ಅಂದು ಗಿಣಿರಾಮ, ಇಂದು ನಿನಗಾಗಿ.. ಮತ್ತೆ ಒಂದಾದ ತಾಯಿ- ಮಗ; ವೀಕ್ಷಕರು ಫುಲ್ ಖುಷ್!

author-image
Veena Gangani
Updated On
ಅಂದು ಗಿಣಿರಾಮ, ಇಂದು ನಿನಗಾಗಿ.. ಮತ್ತೆ ಒಂದಾದ ತಾಯಿ- ಮಗ; ವೀಕ್ಷಕರು ಫುಲ್ ಖುಷ್!
Advertisment
  • ರಚನಾ-ಜೀವ ಮ್ಯಾರೇಜ್​ ಸ್ಟೋರಿಗೆ ಸಿಕ್ಕಿದೆ ಹೊಸ ಟ್ವಿಸ್ಟ್..
  • ಗಿಣಿರಾಮ ಧಾರಾವಾಹಿ ಮೂಲಕ ಫೇಮಸ್​ ಆಗಿದ್ದ ಅಮ್ಮ-ಮಗ
  • ನಿನಗಾಗಿ ಧಾರಾವಾಹಿಗೆ ಹೊಸ ಆಯಾಮ ನೀಡಿದ್ದಾರೆ ನಿರ್ದೇಶಕರು

ನಿನಗಾಗಿ ಧಾರಾವಾಹಿ ಸಿನಿಮಾ ರೀತಿ ಪ್ರೋಮೋ ಮೂಲಕ ಸೌಂಡ್​ ಮಾಡ್ತಿದೆ. ಹೊಸ ಅಧ್ಯಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಪ್ರಾರಂಭದಿಂದಲೂ ನಿನಗಾಗಿ ವಿಭಿನ್ನತೆಯನ್ನ ಕಟ್ಟಿಕೊಡ್ತಿದೆ. ನಾಯಕಿ ಸೂಪರ್​ ಸ್ಟಾರ್​ ರಚಿತಾ ಲೈಫ್​ ನರಕ ಆಗಿರುತ್ತೆ. ಅದರಿಂದ ಹೇಗೆ ರಚ್ಚು ಹೊರ ಬರ್ತಾಳೆ, ನಾಯಕ ಜೀವ ರಚ್ಚುಗೆ ಯಾವ ರೀತಿ ಸಾಥ್​ ಕೊಡ್ತಾನೆ ಅನ್ನೋದರ ಮೇಲೆ ಸ್ಟೋರಿ ಸಾಗುತ್ತಿತ್ತು. ರಚ್ಚು-ಜೀವ ಮ್ಯಾರೇಜ್​ ಸ್ಟೋರಿಗೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಕಥೆನ ಲ್ಯಾಗ್​ ಮಾಡ್ದೇ, ಧಾರಾವಾಹಿಗೆ ಹೊಸ ಆಯಾಮ ನೀಡಿದ್ದಾರೆ ನಿರ್ದೇಶಕರು.

ಇದನ್ನೂ ಓದಿ: ಜಸ್ಟ್‌ 7 ತಿಂಗಳಲ್ಲಿ 25 ಮದುವೆ.. 23 ವರ್ಷದ ಸುಂದರಿ ಸಂಚು ಬಾಲಿವುಡ್‌ ಸಿನಿಮಾನೂ ಮೀರಿಸಿದ ಸ್ಟೋರಿ!

publive-image

ಇಷ್ಟು ದಿನ ಜೀವ ಯಾರು ಏನು? ಹಿನ್ನೆಲೆ ಬಗ್ಗೆ ಮಾಹಿತಿ ಇರ್ಲಿಲ್ಲ. ಈಗ ಜೀವನ ಪ್ಲ್ಯಾಶ್​ ಬ್ಯಾಕ್​ ಸ್ಟೋರಿ ತೆರೆದುಕೊಳ್ತಿದೆ. ಎಲ್ಲದಕ್ಕಿಂದ ಹೆಚ್ಚಾಗೆ ಪ್ರೋಮೋಗಳು ಅದ್ಭುತವಾಗಿ ಮೂಡಿಬಂದಿದ್ದು, ಪಕ್ಕಾ ಮಾಸ್​ ಆಗಿರೋ ಒಂದೊಳ್ಳೆ ಕಮರ್ಸಿಯಲ್​ ಸಿನಿಮಾ ನೋಡಿದ ಅನುಭವ ಕೊಡ್ತಿವೆ. ವಿಶೇಷ ಅಂದ್ರೇ ಈ ಹಿಂದೆ ಗಿಣಿರಾಮ ಧಾರಾವಾಹಿಯಲ್ಲಿ ಅಮ್ಮ ಮಗನಾಗಿ ಅಭಿನಯಿಸಿದ್ದ ಸುಜಾತ ಕುರಹಟ್ಟಿ ಹಾಗೂ ರಿತ್ವಿಕ್​ ಮಠದ್​ ಮತ್ತೊಮ್ಮೆ ತಾಯಿ ಮಗನಾಗಿ ಬಣ್ಣ ಹಚ್ಚಿದ್ದಾರೆ.

publive-image

ಇನ್ನು ಜೀವ ತಂಗಿ ದೇವಿ ಪಾತ್ರಕ್ಕೆ ಅಕ್ಷಯ ರಾಘವನ್ ಬಣ್ಣ ಹಚ್ಚಿದ್ದಾರೆ. ಇವರು ​ಲಕ್ಷ್ಮೀ ಟಿಫಿನ್​ ರೂಮ್​ ಧಾರಾವಾಹಿಯಲ್ಲಿ ಮುಖ್ಯವಾದ ಪಾತ್ರ ಮಾಡಿದ್ರು. ವರ್ಷದ ನಂತರ ಮತ್ತೆ ನಿನಗಾಗಿ ಮೂಲಕ ಮರಳಿದ್ದಾರೆ. ಅದೇ ರೀತಿ ರಾಣ ಪಾತ್ರಧಾರಿ ಪ್ರದೀಪ್​ ರಾಜ್​ ಅಭಿನಯಿಸುತ್ತಿದ್ದಾರೆ. 10 ವರ್ಷಗಳ ಬಳಿಕ ಕಮ್​ಬ್ಯಾಕ್​ ಆಗಿದ್ದಾರೆ. ಈ ಹಿಂದೆ ಇಂಡಿಯನ್​ ರಿಯಾಲಿಟಿ ಶೋ ಮೂಲಕ ಫೇಮಸ್​ ಆಗಿದ್ರು. ಜೊತೆಗೆ ಮೇಘಮಯೂರಿ ಎಂಬ ಧಾರಾವಾಹಿಯಲ್ಲೂ ಅಭಿನಯಿಸಿದ್ರು.

publive-image

ಇನ್ಮುಂದೆ ದೇವರಂತ ಅಪ್ಪನಿಂದ ಜೀವ ದೂರ ಆಗಿದ್ದು ಏಕೆ? ಕುಟುಂಬ ತೊರಿಯಲು ಬಲವಾದ ಕಾರಣ ಏನು ಎಂಬುದು ತೆರೆದುಕೊಳ್ಳಲಿದೆ. ಒಟ್ಟಿನಲ್ಲಿ ಹೊಸ ಅಧ್ಯಾಯ ರೋಮಾಂಚನ ಸೃಷ್ಟಿಸ್ತಿದ್ದು, ಸೀರಿಯಲ್​ ಅಂದರೆ ಹೀಗೆ​ ಇರ್ಬೇಕು ಅಂತಿದ್ದಾರೆ ವೀಕ್ಷಕರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment