ಟೀಮ್ ಇಂಡಿಯಾ ಕೋಚ್ ಆಗಿ ಗಂಭೀರ್ ನೇಮಕ
ಡ್ರೆಸ್ಸಿಂಗ್ ರೂಮ್ನಲ್ಲಿ ಗುಂಪುಗಾರಿಕೆ ಶುರುವಾಗುತ್ತಾ?
ಕೊಹ್ಲಿ-ಗಂಭೀರ್ ಬಾಂಧವ್ಯದ ಮೇಲೆ ಎಲ್ಲರ ಕಣ್ಣು
ಗಂಭೀರ್ ಕೋಚ್ ಹುದ್ದೆಗೇರ್ತಿದ್ದಂತೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ನಡುವಿನ ಬಾಂಧವ್ಯ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಹೆಚ್ಚಾಗ್ತಿದೆ. ಅಹಂಕಾರ, ಇನ್ಸೆಕ್ಯುರಿಟಿಯಿಂದಾಗಿ ಡ್ರೆಸ್ಸಿಂಗ್ ರೂಮ್ನಲ್ಲಿ ಗುಂಪುಗಾರಿಕೆ ಶುರುವಾಗುತ್ತಾ ಅನ್ನೋ ಆತಂಕ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಆ 3 ಘಟನೆಗಳು.
ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಹುದ್ದೆಗೇರಿದ್ದಾಗಿದೆ. ಹೆಡ್ ಮಾಸ್ಟರ್ ಹುದ್ದೆ ಅಲಂಕರಿಸಿರೋ ಗಂಭೀರ್ ಕಠಿಣ ಹಾದಿಯಲ್ಲಿ ಸಾಗಬೇಕಿದೆ. 4 ಐಸಿಸಿ ಟ್ರೋಫಿ ಗೆಲ್ಲೋ ಟಫ್ ಟಾಸ್ಕ್ ಜೊತೆಗೆ ತಂಡದಲ್ಲಿ ಇಗೋ ಮತ್ತು ಇನ್ಸೆಕ್ಯುರಿಟಿಯನ್ನ ಹೇಗೆ ಹ್ಯಾಂಡೆಲ್ ಮಾಡ್ತಾರೆ ಅನ್ನೋ ದೊಡ್ಡ ಪ್ರಶ್ನೆ ಎದುರಾಗಿದೆ. ದ್ರಾವಿಡ್ ಅವಧಿಯಲ್ಲಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ವಾತಾವರಣ ಅದ್ಭುತವಾಗಿತ್ತು. ಅದನ್ನೇ ಮುಂದುವರೆಸಿಕೊಂಡು ಹೋಗುವ ಸವಾಲು ಗಂಭೀರ್ ಮುಂದಿದೆ.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ With.. ಭಾರೀ ಸಂಚಲನ ಮೂಡಿಸಿದ ಸುಂದರಿ..!
ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಯಾವತ್ತಿಂದ ಚಾರ್ಜ್ ತೆಗೆದುಕೊಳ್ತಾರೆ ಅನ್ನೋದಕ್ಕಿಂತ, ಗೌತಮ್ ಗಂಭೀರ್-ವಿರಾಟ್ ಕೊಹ್ಲಿ ನಡುವೆ ಹೊಂದಾಣಿಕೆ ಹೇಗಿರುತ್ತೆ ಅನ್ನೋ ಚರ್ಚೆ ಕ್ರಿಕೆಟ್ ಲೋಕದಲ್ಲಿ ಜೋರಾಗಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಸ್ವಲ್ಪ ಯಡವಟ್ಟಾದ್ರು, ಡ್ರೆಸ್ಸಿಂಗ್ ರೂಮ್ ವಾತಾವರಣವೇ ಹಾಳಾಗಲಿದೆ. ಜೂನಿಯರ್ಸ್, ಸೀನಿಯರ್ಸ್ ಎನ್ನದೆ ಒಗ್ಗಟ್ಟಿನ ಸಂದೇಶ ಸಾರ್ತಿರೋ ಟೀಮ್ ಇಂಡಿಯಾ ಇಬ್ಭಾಗವಾಗಲಿದೆ. ಗುಂಪುಗಾರಿಕೆಗೆ ನಾಂದಿ ಹಾಡುವ ಸಾಧ್ಯತೆ ಇದೆ. ಇಷ್ಟೆಲ್ಲಾ ಟೆನ್ಶನ್ ಹುಟ್ಟಿಗೆ ಕಾರಣ ಆ 3 ಘಟನೆಗಳು.
ಆನ್ಫೀಲ್ಡ್ನಲ್ಲೇ ಇಬ್ಬರ ನಡುವೆ ಬಿಗ್ ಫೈಟ್
IPL 6ನೇ ಸೀಸನ್ನ ವೇಳೆ ಕೆಕೆಆರ್ ಕ್ಯಾಪ್ಟನ್ ಆಗಿದ್ದ ಗಂಭೀರ್, RCB ವಿರುದ್ಧದ ಪಂದ್ಯದಲ್ಲಿ ಔಟಾಗಿ ಹೋಗ್ತಿದ್ದ ಕೊಹ್ಲಿಯನ್ನ ಕೆಣಕಿದ್ರು. ಇದ್ರಿಂದ ಕೊಹ್ಲಿ ಕೆಂಡವಾದ್ರು. ಆನ್ಫೀಲ್ಡ್ನಲ್ಲೇ ಇಬ್ಬರ ನಡುವೆ ಫುಲ್ ವಾರ್ ನಡೀತು. ಬಿಟ್ಟರೆ ಒಬ್ಬರನ್ನೊಬ್ಬರು ಹೊಡೆದಾಡಿಕೊಂಡೆ ಬಿಡ್ತಿದ್ರು.
ಇಬ್ಬರ ನಡುವೆ ಮತ್ತೆ ಕಿರಿಕ್..!
2023ರ ಐಪಿಎಲ್ ಟೂರ್ನಿಯ ವೇಳೆ ಆನ್ಫೀಲ್ಡ್ನಲ್ಲಿ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ವಾರ್ ನಡೆದಿತ್ತು. ಇಡೀ ವಿಶ್ವವೇ ಆ ಘಟನೆಯನ್ನ ಕಣ್ಣಾರೆ ನೋಡಿತ್ತು. ಇದು ಇಷ್ಟಕ್ಕೆ ನಿಲ್ಲಲಿಲ್ಲ. ಪಂದ್ಯ ಮುಗಿದ ನಂತ್ರ ಹ್ಯಾಂಡ್ ಶೇಕ್ ವೇಳೆ, ವಿರಾಟ್ ಮತ್ತು ನವೀನ್ ನಡುವೆ ಮತ್ತೆ ಜಗಳ ಶುರುವಾಗುತ್ತೆ. ಆಗ ಇಬ್ಬರ ಜಗಳದ ನಡುವೆ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಎಂಟ್ರಿ ಕೊಡ್ತಾರೆ. ಗಂಭೀರ್ ಯಾವಾಗ ಎಂಟ್ರಿ ಆದರೋ ಕಿರಿಕ್ ಮತ್ತಷ್ಟು ಜೋರಾಗಿ ನಡೀತು. ಕೊಹ್ಲಿ – ಗಂಭೀರ್ ಇಬ್ಬರೂ ಹಾವು ಮುಂಗಸಿಯಂತೆ ಒಬ್ಬರನ್ನೊಬ್ಬರು ಬೈದಾಡಿಕೊಂಡಿದ್ರು.
ಇದನ್ನೂ ಓದಿ:ಗೌತಮ್ ಗಂಭೀರ್ಗೆ ಬಿಗ್ ಶಾಕ್.. ಮುಖ್ಯ ಕೋಚ್ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ
ಚಿನ್ನಸ್ವಾಮಿ ಫ್ಯಾನ್ಸ್ಗೆ ಗಂಭೀರ್ ಸನ್ನೆ, ಕೊಹ್ಲಿ ಕೆಂಡ
ನವೀನ್ ಉಲ್ ಹಕ್ vs ಕೊಹ್ಲಿ ನಡುವಿನ ಜಗಳಕ್ಕೆ ಮೂಲ ಕಾರಣವಾಗಿದ್ದು ಲಕ್ನೋ ಮತ್ತು ಆರ್ಸಿಬಿ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಪಂದ್ಯ. ಅಂದು ಬೆಂಗಳೂರಿನಲ್ಲಿ ಆರ್ಸಿಬಿ ತಂಡವನ್ನ ಸೋಲಿಸಿದಾಗ ಗಂಭೀರ್, ಅಭಿಮಾನಿಗಳತ್ತ ಬಾಯ್ಮುಚ್ಚಿ ಎಂಬಂತೆ ಸನ್ನೆ ಮಾಡಿದ್ರು. ಕೊಹ್ಲಿಗೆ ಸಹಿಸಲಾಗಿರಲಿಲ್ಲ. ಹೀಗಾಗಿ ಬಳಿಕ ಲಕ್ನೋನಲ್ಲಿ ಎಲ್ಎಸ್ಜಿ ತಂಡವನ್ನು ಮಣಿಸಿದಾಗ ಕೊಹ್ಲಿ, ಅದೇ ಸ್ಟೈಲ್ನಲ್ಲಿ ಗಂಭೀರ್ಗೆ ತಿರುಗೇಟು ನೀಡಿದ್ರು.
ಈ ಮೂರು ಕಿತ್ತಾಟಗಳೇ ಸದ್ಯ ಕೊಹ್ಲಿ – ಗಂಭೀರ್ ಭಾಂದವ್ಯ ಹೇಗಿರುತ್ತೆ ಅನ್ನೋ ಪ್ರಶ್ನೆ ಹುಟ್ಟಿಸಿವೆ. ಕಳೆದ ಐಪಿಎಲ್ ಟೂರ್ನಿ ವೇಳೆ ಇಬ್ಬರ ನಡುವೆ ಏನೂ ನಡೆದೇ ಇಲ್ಲವೆಂಬಂತೆ ಇಬ್ಬರೂ ನಡೆದುಕೊಂಡಿದ್ದಾರೆ. ಈ ಸೀಸನ್ನ ಕೆಕೆಆರ್-ಆರ್ಸಿಬಿ ನಡುವಿನ ಮೊದಲ ಪಂದ್ಯದಲ್ಲಿ ಗೌತಿ, ಕೊಹ್ಲಿಯನ್ನ ಹಗ್ ಮಾಡಿದ್ದೇ ಸೆನ್ಸೇಷನ್ ಸೃಷ್ಟಿಸಿತ್ತು. ಆ ಬಳಿಕ 2ನೇ ಬಾರಿ ಮುಖಾಮುಖಿಯಾದಾಗ ಕೊಲ್ಕತ್ತಾ ಮೈದಾನದಲ್ಲಿ ಆತ್ಮೀಯ ಮಾತುಕತೆ ನಡೆಸಿ ಗಮನ ಸೆಳೆದಿದ್ರು.
ಇಗೋ ಸಮಸ್ಯೆ
ಐಪಿಎಲ್ನಲ್ಲಿ ಇಬ್ಬರೂ ಒಂದಾದಂತೆ ಕಂಡರೂ ಈ ಡೆಲ್ಲಿ ಬಾಯ್ಸ್ಗೆ ತೀವ್ರವಾದ ಇಗೋ ಸಮಸ್ಯೆ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ವಿಶ್ವಕಪ್ ಗೆದ್ದ ಬೆನ್ನಲ್ಲೇ ಕೊಹ್ಲಿ ಟಿ20ಗೆ ಗುಡ್ ಬೈ ಹೇಳಿದ್ದೂ ಕೂಡ ಗಂಭೀರ್ ಎಂಟ್ರಿಯ ಕಾರಣಕ್ಕೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಇದೀಗ ಇಗೋ ಹಾಗೂ ಇನ್ಸೆಕ್ಯುರಿಟಿಯ ಪ್ರಶ್ನೆ ಆರಂಭದಲ್ಲೇ ಹುಟ್ಟಿದೆ. ಹೀಗಾಗಿ ಮುಂದೆ ಕೊಹ್ಲಿ -ಗಂಭೀರ್ ಭಾಂದವ್ಯ ಹೇಗಿರುತ್ತೆ ಅನ್ನೋದು ತೀವ್ರವಾದ ಕುತೂಹಲ ಹುಟ್ಟಿಸಿದೆ.
ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ.. ಅಪ್ಪ, ಮಗ ಕೈ ಕೈ ಹಿಡ್ಕೊಂಡು ರೈಲಿಗೆ ತಲೆಕೊಟ್ಟು ದಾರುಣ ಸಾವು -ವಿಡಿಯೋ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟೀಮ್ ಇಂಡಿಯಾ ಕೋಚ್ ಆಗಿ ಗಂಭೀರ್ ನೇಮಕ
ಡ್ರೆಸ್ಸಿಂಗ್ ರೂಮ್ನಲ್ಲಿ ಗುಂಪುಗಾರಿಕೆ ಶುರುವಾಗುತ್ತಾ?
ಕೊಹ್ಲಿ-ಗಂಭೀರ್ ಬಾಂಧವ್ಯದ ಮೇಲೆ ಎಲ್ಲರ ಕಣ್ಣು
ಗಂಭೀರ್ ಕೋಚ್ ಹುದ್ದೆಗೇರ್ತಿದ್ದಂತೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ನಡುವಿನ ಬಾಂಧವ್ಯ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಹೆಚ್ಚಾಗ್ತಿದೆ. ಅಹಂಕಾರ, ಇನ್ಸೆಕ್ಯುರಿಟಿಯಿಂದಾಗಿ ಡ್ರೆಸ್ಸಿಂಗ್ ರೂಮ್ನಲ್ಲಿ ಗುಂಪುಗಾರಿಕೆ ಶುರುವಾಗುತ್ತಾ ಅನ್ನೋ ಆತಂಕ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಆ 3 ಘಟನೆಗಳು.
ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಹುದ್ದೆಗೇರಿದ್ದಾಗಿದೆ. ಹೆಡ್ ಮಾಸ್ಟರ್ ಹುದ್ದೆ ಅಲಂಕರಿಸಿರೋ ಗಂಭೀರ್ ಕಠಿಣ ಹಾದಿಯಲ್ಲಿ ಸಾಗಬೇಕಿದೆ. 4 ಐಸಿಸಿ ಟ್ರೋಫಿ ಗೆಲ್ಲೋ ಟಫ್ ಟಾಸ್ಕ್ ಜೊತೆಗೆ ತಂಡದಲ್ಲಿ ಇಗೋ ಮತ್ತು ಇನ್ಸೆಕ್ಯುರಿಟಿಯನ್ನ ಹೇಗೆ ಹ್ಯಾಂಡೆಲ್ ಮಾಡ್ತಾರೆ ಅನ್ನೋ ದೊಡ್ಡ ಪ್ರಶ್ನೆ ಎದುರಾಗಿದೆ. ದ್ರಾವಿಡ್ ಅವಧಿಯಲ್ಲಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ವಾತಾವರಣ ಅದ್ಭುತವಾಗಿತ್ತು. ಅದನ್ನೇ ಮುಂದುವರೆಸಿಕೊಂಡು ಹೋಗುವ ಸವಾಲು ಗಂಭೀರ್ ಮುಂದಿದೆ.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ With.. ಭಾರೀ ಸಂಚಲನ ಮೂಡಿಸಿದ ಸುಂದರಿ..!
ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಯಾವತ್ತಿಂದ ಚಾರ್ಜ್ ತೆಗೆದುಕೊಳ್ತಾರೆ ಅನ್ನೋದಕ್ಕಿಂತ, ಗೌತಮ್ ಗಂಭೀರ್-ವಿರಾಟ್ ಕೊಹ್ಲಿ ನಡುವೆ ಹೊಂದಾಣಿಕೆ ಹೇಗಿರುತ್ತೆ ಅನ್ನೋ ಚರ್ಚೆ ಕ್ರಿಕೆಟ್ ಲೋಕದಲ್ಲಿ ಜೋರಾಗಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಸ್ವಲ್ಪ ಯಡವಟ್ಟಾದ್ರು, ಡ್ರೆಸ್ಸಿಂಗ್ ರೂಮ್ ವಾತಾವರಣವೇ ಹಾಳಾಗಲಿದೆ. ಜೂನಿಯರ್ಸ್, ಸೀನಿಯರ್ಸ್ ಎನ್ನದೆ ಒಗ್ಗಟ್ಟಿನ ಸಂದೇಶ ಸಾರ್ತಿರೋ ಟೀಮ್ ಇಂಡಿಯಾ ಇಬ್ಭಾಗವಾಗಲಿದೆ. ಗುಂಪುಗಾರಿಕೆಗೆ ನಾಂದಿ ಹಾಡುವ ಸಾಧ್ಯತೆ ಇದೆ. ಇಷ್ಟೆಲ್ಲಾ ಟೆನ್ಶನ್ ಹುಟ್ಟಿಗೆ ಕಾರಣ ಆ 3 ಘಟನೆಗಳು.
ಆನ್ಫೀಲ್ಡ್ನಲ್ಲೇ ಇಬ್ಬರ ನಡುವೆ ಬಿಗ್ ಫೈಟ್
IPL 6ನೇ ಸೀಸನ್ನ ವೇಳೆ ಕೆಕೆಆರ್ ಕ್ಯಾಪ್ಟನ್ ಆಗಿದ್ದ ಗಂಭೀರ್, RCB ವಿರುದ್ಧದ ಪಂದ್ಯದಲ್ಲಿ ಔಟಾಗಿ ಹೋಗ್ತಿದ್ದ ಕೊಹ್ಲಿಯನ್ನ ಕೆಣಕಿದ್ರು. ಇದ್ರಿಂದ ಕೊಹ್ಲಿ ಕೆಂಡವಾದ್ರು. ಆನ್ಫೀಲ್ಡ್ನಲ್ಲೇ ಇಬ್ಬರ ನಡುವೆ ಫುಲ್ ವಾರ್ ನಡೀತು. ಬಿಟ್ಟರೆ ಒಬ್ಬರನ್ನೊಬ್ಬರು ಹೊಡೆದಾಡಿಕೊಂಡೆ ಬಿಡ್ತಿದ್ರು.
ಇಬ್ಬರ ನಡುವೆ ಮತ್ತೆ ಕಿರಿಕ್..!
2023ರ ಐಪಿಎಲ್ ಟೂರ್ನಿಯ ವೇಳೆ ಆನ್ಫೀಲ್ಡ್ನಲ್ಲಿ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ವಾರ್ ನಡೆದಿತ್ತು. ಇಡೀ ವಿಶ್ವವೇ ಆ ಘಟನೆಯನ್ನ ಕಣ್ಣಾರೆ ನೋಡಿತ್ತು. ಇದು ಇಷ್ಟಕ್ಕೆ ನಿಲ್ಲಲಿಲ್ಲ. ಪಂದ್ಯ ಮುಗಿದ ನಂತ್ರ ಹ್ಯಾಂಡ್ ಶೇಕ್ ವೇಳೆ, ವಿರಾಟ್ ಮತ್ತು ನವೀನ್ ನಡುವೆ ಮತ್ತೆ ಜಗಳ ಶುರುವಾಗುತ್ತೆ. ಆಗ ಇಬ್ಬರ ಜಗಳದ ನಡುವೆ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಎಂಟ್ರಿ ಕೊಡ್ತಾರೆ. ಗಂಭೀರ್ ಯಾವಾಗ ಎಂಟ್ರಿ ಆದರೋ ಕಿರಿಕ್ ಮತ್ತಷ್ಟು ಜೋರಾಗಿ ನಡೀತು. ಕೊಹ್ಲಿ – ಗಂಭೀರ್ ಇಬ್ಬರೂ ಹಾವು ಮುಂಗಸಿಯಂತೆ ಒಬ್ಬರನ್ನೊಬ್ಬರು ಬೈದಾಡಿಕೊಂಡಿದ್ರು.
ಇದನ್ನೂ ಓದಿ:ಗೌತಮ್ ಗಂಭೀರ್ಗೆ ಬಿಗ್ ಶಾಕ್.. ಮುಖ್ಯ ಕೋಚ್ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ
ಚಿನ್ನಸ್ವಾಮಿ ಫ್ಯಾನ್ಸ್ಗೆ ಗಂಭೀರ್ ಸನ್ನೆ, ಕೊಹ್ಲಿ ಕೆಂಡ
ನವೀನ್ ಉಲ್ ಹಕ್ vs ಕೊಹ್ಲಿ ನಡುವಿನ ಜಗಳಕ್ಕೆ ಮೂಲ ಕಾರಣವಾಗಿದ್ದು ಲಕ್ನೋ ಮತ್ತು ಆರ್ಸಿಬಿ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಪಂದ್ಯ. ಅಂದು ಬೆಂಗಳೂರಿನಲ್ಲಿ ಆರ್ಸಿಬಿ ತಂಡವನ್ನ ಸೋಲಿಸಿದಾಗ ಗಂಭೀರ್, ಅಭಿಮಾನಿಗಳತ್ತ ಬಾಯ್ಮುಚ್ಚಿ ಎಂಬಂತೆ ಸನ್ನೆ ಮಾಡಿದ್ರು. ಕೊಹ್ಲಿಗೆ ಸಹಿಸಲಾಗಿರಲಿಲ್ಲ. ಹೀಗಾಗಿ ಬಳಿಕ ಲಕ್ನೋನಲ್ಲಿ ಎಲ್ಎಸ್ಜಿ ತಂಡವನ್ನು ಮಣಿಸಿದಾಗ ಕೊಹ್ಲಿ, ಅದೇ ಸ್ಟೈಲ್ನಲ್ಲಿ ಗಂಭೀರ್ಗೆ ತಿರುಗೇಟು ನೀಡಿದ್ರು.
ಈ ಮೂರು ಕಿತ್ತಾಟಗಳೇ ಸದ್ಯ ಕೊಹ್ಲಿ – ಗಂಭೀರ್ ಭಾಂದವ್ಯ ಹೇಗಿರುತ್ತೆ ಅನ್ನೋ ಪ್ರಶ್ನೆ ಹುಟ್ಟಿಸಿವೆ. ಕಳೆದ ಐಪಿಎಲ್ ಟೂರ್ನಿ ವೇಳೆ ಇಬ್ಬರ ನಡುವೆ ಏನೂ ನಡೆದೇ ಇಲ್ಲವೆಂಬಂತೆ ಇಬ್ಬರೂ ನಡೆದುಕೊಂಡಿದ್ದಾರೆ. ಈ ಸೀಸನ್ನ ಕೆಕೆಆರ್-ಆರ್ಸಿಬಿ ನಡುವಿನ ಮೊದಲ ಪಂದ್ಯದಲ್ಲಿ ಗೌತಿ, ಕೊಹ್ಲಿಯನ್ನ ಹಗ್ ಮಾಡಿದ್ದೇ ಸೆನ್ಸೇಷನ್ ಸೃಷ್ಟಿಸಿತ್ತು. ಆ ಬಳಿಕ 2ನೇ ಬಾರಿ ಮುಖಾಮುಖಿಯಾದಾಗ ಕೊಲ್ಕತ್ತಾ ಮೈದಾನದಲ್ಲಿ ಆತ್ಮೀಯ ಮಾತುಕತೆ ನಡೆಸಿ ಗಮನ ಸೆಳೆದಿದ್ರು.
ಇಗೋ ಸಮಸ್ಯೆ
ಐಪಿಎಲ್ನಲ್ಲಿ ಇಬ್ಬರೂ ಒಂದಾದಂತೆ ಕಂಡರೂ ಈ ಡೆಲ್ಲಿ ಬಾಯ್ಸ್ಗೆ ತೀವ್ರವಾದ ಇಗೋ ಸಮಸ್ಯೆ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ವಿಶ್ವಕಪ್ ಗೆದ್ದ ಬೆನ್ನಲ್ಲೇ ಕೊಹ್ಲಿ ಟಿ20ಗೆ ಗುಡ್ ಬೈ ಹೇಳಿದ್ದೂ ಕೂಡ ಗಂಭೀರ್ ಎಂಟ್ರಿಯ ಕಾರಣಕ್ಕೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಇದೀಗ ಇಗೋ ಹಾಗೂ ಇನ್ಸೆಕ್ಯುರಿಟಿಯ ಪ್ರಶ್ನೆ ಆರಂಭದಲ್ಲೇ ಹುಟ್ಟಿದೆ. ಹೀಗಾಗಿ ಮುಂದೆ ಕೊಹ್ಲಿ -ಗಂಭೀರ್ ಭಾಂದವ್ಯ ಹೇಗಿರುತ್ತೆ ಅನ್ನೋದು ತೀವ್ರವಾದ ಕುತೂಹಲ ಹುಟ್ಟಿಸಿದೆ.
ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ.. ಅಪ್ಪ, ಮಗ ಕೈ ಕೈ ಹಿಡ್ಕೊಂಡು ರೈಲಿಗೆ ತಲೆಕೊಟ್ಟು ದಾರುಣ ಸಾವು -ವಿಡಿಯೋ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್