/newsfirstlive-kannada/media/post_attachments/wp-content/uploads/2025/02/JAGADISH-SHETTRE.jpg)
ಬೆಂಗಳೂರು: ಏಪ್ರಿಲ್ ಮೊದಲ ವಾರದಿಂದ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ್ ಸಂಚಾರ ಆರಂಭವಾಗಲಿದೆ.
ಸದ್ಯ ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಮಾಡುತ್ತಿದೆ. ಅದನ್ನು ಬೆಳಗಾವಿಯವರೆಗೂ ವಿಸ್ತರಿಸುವ ಕುರಿತು ರೈಲ್ವೇ ಇಲಾಖೆ ಜೊತೆಗೆ ಸಂಸದ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿದ್ದರು. ಕೊನೆಗೂ ಜಗದೀಶ್ ಶೆಟ್ಟರ್ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ.
ಏಪ್ರಿಲ್ ಮೊದಲ ವಾರದಿಂದ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಯಲಿದೆ. ಈಗಾಗಲೇ ಧಾರವಾಡ-ಬೆಳಗಾವಿ ನಡುವೆ ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಲಾಗಿದೆ. ವಂದೇ ಭಾರತ್ ರೈಲು ಬೆಳಗಾವಿ ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೇ ಇಲಾಖೆ ವ್ಯವಸ್ಥೆ ಮಾಡುತ್ತಿದೆ.
ಇದನ್ನೂ ಓದಿ: ಹೊಸ ಗೆಟಪ್ನಲ್ಲಿ ದತ್ತಾ ಬಾಯ್; ನಟ ವಿಜಯ್ ಸೂರ್ಯ ಲುಕ್ಗೆ ಫ್ಯಾನ್ಸ್ ಏನಂದ್ರು?
ಒಮ್ಮೆ ನಿಲ್ದಾಣಕ್ಕೆ ಬಂದೋಬಸ್ತ್ ಆದ ಕೂಡಲೇ ಸಂಚಾರ ಆರಂಭವಾಗಲಿದೆ. ಅಮೃತ್ ಯೋಜನೆಯಡಿಯಲ್ಲಿ ಬೆಳಗಾವಿಯ ರೈಲ್ವೇ ನಿಲ್ದಾಣ ನವೀಕರಣ ನಡೆಯುತ್ತಿದೆ. ನವೀಕರಣದ ಕಾರ್ಯದ ಮಧ್ಯೆದಲ್ಲೇ ಬೆಳಗಾವಿ ಜನತೆಗೆ ಗುಡ್ನ್ಯೂಸ್ ಸಿಕ್ಕಿದೆ. 20661 ಮತ್ತು 20662 ಸಂಖ್ಯೆಯ ವಂದೇ ಭಾರತ್ ರೈಲು, ಬೆಂಗಳೂರು-ಬೆಳಗಾವಿ ನಡುವೆ ಸಂಚಾರ ನಡೆಸಲಿದೆ.
ಇದನ್ನೂ ಓದಿ: ರಾಜಕೀಯದಲ್ಲಿ ಒಂದು ನೈಟ್ ಅಲ್ಲಿ ಏನ್ ಬೇಕಾದ್ರೂ ಆಗಬಹುದು.. ದೆಹಲಿ ಯಾತ್ರೆಗೂ ಮುನ್ನ ಡಿಕೆಶಿ ಅಚ್ಚರಿ ಹೇಳಿಕೆ
ಶೀಘ್ರದಲ್ಲಿಯೇ ಬೆಳಗಾವಿ ಜನತೆಗೆ ಸಿಹಿ ಸುದ್ದಿ ದೊರೆಯಲಿದೆ
ಬೆಳಗಾವಿ ಜನರ ಬಹುದಿನಗಳ ಬೇಡಿಕೆಯಾದ ಬೆಂಗಳೂರು - ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸುವ ಕುರಿತು ಈಗಾಗಲೇ ಸನ್ಮಾನ್ಯ ಪ್ರಧಾನಿಗಳಾದ ಶ್ರೀ @narendramodi , ಕೇಂದ್ರ ರೈಲ್ವೆ ಸಚಿವರಾದ ಶ್ರೀ @AshwiniVaishnaw , ಕೇಂದ್ರ ರೈಲ್ವೆ ರಾಜ್ಯ… pic.twitter.com/eYOBfhUzBM— Jagadish Shettar (@JagadishShettar) February 10, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ