/newsfirstlive-kannada/media/post_attachments/wp-content/uploads/2025/02/nayana-nagaraj1.jpg)
ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್​​ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಬಂದ ಮೊದಲ ಎಪಿಸೋಡ್​ನಿಂದ ಗಿಣಿರಾಮ ಧಾರಾವಾಹಿಯು ಎಲ್ಲರ ನೆಚ್ಚಿನ ಸೀರಿಯಲ್ ಆಗಿತ್ತು.
/newsfirstlive-kannada/media/post_attachments/wp-content/uploads/2023/06/ginirama-2.jpg)
ಬಣ್ಣದ ಜಗತ್ತು ನೋಡೋಕೆ ತುಂಬಾನೇ ಕಲರ್​ಫುಲ್​. ಆದ್ರೆ, ಅದಕ್ಕೆ ಇನ್ನೊಂದು ಮುಖವೇ ಇದೇ. ಟಿವಿಯಲ್ಲಿ ಕಾಣಿಸುವಂತೆ ಅಲ್ಲಿ ಸುಂದರ ವಾತಾವರಣ ಇರೋದಿಲ್ಲ. ಕಿವಿಗೆ ಇಂಪಾಗುವ ಡೈಲಾಗ್ಗಳು ಇರೋದಿಲ್ಲ. ಪರದೆಯಲ್ಲಿ ಕಾಣಿಸುವಂತಹ ಶುಭ್ರತೆ ಅಂತೂ ಇರೋದೇ ಇಲ್ಲ ಅಂತಾ ಕಿರುತೆರೆಯ ಜನಪ್ರಿಯ ನಟಿ ಆರೋಪಗಳ ಮಳೆ ಸುರಿದಿದ್ದಾರೆ.
/newsfirstlive-kannada/media/post_attachments/wp-content/uploads/2023/06/ginirama-1.jpg)
ಹೌದು, ನಯನಾ ನಾಗರಾಜ್ ಗಿಣಿರಾಮ ಸೀರಿಯಲ್​​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಆದರೆ ಇದೀಗ ಸೀರಿಯಲ್​ನಿಂದ ನಟಿ ಬ್ಯಾನ್​ ಆಗಿದ್ದಾರಂತೆ. ಗಿಣಿರಾಮ ಸೀರಿಯಲ್​ ಮಾಡೋವಾಗ ಎಷ್ಟು ಮಾನಸಿಕವಾಗಿ ಕುಗ್ಗಿದ್ದೆ ಅಂತ ಖುದ್ದು ನಯನಾ ನಾಗರಾಜ್ ಅವರೇ ಕೇಳಿಕೊಂಡಿದ್ದಾರೆ. ಅದರಲ್ಲೂ ನಟಿ ನಯನಾ ನಾಗರಾಜ್ ಎಷ್ಟು ಆಡಿಷನ್ ಕೊಟ್ಟರು ರಿಜೆಕ್ಟ್​ ಆಗುತ್ತಿದ್ದರಂತೆ. ಖಾಸಗಿ ಸಂದರ್ಶನದಲ್ಲಿ ಮಾತಾಡಿದ ನಟಿ ನಯನಾ ನಾಗರಾಜ್ ಅವರು, ಪಾಪ ಪಾಂಡು ಧಾರಾವಾಹಿಯಲ್ಲಿ ಚಾರು ಪಾತ್ರಕ್ಕೆ ಆಡಿಷನ್​ ಮಾಡು ಅಂತ ಹೇಳಿದ್ದರು. ಆಗ ಪದೇ ಪದೇ ಕರೆದು ಕರೆದು.. ಆಡಿಷನ್​ ಕೊಡಿಸಿದ್ದರು. ಆಗ ನಾನು ಸರ್​ಗೆ ಕೇಳಿದೆ, ಆಗ ಚಂದ್ರ ಸರ್​ ಹೇಳಿದ್ರು, ನನಗೆ ನೀನು ಚಾರು ಪಾತ್ರ ಮಾಡಬೇಕು ಅಂತ ಆಸೆ ಇದೆ. ಆದ್ರೆ ನಿನ್ನ ಹಲ್ಲು ಸರಿ ಇಲ್ಲ ಅಂತ ಚಾನೆಲ್​ ಅವರು ಹೇಳುತ್ತಿದ್ದಾರೆ. ಇನ್ನೊಂದು ಹುಡುಗಿಗೆ ಕೂದಲೇ ಇಲ್ಲ, ನೋಡೋದಕ್ಕೆ ಸುಮಾರ್ ಆಗಿ ಇದ್ದಾಳೆ ಏಕೆ ಬೇಕು ಅಂತ ಹೇಳಿದ್ದಾರೆ ಅಂತ ಹೇಳಿದ್ರು. ಆಗ ನನಗೆ 9 ಸ್ಕ್ರೀನ್​ ಟೆಸ್ಟ್​ ಕೊಡಿಸಿದ್ದರು. ಅಲ್ಲಿಂದ ನನ್ನ ಜರ್ನಿ ಶುರು ಆಯ್ತು. ಯಾವಾಗ ನನ್ನ ಹಲ್ಲು ಸರಿ ಇಲ್ಲ ಅಂತ ರಿಜೆಕ್ಟ್​ ಮಾಡಿದವರು ಮತ್ತೊಂದು ಟಾಪ್​ ಸೀರಿಯಲ್​ಗೆ ಅವರೇ ಕರೆದ್ರು. ಇದರ ಬಗ್ಗೆ ನನಗೆ ಹೆಮ್ಮೆ ಇದೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us