಗ್​ ಆಫರ್​​; MLA ಗಣಿಗ ರವಿಕುಮಾರ್ ಹೇಳಿದ್ದೇನು..?

Share :

Published October 27, 2023 at 4:08pm

    ಮತ್ತೆ ಆಪರೇಷನ್​​ ಕಮಲಕ್ಕೆ ಮುಂದಾದ ಬಿಜೆಪಿ..?

    ಅಮಿತ್​ ಶಾರನ್ನು ಭೇಟಿ ಮಾಡಿಸ್ತೇವೆ ಅನ್ನೋ ಆರೋಪ

    ಈ ಬಗ್ಗೆ ಕಾಂಗ್ರೆಸ್​ ಶಾಸಕ ಗಣಿಗ ರವಿಕುಮಾರ್​ ಹೇಳಿದ್ದಿಷ್ಟು!

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿ ಮಾಡಿಸುತ್ತೇವೆ ಎಂದು ಮತ್ತೆ ಹಿಂದಿನ ಗ್ಯಾಂಗ್​ ಆ್ಯಕ್ಟೀವ್​​ ಆಗಿದೆ ಎಂದು ಮಂಡ್ಯದ ಕಾಂಗ್ರೆಸ್​ ಶಾಸಕ ಗಣಿಗ ರವಿಕುಮಾರ್​ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ಗಣಿಗ ರವಿಕುಮಾರ್​​, ಅಮಿತ್​ ಶಾ ಅವರನ್ನು ಭೇಟಿ ಮಾಡಿಸುತ್ತೇವೆ. ಚಾರ್ಟರ್​​​ ಫ್ಲೈಟ್​ ಬುಕ್​ ಮಾಡಿದ್ದೇವೆ. ಕಾಂಗ್ರೆಸ್​​ ಬಿಟ್ಟು ಬಿಜೆಪಿಗೆ ಬನ್ನಿ ಎಂದು ಆಮಿಷವೊಡ್ಡಿದ್ದಾರೆ ಎಂದರು.

ಎನ್​​. ಆರ್​ ಸಂತೋಷ್​​​ ಇತ್ತೀಚೆಗೆ ನಮ್ಮ ಶಾಸಕರನ್ನು ಗೋಲ್ಡ್​ ಪಿಂಚ್​​ ಹೋಟೆಲ್​​ನಲ್ಲಿ ಭೇಟಿ ಮಾಡಿದ್ರು. ಸಂತೋಷ್​ ಜತೆಗೆ ಇಬ್ಬರು ಎಂಎಲ್​​ಸಿ, ಬೆಳಗಾವಿ ಮಾಜಿ ಸಚಿವರು ಒಬ್ಬರು 10 ದಿನಗಳ ಹಿಂದೆ ನಮ್ಮ ಐವರು ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂದರು.

ಸದ್ಯದಲ್ಲೇ ಈ ಐವರು ಶಾಸಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅವರೇ ಎಲ್ಲವನ್ನೂ ಬಿಚ್ಚಿಡಲಿದ್ದಾರೆ. ಏನು ಆಫರ್​ ಕೊಟ್ರು ಎಂದು ಹೇಳಲಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್​ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಶಾಸಕರಿಗೆ ಬಿಜೆಪಿಯಿಂದ ಬಿಗ್​ ಆಫರ್​​; MLA ಗಣಿಗ ರವಿಕುಮಾರ್ ಹೇಳಿದ್ದೇನು..?

https://newsfirstlive.com/wp-content/uploads/2023/08/ganiga-ravikumart.webp

    ಮತ್ತೆ ಆಪರೇಷನ್​​ ಕಮಲಕ್ಕೆ ಮುಂದಾದ ಬಿಜೆಪಿ..?

    ಅಮಿತ್​ ಶಾರನ್ನು ಭೇಟಿ ಮಾಡಿಸ್ತೇವೆ ಅನ್ನೋ ಆರೋಪ

    ಈ ಬಗ್ಗೆ ಕಾಂಗ್ರೆಸ್​ ಶಾಸಕ ಗಣಿಗ ರವಿಕುಮಾರ್​ ಹೇಳಿದ್ದಿಷ್ಟು!

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿ ಮಾಡಿಸುತ್ತೇವೆ ಎಂದು ಮತ್ತೆ ಹಿಂದಿನ ಗ್ಯಾಂಗ್​ ಆ್ಯಕ್ಟೀವ್​​ ಆಗಿದೆ ಎಂದು ಮಂಡ್ಯದ ಕಾಂಗ್ರೆಸ್​ ಶಾಸಕ ಗಣಿಗ ರವಿಕುಮಾರ್​ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಮಾತಾಡಿದ ಗಣಿಗ ರವಿಕುಮಾರ್​​, ಅಮಿತ್​ ಶಾ ಅವರನ್ನು ಭೇಟಿ ಮಾಡಿಸುತ್ತೇವೆ. ಚಾರ್ಟರ್​​​ ಫ್ಲೈಟ್​ ಬುಕ್​ ಮಾಡಿದ್ದೇವೆ. ಕಾಂಗ್ರೆಸ್​​ ಬಿಟ್ಟು ಬಿಜೆಪಿಗೆ ಬನ್ನಿ ಎಂದು ಆಮಿಷವೊಡ್ಡಿದ್ದಾರೆ ಎಂದರು.

ಎನ್​​. ಆರ್​ ಸಂತೋಷ್​​​ ಇತ್ತೀಚೆಗೆ ನಮ್ಮ ಶಾಸಕರನ್ನು ಗೋಲ್ಡ್​ ಪಿಂಚ್​​ ಹೋಟೆಲ್​​ನಲ್ಲಿ ಭೇಟಿ ಮಾಡಿದ್ರು. ಸಂತೋಷ್​ ಜತೆಗೆ ಇಬ್ಬರು ಎಂಎಲ್​​ಸಿ, ಬೆಳಗಾವಿ ಮಾಜಿ ಸಚಿವರು ಒಬ್ಬರು 10 ದಿನಗಳ ಹಿಂದೆ ನಮ್ಮ ಐವರು ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂದರು.

ಸದ್ಯದಲ್ಲೇ ಈ ಐವರು ಶಾಸಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅವರೇ ಎಲ್ಲವನ್ನೂ ಬಿಚ್ಚಿಡಲಿದ್ದಾರೆ. ಏನು ಆಫರ್​ ಕೊಟ್ರು ಎಂದು ಹೇಳಲಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್​ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More