ಇಂದು ರನ್ಯಾ ರಾವ್​​ ಜಾಮೀನು ಭವಿಷ್ಯ.. ನಟಿ ಪತಿಗೆ ಬಿಗ್​​ ರಿಲೀಫ್​​ ನೀಡಿದ ಹೈಕೋರ್ಟ್

author-image
Bheemappa
Updated On
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ; ರನ್ಯಾ ರಾವ್ ಜಾಮೀನು ಅರ್ಜಿ ವಜಾ
Advertisment
  • ಬಂಗಾರದ ಪ್ರಕರಣಕ್ಕೆ ಎಂಟ್ರಿ ಕೊಟ್ಟಿರುವ ಸಿಬಿಐ ಅಧಿಕಾರಿಗಳು
  • ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸದಂತೆ ಕೋರ್ಟ್​ ಆದೇಶ
  • ಅಕ್ರಮ ಚಿನ್ನದ ಚಕೋರಿ ರನ್ಯಾ ರಾವ್ ಕೇಸ್​​ನಲ್ಲಿ ಬಿಗ್​​​ ಅಪ್​ಡೇಟ್

ಇವಳು ಬಂಗಾರದ ಜಿಂಕೆ. ದುಬೈನಿಂದ ಚಿನ್ನದ ಬಿಸ್ಕತ್​​ಗಳನ್ನು ಕದ್ದು ತಂದ ಚೋರಿ. ಸುಂದರಿಯ ಸಂಪರ್ಕ ಸಚಿವರಿಗೆ ಎಣ್ಣೆಯಲ್ಲಿ ಬಿದ್ದ ಬಿಸಿ ಬಿಸಿ ಜಿಲೇಬಿ. ಕೈಗೆಲ್ಲಾ ಒಗರೊಗರು. ಸದ್ಯ ಬಂಗಾರದ ಪಂಜರ ರಹಸ್ಯ ಕೆದಕುತ್ತಿರುವ ಡಿಆರ್​​​ಐ ಅಧಿಕಾರಿಗಳಿಗೆ ಬಿಡುವಿಲ್ಲದ ಕೆಲಸ. ಚಿನ್ನದ ಮಲ್ಲಿಗೆ ರನ್ಯಾಯಣ ಇಲ್ಲಿದೆ.

ಇದು ಪ್ಯೂರ್​​​ 24 ಕ್ಯಾರೆಕ್ಟ್​​​ ಅಲ್ಲ, ಇವಳು ರೋಲ್ಡ್​ ಗೋಲ್ಡ್​. ಬೋಲ್ಡ್​ ಬ್ಯೂಟಿ ಟಿಂವಕ್ಕಿ ಸೌಂಡ್​​​ ಪ್ರದರ್ಶನವೇ ಈ ಹಕ್ಕಿಯ ಖಯಾಲಿ. ಓಲ್ಡ್ ಮಂಕ್​ ಹೀರಿದ ಹಿರಿ ಜೀವಗಳಿಗೆ ಸಣ್ಣ ಸಂಪರ್ಕವೇ ಭರ್ತಿ ಕೋಲ್ಡು. ಶೀತ, ಜ್ವರದ ಅಂದರ್​​​ಕೇ ಕಾಯಿಲೆ. ಯಾವಾಗ ಬೇಕಾದ್ರೂ ಬೆಲ್​​ ಬಾರಿಸುವ ಭಯ.

publive-image

ಚಿನ್ನದ ‘ಚೋರಿ’.. ಡಿಆರ್‌ಐ ಅಧಿಕಾರಿಗಳ ಅತಿಥಿ!

ಬಣ್ಣದ ಬದುಕಿನ ಬಣವೆ ದಾಟಿದ ಚಂದನವನದ ಚೆಂದವಳ್ಳಿ ತೋಟದ ಚೆಂದುಳ್ಳಿಗೆ ದಂಡಿ ದಂಡಿ ದುಡ್ಡಿನ ಹಂಗು. ಚಿನ್ನದ ಹೊಂಬಣ್ಣಿನಲ್ಲಿ ಮಿಂದೇಳುವ ಬಯಕೆ. ಎಲ್​​​ಡೊರಾಡೋದಲ್ಲಿ ಫಳಫಳ ಹೊಳೆಯುವ ಆತುರ, ಕಾತರಕ್ಕೆ ಕಬ್ಬಿಣದ ಸರಳಿನ ದರ್ಶನ ಆಗಿಸಿದೆ. ಅಂದ್ಹಾಗೆ ಅಕ್ರಮ ಚಿನ್ನದ ಚಕೋರಿ ರನ್ಯಾ ರಾವ್ ಕೇಸ್​​ನಲ್ಲಿ ಬಿಗ್​​​ ಅಪ್​ಡೇಟ್​​​ ಸಿಕ್ಕಿದೆ.

ರನ್ಯಾರಾವ್​​​ ಗ್ರೌಂಡ್​ ಆಫ್​ ಅರೆಸ್ಟ್​ ತೋರಿಸಿರುವ ಡಿಆರ್​ಐ ಅಧಿಕಾರಿಗಳು, ಅಕ್ರಮವಾಗಿ ಚಿನ್ನ ತಂದಿರೋದನ್ನ ಪ್ರಾಥಮಿಕವಾಗಿ ಪತ್ತೆ ಹಚ್ಚಿದ್ದಾರೆ. ರನ್ಯಾ ಯಾವುದೇ ಬ್ಯಾಗೇಜ್​ಗಳ ಡಿಕ್ಲೇರೇಷನ್ ಮಾಡಿರಲಿಲ್ಲ. ಅಕೆಯ ಹೇಳಿಕೆ ಪ್ರಕಾರ ಉದ್ದೇಶ ಪೂರ್ವಕವಾಗಿ ಚಿನ್ನ ತಂದಿದ್ದಾಳೆ ಅಂತ ಒಟ್ಟು 11 ಅಂಶಗಳನ್ನ ಅಧಿಕಾರಿಗಳು ತೋರಿಸಿದ್ದಾರೆ.

ಬಂಗಾರದ ಬೇಟೆ ಸುತ್ತ!

  • ಮಹಜರು ವೇಳೆ ಅಕೆಯ ಸ್ಟೇಟ್​ಮೆಂಟ್​ ರೆಕಾರ್ಡ್ ಆಗಿದೆ
  • ಅಕ್ರಮವಾಗಿ ಚಿನ್ನ ಸಾಗಾಟ ಸಾಬೀತು ಎಂದ ಅಧಿಕಾರಿಗಳು
  • ಕಸ್ಟಮ್ ಆ್ಯಕ್ಟ್ ವಿವಿಧ ಸೆಕ್ಷನ್​ಗಳ ಅಡಿ ಸ್ಮಗ್ಲಿಂಗ್ ಸಾಬೀತು
  • ರನ್ಯಾ ರಾವ್​​​ ದುಬೈಗೆ ಸಾಕಷ್ಟು ಬಾರಿ ಓಡಾಟ ಮಾಡಿದ್ದಾಳೆ
  • ಅಕ್ರಮ ಚಿನ್ನ ಸಾಗಾಟ ಕೃತ್ಯದ ಹಿಂದೆ ದೊಡ್ಡ ಸಿಂಡಿಕೇಟ್
  • ಕೇಸ್​​​ನ ತನಿಖೆ ನಡೆಯುವ ಅಗತ್ಯ, ಸಾಕ್ಷಿ ಕಲೆ ಹಾಕಬೇಕಿದೆ
  • ತನಿಖೆಯಲ್ಲಿ ಅನೇಕ ಸತ್ಯಾಂಶಗಳನ್ನ ಆಕೆ ಬಾಯಿಬಿಟ್ಟಿಲ್ಲ
  • ಸಾಕ್ಷಿನಾಶ ತಡೆಯೋದಕ್ಕೋಸ್ಕರ ಅಕೆಯ ಬಂಧನ ಅಗತ್ಯ

ಈ ಮಧ್ಯೆ ಜಾಮೀನು ಅರ್ಜಿ ವಿಚಾರಣೆ ಇಂದಿಗೆ ಮುಂದೂಡಿಕೆ ಆಗಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆಯನ್ನ ಡಿಆರ್​ಐ ಪರ ವಕೀಲರು ಸಲ್ಲಿಸಲಿದ್ದು, ರನ್ಯಾ ಬೇಲ್​​ ಭವಿಷ್ಯ ಹೊರ ಬೀಳಲಿದೆ.

ಇದನ್ನೂ ಓದಿ:20 ವರ್ಷಗಳ ಬಳಿಕ ಮತ್ತೆ ಜೀವ ಪಡೆದ ನಟಿ ಸೌಂದರ್ಯ ಕೇಸ್.. 6 ಎಕರೆ ಭೂಮಿಗಾಗಿ ದುರಂತ ನಡೆಸಿದ್ರಾ?

publive-image

ಜತಿನ್ ಹುಕ್ಕೇರಿಗೆ ಬಿಗ್​​ ರಿಲೀಫ್​​ ನೀಡಿದ ಹೈಕೋರ್ಟ್​​​!

ಇತ್ತ, ಬಂಧನ ಭೀತಿಯಲ್ಲಿದ್ದ ರನ್ಯಾ ರಾವ್​ ಪತಿ ಜತಿನ್​​ ಹುಕ್ಕೇರಿ ಸೇಫ್​​ ಆಗಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಿದ ಜತಿನ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ, ಪತ್ನಿಯ ಮೇಲಿನ ಆರೋಪಕ್ಕೂ ಜತಿನ್​ಗೂ ಸಂಬಂಧವಿಲ್ಲ. ಡಿಆರ್​ಐ ಸಮನ್ಸ್ ನೀಡಿದಾಗ ತನಿಖೆಗೆ ಸಹಕರಿಸಿದ್ದಾರೆ ಅಂತ ವಾದಿಸಿದರು. ಸದ್ಯ ಹೈಕೋರ್ಟ್​​​, ಕಾನೂನಿನ ಪ್ರಕ್ರಿಯೆ ಪಾಲಿಸದೇ ಬಂಧಿಸದಂತೆ ಆದೇಶ ನೀಡಿದೆ.

ಸ್ಯಾಂಡಲ್​​ವುಡ್​​​​ ನಟಿ ರನ್ಯಾ ನಿವಾಸಕ್ಕೆ ಸಿಬಿಐ ಎಂಟ್ರಿ!

ಇನ್ನು, ಪ್ರಕರಣಕ್ಕೆ ಸಿಬಿಐ ಎಂಟ್ರಿ ಕೊಟ್ಟಿದೆ. ಲ್ಯಾವೆಲ್ಲೆ ರಸ್ತೆಯಲ್ಲಿರುವ ರನ್ಯಾ ರಾವ್ ನಿವಾಸದ ಮೇಲೆ ಸಿಬಿಐ ರೇಡ್​​ ಮಾಡಿದೆ. ನಿನ್ನೆ ಸಂಜೆ 4 ಗಂಟೆಗೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, ಒಂದು ಗಂಟೆ ಕಾಲ ಪರಿಶೀಲನೆ ನಡೆಸಿದ್ದಾರೆ. ಬಂಗಾರದ ಕೋಳಿ ಬೇಟೆ ಆಡಿದ ಡಿಆರ್​ಐ, ಬಂಗಾರದ ಬೆಟ್ಟ ಶೋಧನೆ ಸವಾಲು ಹೊತ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment