ಮಾಂಸದೂಟ ತಿಂದ ಕೆಲವೇ ಕ್ಷಣದಲ್ಲಿ ಬಾಲಕಿಯರಲ್ಲಿ ವಾಂತಿ
ಈ ಮದರಸಾದಲ್ಲಿ ಎಷ್ಟು ಕೆ.ಜಿ ಮಟನ್ ಊಟ ಮಾಡಲಾಗಿತ್ತು?
ಆಸ್ಪತ್ರೆಗೆ ದಾಖಲು ಮಾಡಿದವರ ಪೈಕಿ ಬಾಲಕಿಯೊಬ್ಬಳು ಸಾವು
ಹೈದರಾಬಾದ್: ಕೆಟ್ಟು ಹೋದ ಕುರಿ ಮಾಂಸದ ಆಹಾರ ತಿಂದು ಓರ್ವ ಬಾಲಕಿ ಸಾವನ್ನಪ್ಪಿದ್ದು 10 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಅಜಿತ್ ಸಿಂಗ್ ನಗರದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಪಟಾಕಿ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ.. ಬ್ಲಾಸ್ಟ್ ಆದ ರಭಸಕ್ಕೆ ಕುಸಿದು ಬಿದ್ದ ಬಿಲ್ಡಿಂಗ್.. ನಾಲ್ವರು ಸಾವು
ಕರಿಶ್ಮಾ ಫುಡ್ಪಾಯಿಸನ್ನಿಂದ ಮೃತಪಟ್ಟ ಬಾಲಕಿ. ಇನ್ನು 10 ಬಾಲಕಿಯರು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಜಿತ್ ಸಿಂಗ್ ನಗರದಲ್ಲಿರುವ ಮದರಸಾ ಚಾರಿಟೇಬಲ್ ಟ್ರಸ್ಟ್ನಲ್ಲಿ ಸುಮಾರು 100 ಕೆ.ಜಿಯಷ್ಟು ಕುರಿ ಮಾಂಸದಿಂದ ಊಟ ತಯಾರು ಮಾಡಲಾಗಿತ್ತು. ಈ ಊಟವನ್ನು ತಿಂದಂತಹ ಮಕ್ಕಳು ಕೆಲವೇ ಕ್ಷಣದಲ್ಲಿ ವಾಂತಿ ಮಾಡಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ನನ್ನೂರು ಕರ್ನಾಟಕ, ಈ ನಾಡನ್ನ ಬಿಟ್ಟು ಎಲ್ಲಿಗೂ ಹೋಗಲ್ಲ’ -DGP ಕಮಲ್ ಪಂತ್
ತಕ್ಷಣ ಬಾಲಕಿಯರನ್ನೆಲ್ಲ ಅವರ ಪೋಷಕರು, ಸ್ಥಳೀಯರು ಸೇರಿ ಆಸ್ಪತ್ರೆ ದಾಖಲು ಮಾಡಿದ್ದಾರೆ. ಈ ವೇಳೆ ಓರ್ವ ಬಾಲಕಿ ಫುಡ್ಪಾಯಿಸನ್ನಿಂದ ಸಾವನ್ನಪ್ಪಿದ್ದು ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳು ತಿಂದಂತಹ ಕುರಿ ಮಾಂಸವು ಕೆಟ್ಟು ಹೋಗಿದ್ರೂ ಅದನ್ನು ಹಾಗೇ ಅಡುಗೆ ಮಾಡಿದ್ದಾರೆ. ಇದೇ ಬಾಲಕಿಯ ಸಾವಿಗೆ ಕಾರಣವಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ನಿಖರವಾದ ಕಾರಣ ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಾಂಸದೂಟ ತಿಂದ ಕೆಲವೇ ಕ್ಷಣದಲ್ಲಿ ಬಾಲಕಿಯರಲ್ಲಿ ವಾಂತಿ
ಈ ಮದರಸಾದಲ್ಲಿ ಎಷ್ಟು ಕೆ.ಜಿ ಮಟನ್ ಊಟ ಮಾಡಲಾಗಿತ್ತು?
ಆಸ್ಪತ್ರೆಗೆ ದಾಖಲು ಮಾಡಿದವರ ಪೈಕಿ ಬಾಲಕಿಯೊಬ್ಬಳು ಸಾವು
ಹೈದರಾಬಾದ್: ಕೆಟ್ಟು ಹೋದ ಕುರಿ ಮಾಂಸದ ಆಹಾರ ತಿಂದು ಓರ್ವ ಬಾಲಕಿ ಸಾವನ್ನಪ್ಪಿದ್ದು 10 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಅಜಿತ್ ಸಿಂಗ್ ನಗರದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಪಟಾಕಿ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ.. ಬ್ಲಾಸ್ಟ್ ಆದ ರಭಸಕ್ಕೆ ಕುಸಿದು ಬಿದ್ದ ಬಿಲ್ಡಿಂಗ್.. ನಾಲ್ವರು ಸಾವು
ಕರಿಶ್ಮಾ ಫುಡ್ಪಾಯಿಸನ್ನಿಂದ ಮೃತಪಟ್ಟ ಬಾಲಕಿ. ಇನ್ನು 10 ಬಾಲಕಿಯರು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಜಿತ್ ಸಿಂಗ್ ನಗರದಲ್ಲಿರುವ ಮದರಸಾ ಚಾರಿಟೇಬಲ್ ಟ್ರಸ್ಟ್ನಲ್ಲಿ ಸುಮಾರು 100 ಕೆ.ಜಿಯಷ್ಟು ಕುರಿ ಮಾಂಸದಿಂದ ಊಟ ತಯಾರು ಮಾಡಲಾಗಿತ್ತು. ಈ ಊಟವನ್ನು ತಿಂದಂತಹ ಮಕ್ಕಳು ಕೆಲವೇ ಕ್ಷಣದಲ್ಲಿ ವಾಂತಿ ಮಾಡಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ನನ್ನೂರು ಕರ್ನಾಟಕ, ಈ ನಾಡನ್ನ ಬಿಟ್ಟು ಎಲ್ಲಿಗೂ ಹೋಗಲ್ಲ’ -DGP ಕಮಲ್ ಪಂತ್
ತಕ್ಷಣ ಬಾಲಕಿಯರನ್ನೆಲ್ಲ ಅವರ ಪೋಷಕರು, ಸ್ಥಳೀಯರು ಸೇರಿ ಆಸ್ಪತ್ರೆ ದಾಖಲು ಮಾಡಿದ್ದಾರೆ. ಈ ವೇಳೆ ಓರ್ವ ಬಾಲಕಿ ಫುಡ್ಪಾಯಿಸನ್ನಿಂದ ಸಾವನ್ನಪ್ಪಿದ್ದು ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳು ತಿಂದಂತಹ ಕುರಿ ಮಾಂಸವು ಕೆಟ್ಟು ಹೋಗಿದ್ರೂ ಅದನ್ನು ಹಾಗೇ ಅಡುಗೆ ಮಾಡಿದ್ದಾರೆ. ಇದೇ ಬಾಲಕಿಯ ಸಾವಿಗೆ ಕಾರಣವಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ನಿಖರವಾದ ಕಾರಣ ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ