/newsfirstlive-kannada/media/post_attachments/wp-content/uploads/2024/09/VINEHS-PHOGAT-CONSPIRACY.jpg)
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬಂಗಾರ ಪದಕ ಗೆಲ್ಲುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ವಿರುದ್ಧ, ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿ ಹರಿಯಾಣದ ಜಲೂನಾ ಕ್ಷೇತ್ರದಿಂದ ಟಿಕೆಟ್ ಪಡೆದಿರುವ ವಿನೇಶ್ ಪೋಗಟ್ ಈಗ ಪರ ವಿರೋಧದ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವಿನೇಶ್ ಪೋಗಟ್ಗೆ ದೇವರು ಸರಿಯಾದ ಶಿಕ್ಷೆ ನೀಡಿದ್ದಾನೆ ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ. ನನ್ನ ವಿರುದ್ಧ ನಡೆದ ಪ್ರತಿಭಟನೆ ವ್ಯವಸ್ಥಿತ ರಾಜಕೀಯ ಪಿತೂರಿ ಅನ್ನೊದಕ್ಕೆ ಈಗ ವಿನೇಶ್ ಹಾಗೂ ಭಜರಂಗ ಪೂನಿಯಾ ಕಾಂಗ್ರೆಸ್ ಸೇರಿದ್ದೇ ಸಾಕ್ಷಿ ಎಂದಿದ್ದಾರೆ.
#WATCH | "Haryana is the crown of India in the field of sports. And they stopped the wrestling activities for almost 2.5 years. Is it not true that Bajrang went to the Asian Games without trials? I want to ask those who are experts in wrestling. I want to ask Vinesh Phogat… pic.twitter.com/NQvMVS6dPF
— ANI (@ANI)
#WATCH | "Haryana is the crown of India in the field of sports. And they stopped the wrestling activities for almost 2.5 years. Is it not true that Bajrang went to the Asian Games without trials? I want to ask those who are experts in wrestling. I want to ask Vinesh Phogat… pic.twitter.com/NQvMVS6dPF
— ANI (@ANI) September 7, 2024
">September 7, 2024
ಇದನ್ನೂ ಓದಿ:ಜಯ್ ಶಾ ಸ್ಥಾನದ ಮೇಲೆ ಕಣ್ಣಿಟ್ಟ ಮೂವರು; ಆ ಪಟ್ಟಿಯಲ್ಲಿ ಓರ್ವ 3 ಪಂದ್ಯಗಳನ್ನು ಆಡಿದ ಕ್ರಿಕೆಟಿಗ
ಭಜರಂಗ ಪೂನಿಯಾ ಆಗಲಿ ವಿನೇಶ್ ಪೋಗಟ್ ಆಗಿ ಇನ್ನೊಬ್ಬರ ಸ್ಥಾನವನ್ನು ಕಿತ್ತುಕೊಂಡು ಕುಸ್ತಿ ಅಂಗಳಕ್ಕೆ ಇಳಿದಿದ್ರು. ಭಜರಂಗ ಪೂನಿಯಾ ಕಳೆದ ಏಷಿಯನ್ ಗೇಮ್ಸ್ನಲ್ಲಿ ಟ್ರಯಲ್ಸ್ ನೀಡದೇ ಭಾಗವಹಿಸಿದ್ದು ಸತ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಒಬ್ಬ ಆಟಗಾರ ಒಂದೇ ದಿನ ಎರಡು ತೂಕಗಳ ವಿಭಾಗದಲ್ಲಿ ಟ್ರಯಲ್ಸ್ ನೀಡಬಹುದೇ? ತೂಕದ ಬಳಿಕ ಐದು ಗಂಟೆಗಳ ಕಾಲ ಟ್ರಯಲ್ಸ್ ತಡೆ ಹಿಡಿಯಬಹುದೇ ಅನ್ನೋದನ್ನ ನಾನು ವಿನೇಶ್ಗೆ ಕೇಳ ಬಯಸುತ್ತೇನೆ. ನೀವು ವಂಚನೆಯಿಂದ ಒಲಿಂಪಿಕ್ಸ್ ಅಂಗಳಕ್ಕೆ ಇಳಿದ್ರಿ. ಟ್ರಯಲ್ಸ್ನಲ್ಲಿ ನಿಮ್ಮನ್ನು ಸೋಲಿಸಿದ ಹುಡುಗಿಯ ಸ್ಥಾನವನ್ನು ಕಿತ್ತುಕೊಂಡು ಪ್ಯಾರಿಸ್ ಒಲಿಂಪಿಕ್ಸ್ಗೆ ಹೋಗಿದ್ರಿ. ಹೀಗಾಗಿ ವಿನೇಶ್ಗೆ ದೇವರು ಸರಿಯಾದ ಶಿಕ್ಷೆ ಕೊಟ್ಟಿದ್ದಾನೆ ಎಂದು ಬ್ರಿಜ್ ಭೂಷಣ್ ಕಿಡಿಕಾರಿದ್ದಾರೆ.
ಇದನ್ನೂ ಓದಿ:ರಾಜಕೀಯಕ್ಕೆ ಮಹಿಳಾ ಕುಸ್ತಿಪಟು; ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ವಿನೇಶ್ ಪೋಗಟ್ ಕಣಕ್ಕೆ
‘ರಾಜಕಾರಣದ ದಾಹಕ್ಕೆ ಕುಸ್ತಿಪಟುಗಳಿಂದ ದೇಶದ್ರೋಹ’
ವಿನೇಶ್ ಪೋಗಟ್ ಹಾಗೂ ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಭಾರತೀಯ ಕುಸ್ತಿಪಟುಗಳ ಸಂಸ್ಥೆಯ ಮುಖ್ಯಸ್ಥ ಸಂಜಯ್ ಸಿಂಗ್ ಕೂಡ ಕಿಡಿಕಾರಿದ್ದಾರೆ. ಈ ಇಬ್ಬರೂ ಕ್ರೀಡಾಪಟುಗಳ ರಾಜಕೀಯ ದಾಹಕ್ಕೆ ದೇಶದ ಕ್ರೀಡಾ ವ್ಯವಸ್ಥೆಗೆ ದೊಡ್ಡ ಧಕ್ಕೆಯಾಗಿದೆ. ರಾಜಕೀಯ ಆಸೆಗೋಸ್ಕರ ಇವರು ದೇಶದ್ರೋಹದ ಕೆಲಸ ಮಾಡಿದ್ದಾರೆ. ಇವರಿಂದಾಗಿ ದೇಶ ಒಟ್ಟು 6 ಬಂಗಾರದ ಪದಕಗಳನ್ನು ಕಳೆದುಕೊಂಡಿದೆ ಎಂದು ಸಂಜಯ್ ಸಿಂಗ್ ಗುಡುಗಿದ್ದಾರೆ.
ವಿನೇಶ್ ಪೋಗಟ್ ಹಾಗೂ ಬಜರಂಗ ಪೂನಿಯಾ ಇಂದಿಗೂ ಕೂಡ ಕುಸ್ತಿಪಟುಗಳು ಎಂಬ ಶ್ಲಾಘನೆಗೆ ಒಳಪಟ್ಟಿದ್ದರು. ಆದ್ರೆ ಅವರು ಕಾಂಗ್ರೆಸ್ ಸೇರುವ ಮೂಲಕ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗೆ ಯಾರೂ ಇಂಧನಶಕ್ತಿಯಾಗಿ ನಿಂತಿದ್ದರೂ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ