ಇಂದಿಗೂ ಮುಂದುವರಿದ ಕೊಹ್ಲಿ, ಗಂಭೀರ್ ಜಗಳ
ಮತ್ತೆ ಆರ್ಸಿಬಿ ಕಾಲೆಳೆದ ಗೌತಮ್ ಗಂಭೀರ್..!
ಒಂದು ಕಪ್ ಗೆದ್ದಿಲ್ಲ ಅಂದ್ರೂ ಎಷ್ಟು ಕೊಬ್ಬು ಎಂದಿದ್ರು!
ಇಂದು ಎಂ.ಎ ಚಿನ್ನಸ್ವಾಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲಲು ಎರಡು ತಂಡಗಳು ಎದುರು ನೋಡುತ್ತಿವೆ. ಇತ್ತೀಚೆಗಷ್ಟೇ ಗೌತಮ್ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತೊರೆದಿದ್ದು, ಮತ್ತೆ ಕೆಕೆಆರ್ಗೆ ವಾಪಸ್ಸಾಗಿದ್ದಾರೆ. ಇದೇ ಸಂದರ್ಭದಲ್ಲಿ ಗಂಭೀರ್ ಮಾತಾಡಿರೋ ವಿಡಿಯೋ ಒಂದು ವೈರಲ್ ಆಗಿದೆ.
ನನಗೆ ಆರ್ಸಿಬಿಯನ್ನ ಕಂಡ್ರೆ ಆಗಲ್ಲ. ನಾನು ಇಂದಿಗೂ ಎಂದೆಂದಿಗೂ ಆರ್ಸಿಬಿಯನ್ನು ಸೋಲಿಸೋಕೆ ಇಷ್ಟಪಡ್ತೀನಿ. ಒಂದೇ ಒಂದು ಟ್ರೋಫಿ ಗೆದ್ದಿಲ್ಲ ಅಂದ್ರೂ ಅವರಿಗೆ ಆ್ಯಟಿಟ್ಯೂಡ್ ಜಾಸ್ತಿ. ಕ್ರಿಸ್ ಗೇಲ್, ಕೊಹ್ಲಿ, ಎಬಿ ಡಿವಿಲಿಯರ್ಸ್ ಇದಾರೆ ಎಂದು ಕೊಬ್ಬು ಎಂದಿರೋ ವಿಡಿಯೋ ಇದಾಗಿದೆ.
Gautam Gambhir talking about facing RCB. pic.twitter.com/JO0QAbz8TI
— Mufaddal Vohra (@mufaddal_vohra) March 29, 2024
ಕೊಹ್ಲಿ, ಗಂಭೀರ್ ಮಧ್ಯೆ ಜಗಳ?
ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಣ ಜಗಳ ಹೊಸದಲ್ಲ. ಐಪಿಎಲ್ 2013 ಟೂರ್ನಿಯಲ್ಲಿ ಗಂಭೀರ್ ಕೆಕೆಆರ್ ಕ್ಯಾಪ್ಟನ್ ಆಗಿದ್ದರು. ಅಂದು ಬೆಂಗಳೂರಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪತನವಾದಾಗ ಗಂಭೀರ್ ಅತಿಯಾಗಿ ಸಂಭ್ರಮಿಸಿದ್ದರು. ಬಳಿಕ ಕೊಹ್ಲಿ, ಗಂಭೀರ್ ಮಧ್ಯೆ ಜಗಳ ನಡೆದಿತ್ತು. ಅಂದಿನಿಂದ ಇಂದಿನವರೆಗೂ ಗಂಭೀರ್ ಮತ್ತು ಕೊಹ್ಲಿ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಇದು ಐಪಿಎಲ್ 2023 ಟೂರ್ನಿಯಲ್ಲೂ ನಡೆದಿತ್ತು. ಕೊಹ್ಲಿ ಕಾಲ್ಕೆರೆದು ಜಗಳ ಮಾಡಲು ಗೌತಮ್ ಗಂಭೀರ್ ಕಾಯುತ್ತಲೇ ಇರುತ್ತಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಫೋಟೋ ಬಿಡುಗಡೆ; ₹10 ಲಕ್ಷ ನಗದು ಬಹುಮಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದಿಗೂ ಮುಂದುವರಿದ ಕೊಹ್ಲಿ, ಗಂಭೀರ್ ಜಗಳ
ಮತ್ತೆ ಆರ್ಸಿಬಿ ಕಾಲೆಳೆದ ಗೌತಮ್ ಗಂಭೀರ್..!
ಒಂದು ಕಪ್ ಗೆದ್ದಿಲ್ಲ ಅಂದ್ರೂ ಎಷ್ಟು ಕೊಬ್ಬು ಎಂದಿದ್ರು!
ಇಂದು ಎಂ.ಎ ಚಿನ್ನಸ್ವಾಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ರೋಚಕ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲಲು ಎರಡು ತಂಡಗಳು ಎದುರು ನೋಡುತ್ತಿವೆ. ಇತ್ತೀಚೆಗಷ್ಟೇ ಗೌತಮ್ ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ತೊರೆದಿದ್ದು, ಮತ್ತೆ ಕೆಕೆಆರ್ಗೆ ವಾಪಸ್ಸಾಗಿದ್ದಾರೆ. ಇದೇ ಸಂದರ್ಭದಲ್ಲಿ ಗಂಭೀರ್ ಮಾತಾಡಿರೋ ವಿಡಿಯೋ ಒಂದು ವೈರಲ್ ಆಗಿದೆ.
ನನಗೆ ಆರ್ಸಿಬಿಯನ್ನ ಕಂಡ್ರೆ ಆಗಲ್ಲ. ನಾನು ಇಂದಿಗೂ ಎಂದೆಂದಿಗೂ ಆರ್ಸಿಬಿಯನ್ನು ಸೋಲಿಸೋಕೆ ಇಷ್ಟಪಡ್ತೀನಿ. ಒಂದೇ ಒಂದು ಟ್ರೋಫಿ ಗೆದ್ದಿಲ್ಲ ಅಂದ್ರೂ ಅವರಿಗೆ ಆ್ಯಟಿಟ್ಯೂಡ್ ಜಾಸ್ತಿ. ಕ್ರಿಸ್ ಗೇಲ್, ಕೊಹ್ಲಿ, ಎಬಿ ಡಿವಿಲಿಯರ್ಸ್ ಇದಾರೆ ಎಂದು ಕೊಬ್ಬು ಎಂದಿರೋ ವಿಡಿಯೋ ಇದಾಗಿದೆ.
Gautam Gambhir talking about facing RCB. pic.twitter.com/JO0QAbz8TI
— Mufaddal Vohra (@mufaddal_vohra) March 29, 2024
ಕೊಹ್ಲಿ, ಗಂಭೀರ್ ಮಧ್ಯೆ ಜಗಳ?
ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಣ ಜಗಳ ಹೊಸದಲ್ಲ. ಐಪಿಎಲ್ 2013 ಟೂರ್ನಿಯಲ್ಲಿ ಗಂಭೀರ್ ಕೆಕೆಆರ್ ಕ್ಯಾಪ್ಟನ್ ಆಗಿದ್ದರು. ಅಂದು ಬೆಂಗಳೂರಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪತನವಾದಾಗ ಗಂಭೀರ್ ಅತಿಯಾಗಿ ಸಂಭ್ರಮಿಸಿದ್ದರು. ಬಳಿಕ ಕೊಹ್ಲಿ, ಗಂಭೀರ್ ಮಧ್ಯೆ ಜಗಳ ನಡೆದಿತ್ತು. ಅಂದಿನಿಂದ ಇಂದಿನವರೆಗೂ ಗಂಭೀರ್ ಮತ್ತು ಕೊಹ್ಲಿ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಇದು ಐಪಿಎಲ್ 2023 ಟೂರ್ನಿಯಲ್ಲೂ ನಡೆದಿತ್ತು. ಕೊಹ್ಲಿ ಕಾಲ್ಕೆರೆದು ಜಗಳ ಮಾಡಲು ಗೌತಮ್ ಗಂಭೀರ್ ಕಾಯುತ್ತಲೇ ಇರುತ್ತಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಫೋಟೋ ಬಿಡುಗಡೆ; ₹10 ಲಕ್ಷ ನಗದು ಬಹುಮಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ