/newsfirstlive-kannada/media/post_attachments/wp-content/uploads/2024/07/KL-Rahul_Gambhir.jpg)
ಟೀಮ್​ ಇಂಡಿಯಾ ಹೊಸ ಕೋಚ್​ ಆಗಿ ಗೌತಮ್​ ಗಂಭೀರ್​ ನೇಮಕ ಆಗಿದ್ದಾರೆ. ಈಗ ಕೋಚ್​​ ಗಂಭೀರ್​​ ಸಾರಥ್ಯದಲ್ಲೇ ಕೆ.ಎಲ್​ ರಾಹುಲ್​ ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಯೆಸ್​​, ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಗಂಭೀರ್ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಸರಣಿಯಿಂದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಮತ್ತು ಬುಮ್ರಾ ರೆಸ್ಟ್​ ಕೇಳಿದ್ದಾರೆ. ಹಾಗಾಗಿ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಟಿ20 ಕ್ರಿಕೆಟ್​ನಿಂದ ರಾಹುಲ್​ಗೆ ಕೊಕ್​​..?
ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾವನ್ನು ಮುನ್ನಡೆಸೋ ಅವಕಾಶ ಸಿಕ್ಕರೂ ರಾಹುಲ್​ಗೆ ಮತ್ತೊಂದು ಶಾಕಿಂಗ್​ ನ್ಯೂಸ್​ ಇದೆ. ಕೆ.ಎಲ್​ ರಾಹುಲ್​ ಇತ್ತೀಚೆಗೆ ನಡೆದ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿರಲಿಲ್ಲ. ಇದಕ್ಕೆ ಕಾರಣ ರಾಹುಲ್​ ಸ್ಟ್ರೈಕ್​ ರೇಟ್​ ಮತ್ತು ಸ್ಲೋ ಇನ್ನಿಂಗ್ಸ್​. ಈಗಾಗಲೇ ಟೀಮ್​ ಇಂಡಿಯಾಗೆ ಟಿ20 ಕ್ರಿಕೆಟ್​ನಲ್ಲಿ ಎಲ್ಲಾ ಸ್ಲಾಟ್​ಗೂ ಹೆಚ್ಚು ಆಪ್ಷನ್​​​ಗಳು ಇವೆ. ಹಾಗಾಗಿ ರಾಹುಲ್​ ಅವರನ್ನು ಟಿ20 ಕ್ರಿಕೆಟ್​ನಿಂದ ದೂರ ಇಡೋ ಪ್ಲಾನ್​​ ಗಂಭೀರ್​ ಅವರದ್ದು.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮೂಲಕ ಭಾರತ ತಂಡಕ್ಕೆ ಹೊಸ ನಾಯಕ ಬೇಕಿದೆ. ಹೊಸ ನಾಯಕ ಯಾರು ಅನ್ನೋ ಪ್ರಶ್ನೆಗೆ ಹಾರ್ದಿಕ್ ಪಾಂಡ್ಯ ಹೆಸರು ಕೇಳಿ ಬಂದಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us